Monday 23 January 2012

ಮಕ್ಕಳ ಮೇಲೆ ಇಂಗ್ಲೀಷ್ ಕಲಿಕೆ ಹೇರುವುದು ಬೇಡ:




www.vijaykarnatakaepaper.com/svww_zoomart.php?Artname=20120123a_012101005&ileft=256&itop=860&zoomRatio=130&AN=20120123a_012101005

 ಸ್ವಾಮಿನಾಥನ್ ಅಯ್ಯರ್ ಎಂಬ ಲೇಖಕರು ವಿ.ಕ (೨೩/೧/೧೨) "ಮಕ್ಕಳ ಮೇಲೆ ಇಂಗ್ಲೀಷ್ ಕಲಿಕೆ ಹೇರುವುದು ಬೇಡ" ಎಂಬ ಲೇಖನದಲ್ಲಿ ಅಂತರಾಷ್ತ್ರೀಯ ಸಂಸ್ಥೆಯೊಂದು ವಿದ್ಯಾರ್ಥಿಗಳ ಕಲಿಕಾಶಕ್ತಿಯ ಕುರಿತು ೭೩ ದೇಶಗಳಲ್ಲಿ ಒಂದು ಅಧ್ಯಯನ ಮಾಡಿದೆ, ಅದರಲ್ಲಿ ನಮ್ಮ ಭಾರತ ೭೨ನೆಯ ಸ್ಥಾನವನ್ನು ಪಡೆದಿದೆ ಎಂಬ ವರದಿಯ ಬಗ್ಗೆ ತಿಳಿಸಿರುತ್ತಾರೆ. ಮುಂದುವರೆಯುತ್ತಾ ೫ನೆಯ ತರಗತಿಯ ವಿದ್ಯಾರ್ಥಿ ಕನಿಷ್ಟ ೨ನೆಯ ತರಗತಿಯ ಪಠ್ಯವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಪಡೆದಿಲ್ಲ ಎಂಬುದನ್ನು ತಿಳಿಸಿದೆ ಎಂದೂ ಹೇಳಿರುತ್ತಾರೆ. ಮೂರನೆಯ ತರಗತಿಯ ವಿದ್ಯಾರ್ಥಿಗಳು ಸುಲಭವಾದ ಕೂಡು/ಕಳೆಯುವ ಲೆಕ್ಕವನ್ನು ಮಾಡಲೂ ಸಮರ್ಥರಲ್ಲ ಎಂದೂ ವರದಿಯಲ್ಲಿ ಹೇಳಿದೆ ಎಂಬುದನ್ನೂ ತಿಳಿಸಿರುತ್ತಾರೆ. ೨೦೧೦ರಲ್ಲಿ ೩೬.೩ರಷ್ಟು ವಿದ್ಯಾರ್ಥಿಗಳು ಸಮರ್ಥರಾಗಿದ್ದರೆ ೨೦೧೧ರಲ್ಲಿ ೨೯.೯ಕ್ಕೆ ಕುಸಿದಿದ್ದಾರೆ.  ಇದರ ಅರ್ಥ ಭಾರತದಲ್ಲಿ ವಿದ್ಯಾರ್ಥಿಗಳ ಗುಣಮಟ್ಟ ಹೇಗೆ ಕುಸಿಯುತ್ತಿದೆ ಎಂದು ಅರ್ಥ ವಾಗುತ್ತದೆ. ಖಾಸಗಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಪ್ರಮಾಣ ೧೮.೭ ರಿಂದ ೨೫.೬ ಎರಿದೆ ಮತ್ತು ೨೬ ರಷ್ಟು ವಿದ್ಯಾರ್ಥಿಗಳು ಮನೆ ಪಾಠಗಳಿಗೆ ಹೊಗುತ್ತಾರೆ.  ಅದರೊ ಸಹ ಶೈಕ್ಶಣಿಕ ಗುಣಮಟ್ಟದಲ್ಲಿ ಬೆಳವಣಿಗೆಯಾಗುತ್ತಿಲ್ಲ ಎಂಬ ಅವರ  ಮಾತುಗಳೂ ಸತ್ಯ.
ಹೀಗಾಗಲು ಎನು ಕಾರಣವಿರಬಹುದೆಂಬುದನ್ನೂ ಅವರು ಊಹಿಸಿ ಹೀಗೆ ಹೇಳುತ್ತರೆ "ತಮ್ಮ ಮಾತೃಭಾಷೆಯಲ್ಲಿ ಸುಲಭವಾಗಿ ಓದಬಲ್ಲ ಮಕ್ಕಳು, ನಂತರದ ದಿನಗಳಲ್ಲಿ ಸುಲಭವಾಗಿ ಇಂಗ್ಲೀಷ್ ಕಲಿಯಬಲ್ಲರು.  ಇಂತಹ ಪ್ರಯೋಗವು ಜಾಂಬಿಯಾ ದೇಶದಲ್ಲಿ ಯಶಸ್ವಿಯಾಗಿದೆ. ಮಾತೃಭಾಷೆಯಿಂದ ಶಿಕ್ಷಣವನ್ನು ಮೊದಲು ಆರಂಬಿಸಿ, ಆನಂತರ ಇಂಗ್ಲೀಷ್ ಕಲಿಕೆಯನ್ನು ಜಾರಿಗೊಳಿಸಬೇಕು. ಅಕಾಲಿಕವಾಗಿ ಇಂಗ್ಲೀಷನ್ನು ಕಲಿಸುತ್ತಿರುವುದು ಮಕ್ಕಳ ಶೈಕ್ಷಣಿಕ ಮಟ್ಟ ಕುಸಿಯಲು ಕಾರಣವಾಗುತ್ತಿದೆ" ಎಂಬ ಸಂದೇಹವನ್ನು ಅವರು ವ್ಯಕ್ತಪಡಿಸುತ್ತಾರೆ. ಪೋಷಕರೇ ನಿಮಗೆ ಕೇಳಿಸುತ್ತಿದೆಯೇ? ಸರ್ಕಾರಕ್ಕಂತೂ ಬುದ್ದಿ ಬರುವುದಿಲ್ಲ ಯಾರು ಹೇಳಿದರೂ.  ನೀವಾದರೂ ಅರ್ಥಮಾಡಿಕೊಳ್ಳಿ.

ಕ್ಯಾಂಪಸ್ ನಲ್ಲಿ ಕನ್ನಡ:



www.vijaykarnatakaepaper.com/svww_zoomart.php?Artname=20120123l_003101001&ileft=46&itop=97&zoomRatio=130&AN=20120123l_003101001

ವಿ.ಕ (೨೩/೧/೧೨) ರ ಲವಲವಿಕೆ ಪತ್ರಿಕೆಯಲ್ಲಿ ಶೀಲಾ ಸಿ.ಶೆಟ್ಟಿ ಅವರ "ಕ್ಯಾಂಪಸ್ ನಲ್ಲಿ ಕನ್ನಡ" ಲೇಖನದಲ್ಲಿ ಶ್ರೀ.ಶ್ರೀನಿವಾಸ ಪ್ರಸಾದ್ ಅವರ ಕನ್ನಡ ಪ್ರೇಮವನ್ನು ತಿಳಿಸಿಕೊಟ್ಟಿರುತ್ತಾರೆ. ಅವರಿಗೆ ನಮ್ಮ ಧನ್ಯವಾದಗಳು. ಇದೇ ಅಲ್ಲವೇ ನಿಜವಾದ ಕನ್ನಡದ ಕಳಕಳಿ. ಇದೇ ಅಲ್ಲವೇ ನಮ್ಮ ಕನ್ನಡಿಗರು ಮಾಡಬೇಕಿರುವುದು. ಶ್ರೀಯುತರು ಸುಮಾರು ೨೫,೦೦೦ ಕ್ಕೂ ಹೆಚ್ಚು ಪರಭಾಷಿಕರಿಗೆ ಕನ್ನಡವನ್ನು ಸುಮಾರು ೨೫ ವರ್ಷಗಳಿಂದ ಕಲಿಸುತ್ತಿರುವುದನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು. ಅವರಿಗೆ ನನ್ನ ಧನ್ಯವಾದಗಳು. ವಿಜ್ನಾನಿಗಳಿಗೆ, ಬ್ಯಾಂಕ್ ಅಧಿಕಾರಿಗಳಿಗೆ, ಸೇನಾಧಿಕಾರಿಗಳಿಗೆ, ಹೀಗೆ ಸಾವಿರಾರು ಪರಭಾಷಿಕರಿಗೆ ಕನ್ನಡವನ್ನು ಕೇವಲ ೩ ತಿಂಗಳ ಅವಧಿಯಲ್ಲಿ ಕಲಿಸಿರುವುದು ಬಹಳ ಹೆಮ್ಮೆಯ ಸಂಗತಿ.  ಶ್ರೀಯುತರು "ಕನ್ನಡದ ಸೇವೆ ಎಂದರೆ ಕೇವಲ ಕನ್ನಡಕ್ಕಾಗಿ ಧ್ವನಿ ಎತ್ತಿ ಹೋರಾಡುವುದಲ್ಲ. ನಮ್ಮ ಸುತ್ತಮುತ್ತಲಲ್ಲಿ ಕನ್ನಡ ವಾತಾವರಣವನ್ನು ನಿರ್ಮಿಸುವುದು, ಭಾಷೆ ಕೆಲಿಸಿ, ಬೆಳೆಸುವುವುದು ಮುಖ್ಯ" ಎಂಬ ಮಾತುಗಳನ್ನು ಹೇಳಿರುತ್ತಾರೆ. ನಿಜವಾಗಲೂ ಇದು ಸತ್ಯವಾದ ಮಾತು.  ಇಲ್ಲಿ ಬರುವ ಸಾವಿರಾರು ಪರಭಾಷಿಕರಿಗೆ ಕನ್ನಡವನ್ನು ಕಲಿಸಿ, ಕನ್ನಡದ ಕಥೆ, ಕಾದಂಬರಿ, ನಾಟಕ, ಚಲನಚಿತ್ರ, ಜಾನಪದ, ಸಾಹಿತ್ಯ, ಸಂಗೀತ,  ಹೀಗೆ ನಮ್ಮ ಸಂಸ್ಕ್ರುತಿಯನ್ನು ಪರಿಚಯಿಸಿ ನಮ್ಮವರನ್ನಾಗಿ ಮಾಡಿಕೊಳ್ಳಬಹುದಲ್ಲವೇ.  ಈ ಲೇಖನವನ್ನು ಓದುತ್ತಿರುವಾಗ ನನಗೆ ಒಂದು ಯೋಚನೆ ಬಂತು. ಅದೇನೆಂದರೆ ನಾವು ಪರಭಾಷಿಕರಿಗೆ  ಗಣಕ ಯಂತ್ರ, ಸಿ.ಡಿ/ಡಿ.ವಿ.ಡಿ ಮೂಲಕವೂ ಕನ್ನಡವನ್ನು ಕಲಿಸಬಹುದಲ್ಲವೇ. www.flipkart.com/books/8122300367?_l=OroMg1KV5h7GydKPRNIZ+w--&_r=fTwBL7a+AEToNw+d5eCuYA--&ref=b1395370-b924-4b02-9135-c795b6b760ea ಅವರು ತಮ್ಮ ತಮ್ಮ ಮನೆ/ಕಛೇರಿಯಲ್ಲಿ ಕುಳಿತೇ ಕನ್ನಡ ಭಾಷೆಯನ್ನು ಕಲಿಯಬಹುದಲ್ಲವೇ. ಇದನ್ನು ಟಿ.ವಿ ಯಲ್ಲೂ ಸಹ ಪ್ರಸಾರ ಮಾಡಿ ಒಮ್ಮೆಗೇ ಸಾವಿರಾರು ಪರಭಾಷಿಕರಿಗೆ ಉಚಿತವಾಗಿ ಕನ್ನಡವನ್ನು ಕಲಿಸಬಹುದಲ್ಲವೇ? 

Thursday 19 January 2012

ಗಾಂಚಲಿ ಬಿಡಿ ಕನ್ನಡ ಮಾತಾಡಿ:

ಮ್ಮುಖ್ಯವಾಗಿ ಈ ವಿಷಯ ಇಲ್ಲಿ ಪ್ರಸ್ತಾಪ ಮಾಡುವ ಕಾರಣ ಎನೆಂದರೆ ನಮ್ಮ ಕನ್ನಡಿಗರಲ್ಲಿ ಕೆಲವರು ಇಲ್ಲಿ ಹುಟ್ಟಿ ಬೆಳೆದು ದೊಡ್ಡವರಾಗಿ ಬೇರೆ ರಾಜ್ಯಗಳಲ್ಲಿ/ವಿದೇಶಗಳಲ್ಲಿ ನೆಲೆಸಿ ಹಣ, ಕೀರ್ತಿ, ಗೌರವ ಸಂಪಾದಿಸಿದವಾರಿದ್ದರೆ. ಅದರಲ್ಲಿ ಅನೇಕರು ಎಲ್ಲೇ ಹೋದರೂ ಕನ್ನಡವನ್ನು ಮರೆಯದೆ ನಾವು ಮೊದಲು ಕನ್ನಡಿಗರೇ.  ಎಲ್ಲಾದರೂ ಇರು, ಎಂತಾದರೂ ಇರು ಮೊದಲು ಕನ್ನಡಿಗನಾಗಿರು ಎಂಬ ಕವಿವಾಣಿಯಯನ್ನು ಮರೆಯದೆ ನಿಜ ಜೀವನದಲ್ಲೂ ಹಾಗೆ ನಡೆದುಕೊಂಡವರಾಗಿದ್ದಾರೆ. ಉದಾಹಾರಣೆಗೆ ರಜನಿಕಾಂತ್, ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ, ದೀಪಿಕಾ ಪಡುಕೊಣೆ, ಅನುಷ್ಕಾ ಶರ್ಮ, ಅನುಷ್ಕಾ ಶೆಟ್ಟಿ,  ಪ್ರಭುದೇವ, ಸುಮನ್ ರಂಗನಾಥ್, ಸುಮನ್, ಅರ್ಜುನ್ ಸರ್ಜ,  ರವಿಶಾಸ್ತ್ರಿ, ಡಾ.ನೀರಜ್ ಪಾಟೀಲ್ (ಮಹಾ ಪೌರರು-ಲಂಡನ್ ನಗರ) ಪ್ರಕಾಶ್  ರೈ, ಚರಣ್ ರಾಜ್ ಮುಂತಾದವರು ನಮ್ಮ ಕನ್ನಡಿಗರು.  ಅವರಲ್ಲಿ ಕೆಲವರು ಇಲ್ಲಿಗೆ ಬಂದಾಗ ಕನ್ನಡದಲ್ಲಿ ಮಾತನಾಡಿದರೆ ನಮಗೆ ಎಲ್ಲಿ ಲಕ್ವ ಹೊಡೆಯುವುದೊ ಎಂದು ಭಾವಿಸುತ್ತಾರೆ.  ಕನ್ನಡ ಬಂದರೂ ಮಾತನಾಡದೆ ಅಗೌರವ ತೊರಿಸುತ್ತಾರೆ. ಆದರೆ ನಮ್ಮ ರಜನಿಕಾಂತ್, ಅರ್ಜುನ್ ಸರ್ಜ, ಪ್ರಕಾಶ್ ರೈ, ಸುಮನ್ ರಂಗನಾಥ್, ಸುಮನ್, ಪ್ರಭುದೇವ, ಚರಣ್ ರಾಜ್ ಅವರುಗಳು ಇಲ್ಲಿಗೆ ಬಂದಾಗ ನಮ್ಮ ಕನ್ನಡದಲ್ಲಿ ಮಾತಾಡಿ ಅವರ ಅಭಿಮಾನವನ್ನು ತೊರಿಸುತ್ತಾರೆ.  ಇಲ್ಲಿಯೂ ಸಹ ನಮ್ಮ ಕನ್ನಡ ಚಿತ್ರಗಳಲ್ಲಿ ನಟಿಸುತ್ತಾರೆ ಕೂಡ.  ಅರ್ಜುನ್ ಸರ್ಜ, ಪ್ರಕಾಶ್ ರೈ ಅಂತಹವರು ನಮ್ಮ ಕನ್ನಡ ಚಿತ್ರಗಳಲ್ಲಿ ನಟಿಸುವುದಷ್ಟೇ ಅಲ್ಲದೇ ನಿರ್ಮಿಸಿ ನಿರ್ದೇಶನವನ್ನೂ ಮಾಡಿರುತ್ತಾರೆ.   ಐಶ್ವರ್ಯ ರೈ ಇಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಬಂದಾಗ ಕೆಟ್ಟ ಕನ್ನಡದಲ್ಲಿ ಮಾತನಾಡಿರುವುದನ್ನು ನೀವೆಲ್ಲಾ ನೋಡಿದ್ದೀರ. www.youtube.com/watch?v=F0kqNwNQYYY) ದೀಪಿಕಾ ಪಡುಕೊಣೆಯಂತೂ ತಮ್ಮ ಮೊದಲ ಚಿತ್ರ ಕನ್ನಡದ ಐಶ್ವರ್ಯ ಎಂಬುದನ್ನು ಎಲ್ಲಾದರೂ ಹೇಳಿರುವುದನ್ನು ಕೇಳಿದ್ದೀರಾ ಸ್ನೇಹಿತರೆ.  ಇವರಿಗೆಲ್ಲಾ ನಮ್ಮ ಧಿಕ್ಕಾರ.  ಇಂತಹದವರಿಗೆ ಹೇಳುವುದು ಗಾಂಚಲಿ ಬಿಡಿ   ಕನ್ನಡದಲ್ಲಿ ಮಾತಾಡಿ ಎಂದು. (ಈ ಹೆಸರಿನಲ್ಲಿ ನಮ್ಮ ಸ್ನೇಹಿತರ  gaanchalibidi kannadadallli maataadi ಎಂಬ ಫ಼ೇಸ್ ಬುಕ್ ಇದೆ).  ನಮ್ಮ ಡಾ.ನೀರಜ್ ಪಾಟೀಲ್ ಅವರಂತೂ ನಮ್ಮ ಹೆಮ್ಮೆಯ ಕನ್ನಡಿಗರೇ ಸರಿ.  ಅವರು ಬಂದು ಕನ್ನಡದಲ್ಲಿ ಮಾತನಾಡುವುದೇನು, ಹಾಡು ಹೇಳುವುದೇನು ಅದನ್ನು ನೊಡುವುದೆ ನಮ್ಮ ಸೌಭಾಗ್ಯ.  ಇನ್ನು  ರಜಿನಿಕಾಂತ್ ಇಲ್ಲಿಗೆ ಬಂದಾಗ ಕನ್ನಡದ ಚಿತ್ರಗಳನ್ನು ಚಲನಚಿತ್ರ ಮಂದಿರಗಳಲ್ಲಿ ನೊಡುತ್ತಾರೆ.  ಅವರ ಸ್ನೇಹಿತರೊಂದಿಗೆ ಕನ್ನಡದಲ್ಲಿ ಮಾತನಾಡುತ್ತಾರೆ. ಕನ್ನಡದಲ್ಲಿ ಪತ್ರ ಬರೆಯುತ್ತಾರೆ, ಕನ್ನಡದ ಕಾದಂಬರಿಯನ್ನು ಓದುತ್ತಾರೆ.  ಕನ್ನಡದ ಬಗ್ಗೆ ಇನ್ನೂ ಪ್ರೀತಿ, ವಿಶ್ವಾಸ, ಅಭಿಮಾನ ಹೊಂದಿರುವ ರಜನಿಯನ್ನು ಬೇರೆ ಕಲಾವಿದರು ನೋಡಿ ಕಲಿಯುವುದು ಬಹಳಷ್ಟು ಇದೆ. ರಜನಿಯವರು ಈಗ ಮನೆಯಲ್ಲಿ ಹೆಂಡತಿ ಮಕ್ಕಳ ಹತ್ತಿರ ಯಾವ ಭಾಷೆಯಲ್ಲಿ ಮಾತನಾಡುತ್ತರೆ ಎಂಬ ಕುತೂಹಲ ಎಲ್ಲರಂತೆ ನನಗೊ ಇದೆ.   ನಾನು ಕನ್ನಡದಲ್ಲಿ ನಟಿಸುವೆ.  ಒಳ್ಳೆ ಕಥೆ ತನ್ನಿ ಎಂದು ಅನೇಕ ಬಾರಿ ಹೇಳಿರುತ್ತಾರೆ.  "ದಳವಾಯಿ ಮುದ್ದಣ್ಣ" ಎಂಬ ಚಿತ್ರದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸುತ್ತಾರೆ.  .  ನಮ್ಮ ನಿಮಾ೯ಪಕರಾದ ದ್ವಾರಕೀಶ್, ಮುನಿರತ್ನಂ, ಕೊಬ್ರಿ ಮಂಜ, ರಾಕ್ಲೈನ್ ವಂಕಟೇಶ್ ಮನಸ್ಸು ಮಾಡಿದರೆ ಕನ್ನಡದಲ್ಲಿ ರಜನಿಕಾಂತ್ ಚಿತ್ರ ಬರುವುದು ಅಸಾಧ್ಯವೇನಲ್ಲ ಎಂದು ನನ್ನ ಭಾವನೆ. ಅವರೇ ಆದನ್ನು ನಿರ್ಮಾಣ ಮಾಡಿದರೆ ನಮಗೆ ಇನ್ನೂ ಸಂತೋಷವಾಗುತ್ತದೆ  www.youtube.com/watch?v=R6a7GlFNO48
ಇನ್ನು ಬೇರೆ ಭಾಷೆಯವರಾದಾರೂ ಕಮಲ್ ಹಾಸನ್, ಇಳೆಯರಾಜ, ಎಸ್.ಪಿ.ಬಾಲಸುಬ್ರಮಣ್ಯಂ, ಶರತ್ ಕುಮಾರ್ ಮುಂತಾದವರು ಇಲ್ಲಿಗೆ ಬಂದಾಗ ಕನ್ನಡದಲ್ಲಿ ಮಾತನಾಡಿ ನಮ್ಮ ಮನಸ್ಸನ್ನು ಗೆದ್ದಿದ್ದಾರೆ.   ಇದೆಲ್ಲಾ ಸರಿ, ಆದರೆ ಇಲ್ಲೇ ಹುಟ್ಟಿ, ಬೆಳೆದು ದೊಡ್ಡವರಾದ  ಕೆಲ ಕನ್ನಡ ಮಾತಾಡುವ ಕನ್ನಡಿಗರು ಒಳ್ಳೆ ಹೆಸರು, ಹಣ, ಕೀರ್ತಿ ಗಳಿಸಿದ ತಕ್ಷಣ ಕನ್ನಡವನ್ನು ಮರೆತು ಕನ್ನಡಕ್ಕೆ ದ್ರೊಹ ಮಾಡುವವರಿದ್ದಾರಲ್ಲಾ? ಇವರಿಗೆ ನಾವು ಹೇಳುವುದು ಗಾಂಚಲಿ ಬಿಡಿ, ಕನ್ನಡದಲ್ಲಿ ಮಾತಾಡಿ ಎಂದು. ನಾವು ಕನ್ನಡಿಗರೇ ಅಲ್ಲ ಅಂತ ಹೇಳಿಕೊಳ್ಳುದ ಒಂದು ವರ್ಗ ಇದೆ. ಅವರಿಗೆ ಕನ್ನಡದ ನೆಲ, ನೀರು, ಗಾಳಿ ಎಲ್ಲಾ ಬೇಕು. ಕನ್ನಡ ಮಾತ್ರ ಬೇಡ.  ನಮ್ಮ ಹೆಮ್ಮೆಯ ಗೋಡೆ ಎಂದು ಕರೆಸಿಕೊಳ್ಳುವ ರಾಹುಲ್ ದ್ರಾವಿಡ್ ಕನ್ನಡದಲ್ಲಿ ಮಾತನಾಡಿರುವುದನ್ನು ಕೇಳಿರುವಿರಾ? www.youtube.com/watch?v=964MqQqeMAk  ಇದು ಒಬ್ಬರು ಹೇಳಿಕೊಡುವ ವಿಷಯವಲ್ಲ.  ಅದು ಹೃದಯದಲ್ಲಿ ಇರಬೇಕು.  ಇದು ನಾವು ನಮ್ಮ ಭಾಷೆಗೆ ಕೊಡುವ ಗೌರವ, ಸಮ್ಮಾನ.  ಇದು ಕೇವಲ ಕಲಾವಿದರಿಗೆ ಮಾತ್ರ ಅನ್ವಯಿಸುವುದಿಲ್ಲ.  ಎಲ್ಲಾ ಕ್ಷೇತ್ರದ ಜನರಿಗೂ ಅನ್ವಯಿಸುವ ಮಾತು. ಇದೆಲ್ಲಾ ನೋಡಿದರೆ ನನಗೆ ಒಂದೊಂದು ಸಲ ಅನ್ನಿಸುತ್ತದೆ. ಇದು ನಮಗೆ ಆ ದೇವರು ಕೊಟ್ಟ ಶಾಪವೊ ಅಂತ. ಯಾಕೆಂದರೆ ನೋಡಿ ಕನ್ನಡದಲ್ಲಿ ಮಾತಾಡಿ, ಕಲಿಯಿರಿ ಅಂತ ನಾವು ನಮ್ಮವರಿಗೆ ಹೇಳಬೇಕಾಗಿದೆಯಲ್ಲ.



Friday 13 January 2012

ಠಾಕ್ರೆ ಅಜ್ಜನಿಗೊಂದು ಪತ್ರ:

ಅಜ್ಜಾ ಹೇಗಿದ್ದೀರಾ? ಚೆನ್ನಾಗಿದ್ದೀರಾ? ನಿಮ್ಮ ಆರೋಗ್ಯ ಹೇಗಿದೆ? ಮೊದಲು ನಿಮಗೆ ನಮ್ಮ ಪ್ರೀತಿಯ ನಮಸ್ಕಾರಗಳು. ತುಂಬಾ ದಿನಗಳಿಂದ ನಿಮಗೊಂದು ಪತ್ರವನ್ನು ಬರೆಯಬೇಕೆಂಬ ಆಸೆ ಇತ್ತು. ಕಾಲ ಕೂಡಿ ಬಂದಿರಲಿಲ್ಲ.  ಈಗ ಬಂದಿದೆ. ಎನಜ್ಜ, ನೀವು ಆ ಎಮ್.ಎಮ್.ಎಸ್ ನವರಿಗಂತೂ ಬುದ್ದಿ ಇಲ್ಲ ಅದು ಎಲ್ಲರಿಗೂ ಗೊತ್ತಿರುವ ವಿಷಯ. ನೀವು ಅವ್ರಿಗೆ ಸ್ವಲ್ಪ ಬುದ್ದಿ ಹೇಳಬಾರದ. ನೀವು ಹಿರಿಯರು. ಎಲ್ಲಾನೂ ತಿಳಿದುಕೊಂಡಿರುವವರು. ಲೋಕಜ್ನಾನ ಹೊಂದಿರುವವರು. ಅವರಿಗೆ ನೀವು ಒಂದು ಸಾರಿ ಗದರಿ. ಮರಾಠಿಗರು ಬೆಳಗಾವಿಯಲ್ಲಿ ಗಲಾಟೆಮಾಡದೆ ಕನ್ನಡಿಗರ ಹತ್ತಿರ ಹೊಂದಿಕೊಂಡು ಸಖವಾಗಿಬಾಳಿ ಎಂದು ಬುದ್ದಿ ಹೇಳಿ.  ರಾಜ್ ಠಾಕ್ರೆ ಅವರು ಸರಿಯಾಗಿ ಅವರಿಗೆ ಬುದ್ದಿ ಹೇಳಿದ್ದಾರೆ. ನೀವು ಸ್ವಲ್ಪ ಹೇಳಬಾರದೆ. ನಿಮ್ಮ ಮಾತಿಗೆ ಅವರು ಎದುರು ಉಸಿರಾಡಲ್ಲ ಅಂತ ನಮ್ಮ ಭಾವನೆ. ಬೆಳಗಾವಿಯನ್ನು ಕೆಂದ್ರಾಡಳಿತ ಪ್ರದೇಶ ಮಾಡಿ, ಬೆಳಗಾವಿಯನ್ನು ಬೆಳಗಾಂ ಮಾಡಿ, ಬೆಳಗಾವಿ ಯನ್ನು ಮಹರಾಷ್ಟ್ರಕ್ಕೆ ಸೇರಿಸಿ ಅಂತ ಸುಮ್ಮನೆ ಕೂಗು ಎಬ್ಬಿಸುವುದು ಎಷ್ಟು ಸರಿ ನೀವೇ ಹೇಳಿ. ಅವರು ಹೆಳ್ತಾರೆ ಅಂತ ಮಾಡುವುದಕ್ಕಾಗತ್ತಾ. ನಿಮ್ಮ ಮುಂಬೈನಲ್ಲೇ ಮರಾಠಿಯ ಜೊತೆ ಕನ್ನಡ, ತೆಲುಗು, ತಮಿಳು, ಹಿಂದಿ, ಗುಜರಾತಿ, ರಾಜಾಸ್ತಾನಿ ಹೀಗೆ ಅನೇಕ ಭಾಷೆಗಳನ್ನು ಆಡುವ ಜನರಿದ್ದಾರೆ.  ಹಾಗಂತ ಮುಂಬೈಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವುದಕ್ಕೆ ಆಗತ್ತಾ? ಮುಂಬೈ ಹೆಸರನ್ನು ಬದಲಾವಣೆ ಮಾಡಕ್ಕೆ ಆಗತ್ತಾ? ಅದು ಅಗಲೂ ಬಾರದು. ಅದು ನಿಮ್ಮ ಜನರಿರುವ ತಾಣ. ನಿಮ್ಮ ಸಂಸ್ಕ್ರುತಿ, ನಿಮ್ಮ ಭಾಷೆಗೆ ಎಲ್ಲರೂ ಗೌರವವನ್ನು ಕೊಡಲೇಬೇಕು.  ಬೆಂಗಳೊರು, ಹೈದರಾಬಾದು. ಚೆನ್ನೈ,  ಡೆಲ್ಲಿ, ಕೊಲ್ಕತ್ತ ಹೀಗೆ ದೊಡ್ಡ ಊರುಗಳಲ್ಲಿ ಎಲ್ಲಾ ಭಾಷೆಗಳನ್ನು ಆಡುವ ಜನರಿರುತ್ತಾರೆ. ಇದು ಸಹಜ ಕೂಡ ಹೌದು. ಹೀಗೆ ಎಲ್ಲರೂ ಗಲಾಟೆಯನ್ನು ಮಾಡುತ್ತಾರ? ಬುದ್ದಿಇರುವವರು ಯಾರು  ಹೀಗೆ ಮಾಡುವುದಿಲ್ಲ. ನಿಮಗೆ ಗೊತ್ತಿರುವಂತೆ ಇತಿಹಾಸವನ್ನು ಕೆದಕಿ ನೋಡಿದರೆ ಇಡೀ ಮಹರಾಷ್ಟ್ರದಲ್ಲಿ ಮೊದಲು ಕನ್ನಡಭಾಷೆಯನ್ನು ಮಾತನಾಡುವವರೇ ಇದ್ದರು. ಇಡೀ ಮಹರಾಷ್ಟ್ರವು ಕನ್ನಡನಾಡಿನ ಭಾಗವಾಗಿತ್ತು.  ಇದು ಬಾಲ ಗಂಗಾಧರರ ಆಭಿಪ್ರಾಯವಾಗಿತ್ತು ನೆನಪಿರಲಿ. ಮರಾಠಿಯಲ್ಲಿ ಅನೇಕ ಕನ್ನಡ ಪದಗಳೊ ಸಹ ಇವೆ. ಈಗಲೂ ನಿಮ್ಮ ಊರಿನಲ್ಲಿ ೧ ಕೋಟಿ ಕನ್ನಡ ಮಾತನಾಡುವವರು ಸಿಗುತ್ತಾರೆ. ನಮ್ಮ ಕನ್ನಡಿಗರು ನಿಮ್ಮ ಭಾಷೆಯನ್ನು ಕಲಿತು, ನಿಮ್ಮ ಸಂಸ್ಕ್ರುತಿಯನ್ನು ನಿಮ್ಮ ಊರಿನಲ್ಲಿ ಆಚರಿಸುತ್ತಿದ್ದಾರೆ. ಅನೇಕ ವ್ಯಾಪಾರ, ವಹಿವಾಟು ಮತ್ತು ರಾಜಕೀಯದಲ್ಲೂ ಇರುವ ಸಂಗತಿ ನಿಮಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಪ್ರತಿ ಸಾರಿ ಚುನಾವಣೆಯಾದಗಲೂ ೭-೮ ಜನ ಕನ್ನಡಿಗರು ನಿಮ್ಮ ಊರಿನಲ್ಲಿ ಆರಿಸಿಬರುತ್ತಾರೆ. ಇದೂ ಸಹ ನಿಮಗೆ ಗೊತ್ತು.  ಅದ್ರೂ ಸಹ ನೀವು ಸುಮ್ಮನಿರುವಿರಿ. ನಿಮ್ಮ ಪಕ್ಷದಲ್ಲು ನಮ್ಮ ಕನ್ನಡಿಗರಿದ್ದಾರೆ. ಅವರು ಹೀಗೆ ನಿಮ್ಮ ಊರಿನಲ್ಲಿ ಗಲಾಟೆಯನ್ನು ಮಾಡುತ್ತಿದ್ದಾರಾ ನೀವೇ ಹೇಳಿ.
ಸಮಸ್ಯೆಯ ಮೂಲ ಇರುವುದು ಇಲ್ಲಿ:
ನೀವು ಮಹಾರಾಷ್ಟ್ರದಲ್ಲಿ ಮರಾಠಿಗೆ ಏನು ತೊಂದರೆ ಅನುಭವಿಸುತ್ತಿದ್ದೀರೋ, ನಾವು ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅದೇ ತೊಂದರೆ ಅನುಭವಿಸುತ್ತಿದ್ದೇವೆ. ನಿಮ್ಮ ಭಾಷೆಗೆ ಕನ್ನಡಯಾವತ್ತೊ ತೊಂದರೆ ಆಗಲ್ಲ. ನಮಗೆ ಮಾರಾಠಿಯಿಂದ ತೊಂದರೆ ಆಗಲ್ಲ. ಮೊದಲು ನಾವು ಇದನ್ನು ಅರ್ಥ ಮಾಡಿಕೊಳ್ಳಬೇಕು. ನಮಗೆ ಈಗ ತೊಂದರೆ ಅಗುತ್ತಿರುವುದು ಅಂಗ್ಲ ಭಾಷೆಯಿಂದ. ಮಕ್ಕಳು ನಮ್ಮ ಭಾಷೆಯನ್ನು ಕಲಿಯುತ್ತಿಲ್ಲ. ನಾವು ನಮ್ಮ ಮಕ್ಕಳನ್ನು ಆಂಗ್ಲ ಭಾಷೆಯ ಶಾಲೆಗೆ ಸೇರುಸುತ್ತಿದ್ದೇವೆ. ಅವರಿಗೆ ನಮ್ಮ ಸಂಸ್ಕ್ರುತಿಯನ್ನು ಹೇಳಿಕೊಡುತ್ತಿಲ್ಲ. ಅವರು ಬೇರೆ ಸಂಸ್ಕ್ರುತಿಯನ್ನು ಅವರ ಜೀವನದಲ್ಲಿ ಅಳವಡಿಸಿಕೊಳ್ಳಲು ಹೊರಟಿದ್ದಾರೆ. ಇದು ಕೇವಲ ನಮ್ಮ ಎರಡು ರಾಜ್ಯಗಳ ಸಮಸ್ಯೆ ಅಲ್ಲ.  ಇದು ಈಗ ಇಡೀ ಭಾರತವನ್ನು ಹಬ್ಬುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ಆಂಗ್ಲ ಭಾಷೆಯ ಶಾಲೆಗಳು ಹುಟ್ಟಿಕೊಳ್ಳೂತ್ತಿವೆ. ಆ ರಾಜ್ಯಗಳ ಭಾಷೆಯ ಶಾಲೆಗಳು ಮುಚ್ಚಿಕೊಳ್ಳೂತ್ತಿವೆ. ನಿಜವಾದ ಸಮಸ್ಯೆ ಇರುವುದು ಇಲ್ಲಿ. ಈಗ ನಾವು ನೀವು ಎಲ್ಲಾರು ಸೇರಿಮಾಡಬೇಕಾದ ಕೆಲಸವೇನೆಂದರೆ ಪ್ರತಿ ರಾಜ್ಯದಲ್ಲೂ ಆ ರಾಜ್ಯಭಾಷೆಯಲ್ಲಿ ಮಕ್ಕಳಿಗೆ ಕನಿಷ್ಟ ೧೦ನೆ ತರಗತಿಯವರೆಗೂ ಶಿಕ್ಸಣ ದೊರಕುವಂತಾಗಬೇಕೆಂದು ಕಾನೂನು ರಚಿಸಿ ಅದರಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಇಲ್ಲವಾದಲ್ಲಿ ಕನ್ನಡವೂ ಉಳಿಯುವುದಿಲ್ಲ., ಮರಾಠಿಯೂ ಊಳಿಯುವುದಿಲ್ಲ. ತೆಲುಗು, ತಮಿಳು, ಗುಜರಾತಿ, ಮಲೆಯಾಳಂ, ಹಿಂದಿಯೂ ಉಳಿಯುವುದಿಲ್ಲ ಯಾವ  ಭಾಷೆಯೂ ಉಳಿಯುವುದಿಲ್ಲ ಕಾಲಾಂತರದಲ್ಲಿ ಆಂಗ್ಲ ಭಾಷೆಯನ್ನು ಹೊರೆತುಪಡಿಸಿ.
ನಾವುಗಳು ನಮ್ಮ ನಮ್ಮ ಭಾಷೆಯನ್ನು ಈಗ ಉಳಿಸಿ ಮತ್ತು ಬೆಳಿಸಿಕೊಳ್ಳೂವ ಕಾಲ ಬಂದಿದೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸಾಹಿತಿಗಳು, ವಿದ್ವಾಂಸರು, ಗುರು ಹಿರಿಯರು, ನಾಡಿನ ಬುದ್ದಿಜೀವಿಗಳು, ತಂದೆ ತಾಯಂದಿರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಕಲಾವಿದರು, ಕಾರ್ಮಿಕರು ಮತ್ತು ಸಮಾಜದ ಎಲ್ಲಾ ನಾಗರೀಕರು ಕುಳಿತು ಯೋಚಿಸುವ ವಿಷಯವಾಗಿದೆ.
ಇಂದು ಆಂಗ್ಲಭಾಷೆ ಕಲಿಸುವ ಕಾನ್ವೆಂಟ್ ಶಾಲೆಗಳಲ್ಲಿ, ಪ್ರಾದೇಶಿಕ ಭಾಷೆಯನ್ನು ಆಡುವ ಮಕ್ಕಳು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಶಾಲೆಯಲ್ಲಿ ಹೆಣ್ಣು ಮಕ್ಕಳು ಹೂ ಮುಡಿಯುವ ಹಾಗಿಲ್ಲ, ಕುಂಕುಮ ಇಡುವ ಹಾಗಿಲ್ಲ, ಹೀಗೆ ನಮ್ಮದಲ್ಲದ ಸಂಸ್ಕ್ರುತಿಯನ್ನು ಅವರ ಪುಟ್ಟ ತಲೆಯಲ್ಲಿ ತುಂಬಲಾಗುತ್ತಿದೆ. ಇದರಲ್ಲಿ ಧಾರ್ಮಿಕ ವಿಚಾರವೂ ಕೊಡ ಕಲೆಹಾಕಿಕೊಂಡಿದೆ.  ಆ ವಿಚಾರ ಪಕ್ಕಕ್ಕಿಟ್ಟು ನೋಡಿದರೂ ಸಹ ಮಕ್ಕಳಿಗೆ ಆಂಗ್ಲಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡಿದರೆ ಹೊಡೆಯುವುದು ಎಷ್ಟು ಸರಿ? ಈ ಮಟ್ಟಕ್ಕೆ ಆ ಶಾಲೆಗಳು ಬೆಳೆದಿವೆ ಎಂದರೆ ಅದಕ್ಕೆ ಯಾರು ಕಾರಣ? ನೀವೆ ಯೋಚಿಸಿ.  ಇದನ್ನು ಬಿಟ್ಟು ನಮ್ಮನಮ್ಮಲ್ಲೇ ಜಗಳ ತರುವಿರಲ್ಲ. ಇದು ತಮ್ಮಂತಹ ಹಿರಿಯರಿಗೆ ಶೋಭೆ ತರುವ ವಿಷಯವಲ್ಲ.
ಅಭಿಮಾನವಿರಲಿ ದುರಭಿಮಾನ ಬೇಡ:
ನಿಮಗೆ ನಮ್ಮ ಗಂಗೂಬಾಯಿ ಹಾನಗಲ್, ಭೀಮಸೇನ ಜೋಷಿ, ಅನಂತಮೂರ್ತಿ, ಕಾರ್ನಾಡ್ ಮುಂತಾದವರ ಬಗ್ಗೆ ಅಭಿಮಾನವಿರುವ ಹಾಗೆ ನಮಗೂ ಸಹ ಸಚಿನ್, ನಾನಾ ಪಾಟೇಕರ್ ಅವರ ಬಗ್ಗೆ ಖಂಡಿತಾ ಆಭಿಮಾನವಿದೆ.  ನಾವು ಇವರನ್ನು ಕನ್ನಡಿಗರು, ಮರಾಠಿಗರು ಅಂತ ಬಂಧಿಸಿಡುವುದು ತಪ್ಪು ಅಲ್ವಾ ತಾತ. ಇವರೆಲ್ಲಾ ನಮ್ಮ ಹೆಮ್ಮಯ ಭಾರತಾಂಬೆಯ ಮಕ್ಕಳು. ಇವರೆಲ್ಲಾ ಈ ದೇಶಕ್ಕೆ ಹೆಮ್ಮೆ. ಗಾಂಧೀಜಿಯವರನ್ನು ನಾವು ಗುಜರಾತಿ ಅಂತ ಒಂದು ಭಾಷೆಗೆ ಒಂದು ರಾಜ್ಯಕ್ಕೆ ಮುಡುಪಿಡುವುದಕ್ಕೆ ಆಗುತ್ತದೆಯೇ.  ನಮ್ಮ ಚಂದ್ರಶೇಖರ ಕಂಬಾರರಿಗೆ ೮ನೆಯ ಜ್ನಾನಪೀಠ ಪ್ರಶಸ್ತಿ ಬಂದಾಗೆ ನೀವುಗಳು ಅವರಿಗೆ ಸನ್ಮಾನಿಸಿ ದೊಡ್ಡವರಾಗಬಹುದ್ದಿತ್ತು.  ಆದರೆ ನೀವು ಅವರಿಗೆ ಒದ್ದು ಸೊಂಟ ಮುರಿಯಿರಿ ಅಂತ ಹೇಳುವಿರಲ್ಲ. ಇದೇನಾ ನಿಮ್ಮ ಮರಾಠಿ ಸಂಸ್ಕ್ರುತಿ.  ಇದೇನಾ ನಿಮ್ಮ ಸಭ್ಯತೆ. ಇದೇನಾ ನಿಮ್ಮ ಭಾರತೀಯತೆ. ನಮ್ಮ ಕಂಬಾರರು ಭಾರತೀಯರಲ್ಲವೇ? ಅವರೇನು ಶತ್ರು ದೇಶದಿಂದ ಬಂದು ಇಲ್ಲಿ ವಿದ್ವಂಸಕ ಕೃತ್ಯ ಮಾಡಿರುವರೇ?
ಬೆಳಗಾವಿ ನಮ್ಮದೇ, ಎಲ್ಲೂ ಹೋಗಲ್ಲ:
ಇನ್ನು ಬೆಳಗಾವಿ ಕರ್ನಾಟಕೆದಲ್ಲಿದ್ದರೆ ನಿಮಗೇನು ನಷ್ಠ. ಅದು ಭಾರತದಲ್ಲಿದೆ ತಾನೇ ಇದೆ. ಹೀಗಿ ಒಂದು ಭಾಷೆಯನ್ನು ಆಡುವ ಜನ ಜಾಸ್ತಿ ಇದ್ದ ಕಾರಣಕ್ಕೆ ಆ ಪ್ರಾಂತ್ಯವನ್ನು ಬೇರೆ ರಾಜ್ಯಕ್ಕೆ, ಬೇರೆ ದೇಶಕ್ಕೆ ಕೊಟ್ಟುಬಿಡುವುದಕ್ಕೆ ಆಗುತ್ತದೆಯೇ? ಹೀಗೆ ಆದರೆ ಮೊದಲು ನೀವು ನಿಮ್ಮ ಮಹರಾಷ್ಟ್ರವನ್ನು ಕಳೆದುಕೊಳ್ಳಬೇಕಾಗುತ್ತದೆ. ಎಚ್ಚರೆ. ಪತ್ರ ಸ್ವಲ್ಪ ದೊಡ್ಡದಾಯಿತು. ಕ್ಷಮೆ ಇರಲಿ ತಾತ. ವಂದನೆಗಳು.

Wednesday 11 January 2012

ಕೀಳರಿಮೆ ಬಿಡೋಣ:

ಮೊದಲು ನಮ್ಮ ಕನ್ನಡಿಗರು ನಮ್ಮಲ್ಲಿರುವ ಕೀಳರಿಮೆಯನ್ನು ಬಿಡಬೇಕು.  ನಾವು ಯಾವುದರಲ್ಲಿಯೂ ಕಡಿಮೆಯಿಲ್ಲ ಎಂಬುದನ್ನು ಮೊದಲು ಅರಿಯಬೇಕು.  ನಮ್ಮಲ್ಲಿ ೮ ಜ್ಣಾನಪೀಠಿಗಳಿದ್ದಾರೆ.  ಇದು ಭಾರತದಲ್ಲೇ ಹಿಂದಿಯನ್ನು ಬಿಟ್ಟರೆ ಅತ್ಯಧಿಕ.  (ಹಿಂದಿ-೯, ಬೆಂಗಾಳಿ-೫, ಮಲೆಯಾಳಂ, ಉರ್ದು-೪, ಗುಜರಾತಿ, ಮರಾಠಿ, ಒರಿಯ-೩, ಅಸ್ಸಾಮಿ, ಪಂಜಾಬಿ, ತಮಿಳು-೨, ತೆಲುಗು, ಕಾಶ್ಮೀರಿ, ಕೊಂಕಿಣಿ, ಸಂಸ್ಕ್ರುತ-೧) (http://en.wikipedia.org/wiki/Kannada) ನಮಗೆ ಇನ್ನೂ ೩-೪ ಜ್ನಾನಪೀಠ ಪ್ರಶಸ್ತಿಗಳು ಬರಬೇಕಿತ್ತೆಂದು ಹಿರಿಯರು, ಕವಿಗಳು, ಜ್ನಾನಿಗಳು ಹೇಳುತ್ತಾರೆ.  (ಅಡಿಗರು,  ತೇಜಸ್ವಿಯವರು, ಡಿ.ವಿ.ಗುಂದಪ್ಪನವರು, ಪು.ತಿ.ನರಸಿಂಹಸ್ವಾಮಿಯವರು ಮತ್ತು ಬೈರಪ್ಪನವರಿಗೆ ಈಗಾಗಲೆ ಒಲಿದು ಬರಬೇಕಾಗಿತ್ತು.)  ನಮಗೆ ಮೂರಾದರೂ ಸಾಹಿತ್ಯ ನೊಬೆಲ್ ಪ್ರಶಸ್ತಿಗಳು ಬರಬೇಕಾಗಿತ್ತೆಂದು ಹೇಳುವವರಿದ್ದಾರೆ.  (ಕುವೆಂಪು ಅವರಿಗೆ, ಮಾಸ್ತಿ ಯವರಿಗೆ ಮತ್ತು ಬೇಂದ್ರೆ ಯವರಿಗೆ)  ಒಬ್ಬರು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸೃತರು.  ೫೫ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಿದ್ದಾರೆ. (೧೯೫೫ ರಲ್ಲಿ ಮೊದಲ ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತರಾದ ಕುವೆಂಪು ಅವರಿಂದ ಹಿಡಿದು ಇತ್ತೀಚಿನ ೨೦೧೧ರ ಗೋಪಾಲಕೃಷ್ಣ ಪೈ ಅವರು) ೧೯೫೭ ಮತ್ತು ೧೯೬೩ ಈ ಎರಡು ವರ್ಷ ಬಿಟ್ಟರೆ ಪ್ರತಿ ವರ್ಷವೂ ಕೇಂದ್ರ ಸಾಹಿತ್ಯ ಪ್ರಶಸ್ತಿ ನಮಗೆ ಬಂದಿದೆ.  ೩ ರಾಷ್ಟ್ರಕವಿಗಳಿದ್ದಾರೆ. (ಗೋವಿಂದ ಪೈ ಅವರು, ಕುವೆಂಪು ಅವರು, ಜಿ.ಎಸ್.ಶಿವರುದ್ರಪ್ಪನವರು)  ಇನ್ನೇನು ಬೇಕು ಸ್ನೇಹಿತರೆ.  ನಾವು ಸಾಹಿತ್ಯ ಲೋಕದಲ್ಲಿ ಭಾರತದಲ್ಲೇ ಪ್ರಥಮ ಸ್ಥಾನದಲ್ಲಿದ್ದೇವೆ.   ಇನ್ನು ಕಲೆ, ಚಲನಚಿತ್ರ, ನಾಟಕ, ರಂಗಭೂಮಿ, ವಚನ ನಾಹಿತ್ಯ, ಗಮಕ, ಜಾನಪದ ಸಾಹಿತ್ಯ, ಭಾವಗಿತೆ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಕ್ರೀಡೆ ಯಾವುದು ಬೇಕು ಸ್ನೇಹಿತರೆ, ಎಲ್ಲಾದರಲ್ಲೂ ಇರುವ ನಾವು ಯಾವುದರಲ್ಲಿ ಕಡಿಮೆ ಇದ್ದೇವೆ ಹೇಳಿ ಆಭಿಮಾನವೊಂದನ್ನು ಬಿಟ್ಟು.  ಇಲ್ಲಿ ನಾನು ಕೆಲವೊಂದು ಮತ್ತು ಕೆಲವರ ಉದಾಹರಣೆಯನ್ನು ಮಾತ್ರ ಕೊಟ್ಟಿದ್ದೇನೆ.  ಅನ್ಯಥಾ ಭಾವಿಸಿಬೇಡಿ.  ಇವೆಲ್ಲಾ ನಮಗೆ ಗೊತ್ತಿರುವ ಸಂಗತಿ.  ಆದರೂ ನಮ್ಮಲ್ಲಿ ಕೆಲವರಿಗೆ ನಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳೂವುದರಲ್ಲಿಯೆ ಆನಂದ.  ಮೊದಲು ನಾವು ನಮ್ಮ ಈ ಕೀಳರಿಮೆಯನ್ನು ಬಿಟ್ಟು ಮುಂದಿನ ಯೋಚನೆಯನ್ನು ಮಾಡೋಣ. ಇಷ್ಟೆಲ್ಲಾ ಇದ್ದೂ ನಾವು ಯಾಕೆ ಹಿಂದುಳಿದ್ದೇವೆ ಎಂದರೆ ನಮ್ಮಲ್ಲಿರುವ ಅಭಿಮಾನ ಶೂನ್ಯವೇ ಎಂದು ನನ್ನ ಭಾವನೆ.  ನೀವು ಎನನ್ನುವಿರಿ ಸ್ನೇಹಿತರೆ.