Sunday 26 February 2012

ಕನ್ನಡದಲ್ಲಿ ಟಿ.ವಿ. ವಾಹಿನಿಗಳ ಭರಾಟೆ:

ಮನರಂಜನೆ ವಿಭಾಗ - ಚಂದನ, ಉದಯ ಟಿ.ವಿ., ಈ ಟಿ.ವಿ, ಜೀ ಕನ್ನಡ, ಕಸ್ತೂ ರಿ,  ಸುವರ್ಣ,  ( ೬ ವಾಹಿನಿಗಳು-) ವಾರ್ತಾ ವಿಭಾಗ - ಟಿ.ವಿ.-೯,  ಸುವರ್ಣ ೨೪ X ೭, ಜನಶ್ರೀ, ಕಸ್ತೂರಿ ನ್ಯೂಸ್, ಉದಯ ವಾರ್ತೆಗಳು, ಸಮಯ, ಪಬ್ಲಿಕ್ ಟಿ.ವಿ. (೭ ವಾಹಿನಿಗಳು-) ಸಂಗೀತ ವಿಭಾಗ - ಉದಯ ಮ್ಯೂಸಿಕ್, ರಾಜ್ ಮ್ಯೂಸಿಕ್ ಕನ್ನಡ (೨) , ಕಾಮಿಡಿ ವಿಭಾಗ - ಉದಯ ಕಾಮಿಡಿ (೧) ಮಕ್ಕಳ ವಿಭಾಗ - ಚಿಂಟು ಟಿ.ವಿ. (೧) ಚಲನಚಿತ್ರಗಳ ವಿಭಾಗ - ಉದಯ ಮೂವೀಸ್, ಐ.ಪಿ.ಟಿ.ವಿ ಕನ್ನಡ ಬೇಡಿಕೆಯಲ್ಲಿ ಮಾತ್ರ (೨) ಭಕ್ತಿ ವಿಭಾಗ - ಶ್ರೀ ಶಂಕರ (೧) ಹೀಗೆ ಸುಮಾರು ೨೦ ವಾಹಿನಿಗಳಿರುವ ಕನ್ನಡದಲ್ಲಿ ಜಾಹೀರಾತು ಮಾರುಕಟ್ಟೆ ಸುಮಾರು ೫೦೦ ಕೋಟಿ ರೂಪಾಯಿಗಳು. (ದಕ್ಷಿಣ ಭಾರತ ೨೭೦೦ ಕೋಟಿ, ಆಧಾರ FICCI-KPMG 2011 PINC Research)  ಈ ಎಲ್ಲಾ ವಾಹಿನಿಗಳು ಹೆಚ್ಚಿನ ಮಟ್ಟಿಗೆ ಮನರಂಜನೆ ಪ್ರಧಾನವಾದ ಕಾರ್ಯಕ್ರಮಗಳನ್ನು ಬಿತ್ತರಿಸುವುದು ಹೆಚ್ಚು. ಅದರಲ್ಲಿ ಚಲನಚಿತ್ರ, ಧಾರವಾಹಿಗಳು ಹೆಚ್ಚು ಸ್ಥಾನವನ್ನು ಆಕ್ರಮಿಸಿಕೊತ್ತವೆ. ಇನ್ನುಳಿದ ವಾರ್ತೆವಿಭಾಗದಲ್ಲಿ ರಾಜಕೀಯ, ಚಲನಚಿತ್ರಗಳ ಸಮಾಚಾರವಿರುವುದು ಹೆಚ್ಚು. ಇದರಲ್ಲಿ ನಾವು ಗಮನವಿರಿಸಬೇಕಾದ ಅಂಶವೆಂದರೆ ಈ ವಾಹಿನಿಗಳೆಲ್ಲರೂ ಕೇವಲ ಹಣ ಮಾಡುವ ಅಂಶಕ್ಕೇ ಹೆಚ್ಚು ಒತ್ತು ಕೊಡುತ್ತಾರೆಯೆ ಹೊರತು ನಮ್ಮ ಭಾಷೆ, ಸಂಸ್ಕೃತಿಯ ಬೆಗ್ಗೆ ಇವರಾರು ತಲೆ ಕೆಡಿಸಿಕೊಳ್ಳುವ ಹಾಗೆ ಕಾಣುವುದಿಲ್ಲ. ಈ ಟಿ.ವಿ ನಮ್ಮ ಕರ್ನಾಟಕದ ಸಂಸ್ಕುತಿ, ಭಾಷೆಯ ಬಗ್ಗೆ ಒಲವು ವ್ಯಕ್ತಪಡಿಸುತ್ತವೆ. ಇತ್ತೀಚಿನ ಟಿ.ಆರ್.ಪಿ ರೇಟಿಂಗ್ ನಲ್ಲಿ ಮನರಂಜನೆಯಲ್ಲಿ ಉದಯ (೫೧.೭೭) ಮೊದಲನೆಯ ಸ್ಥಾನದಲ್ಲಿದ್ದರೆ, ಸುವರ್ಣ ಎರಡನೆಯ ಸ್ಥಾನದೆಲ್ಲಿದೆ. ವಾರ್ತಾವಿಭಾಗದಲ್ಲಿ ಟಿ.ವಿ-೯ (೫೩.೬೨) ಮೊದಲನೆಯ ಸ್ಥಾನ, ಸುವರ್ಣ ೨೪ x 7 ಸುದ್ದಿವಾಹಿನಿ ಎರಡನೆಯ ಸ್ಥಾನದಲ್ಲಿದೆ. ನಮ್ಮ ದೇಶದ ಯಾವುದೇ ಭಾಷೆಯಲ್ಲಿಯೂ ವಾರ್ತಾವಾಹಿನಿಯೊಂದು ೫೩.೬೨ರ ಟಿ.ಆರ್.ಪಿ ರೇಟಿಂಗ್ ಇಲ್ಲ ಅದು ಟಿ.ವಿ.೯ಗೆ ಮಾತ್ರ ಇರುವಂತಹದ್ದು.
ಮುಂಬರುವ ಕನ್ನಡ ವಾಹಿನಿಗಳು - ರಾಜ್ ನ್ಯೂಸ್ ೧೪/೧/೦೯, ಜೀ ಕನ್ನಡ ವಾರ್ತೆಗಳು ೬/೬/೧೧, ಕಸ್ತೂರಿ ನ್ಯೂಸ್ ೨೧/೧೦/೧೦, ಈ ಟಿ.ವಿ ನ್ಯೂಸ್ ಕನ್ನಡ ೨೦/೧೧/೦೧, ಪರ್ಲ್ಸ್ ಕನ್ನಡ ೮/೧೧/೧೧ ಹೀಗೆ ಇನೂ ೫ ಹೊಸ ವಾಹಿನಿಗಳು ನೊಂದಾಯಿಸಲಾಗಿದೆ.
ಅಂತರ್ಜಾಲದಲ್ಲಿ ಉದಯ, ಸುವರ್ಣ, ಸ್ವಯಂಕೃಷಿ, ಸುವರ್ಣ ನ್ಯೂಸ್, ರಾಜ್ ಮ್ಯೂಸಿಕ್, ಜನಶ್ರೀ, ಟಿ.ವಿ.೯, ಸಮಯ, ಶ್ರೀ ಶಂಕರ, ಪುಬ್ಲಿಕ್ ಟಿ.ವಿ.ಗಳು ದೊರೆಯುತ್ತವೆ.
ಈ ವಾಹಿನಿಗಳಲ್ಲಿ ನಮ್ಮ ಕನ್ನಡಿಗರದ್ದು ಎಂದು ನಾವು ಹೆಮ್ಮೆಯಿಂದ ಹೇಳಬಹುದಾದದ್ದು ಕಸ್ತೂರಿ-ಕುಮಾರಸ್ವಾಮಿ, ಜನಶ್ರೀ-ಜನಾರ್ಧನರೆಡ್ಡಿ ಮತ್ತು ಶ್ರೀರಾಮುಲು, ಸಮಯ-ಮುರುಗೇಶ್ ನಿರಾಣಿ, ಸುವರ್ಣ ೨೪ x 7 ಸುದ್ದಿವಾಹಿನಿ-ರಾಜೀವ್ ಚಂದ್ರಶೇಕರ್ ಮಾತ್ರ. ಇನ್ನುಳಿದವು ಹೊರ ರಾಜ್ಯದವರದು.ಚಂದನ ವಾಹಿನಿ ಸರ್ಕಾರದ್ದು. ನಮ್ಮ ಕನ್ನಡಿಗರದ್ದು ಇಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ಮಾತ್ರ.
ಟಿ.ವಿ. ೯ ಮತ್ತು ಸುವರ್ಣ ೨೪ X 7 ವಾರ್ತಾವಾಹಿನಿಯಲ್ಲಿ ಟಾಲಿವುಡ್, ಕಾಲಿವುಡ್, ಬಾಲಿವುಡ್ ಸಮಾಚಾರಗಳನ್ನು ಬಿತ್ತರಿಸುವುದರಲ್ಲಿ ಅವರಿಗೆ ವಿಶೇಷ ಅಸಕ್ತಿ. ನಮ್ಮ ಕನ್ನಡಚಿತ್ರಗಳ ಸುದ್ದಿಯನ್ನು ಬೇರೆ ಭಾಷಾವಾಹಿನಿಗಳು ಪ್ರಸಾರಮಾಡುವುದಿಲ್ಲ. ಅಂತಹದರಲ್ಲಿ ನಮ್ಮ ಕನ್ನಡ ವಾಹಿನಿಗಳಿಗೆ ಈ ಹುಚ್ಚು ಯಾಕೋ ಗೊತ್ತಾಗುತ್ತಿಲ್ಲ. ನಮ್ಮಲ್ಲಿರುವ   ಈ ಅನೇಕ ವಾಹಿನಿಗಳಲ್ಲಿ  ಪರಭಾಷಿಕರಿಗೆ ಮೂರು ತಿಂಗಳಲ್ಲಿ  ಒಂದು ಸಲದಂತೆ  ವರ್ಷಪೂರ್ತಿ ತಮಿಳು/ತೆಲುಗು/ಮಲೆಯಾಳಂ/ಮರಾಠಿ/ಬೆಂಗಾಲಿ/ಹಿಂದಿ/ಇಂಗ್ಲೀಷ್ ಮುಖಾಂತರ ಕನ್ನಡವನ್ನು ಕಲಿಸುವ ಪ್ರಯತ್ನವನ್ನು ಮಾಡಬಹುದಲ್ಲವೇ? ಇದರಿಂದ ಪರಭಾಷಿಕರು ಮನೆಯಲ್ಲೇ ಕುಳಿತು ಕನ್ನಡವನ್ನು ಅವರ ಭಾಷೆಯಿಂದ ಕಲಿಯಬಹುದಲ್ಲವೇ?

Tuesday 21 February 2012

ವೈವಿದ್ಯಮಯ ಕನ್ನಡ:

ಅತ್ಯಂತ ಪ್ರಾಚೀನಭಾಷೆಗಳಲ್ಲಿ ಕನ್ನಡವೂ ಒಂದು. ಕವಿರಾಜಮಾರ್ಗದಲ್ಲಿ ಕನ್ನಡವನ್ನು ಉತ್ತರ ಮತ್ತು ದಕ್ಷಿಣವೆಂದು ವಿಂಗಡಿಸಬಹುದು. ಅದೇ ಕವಿರಾಜಮಾರ್ಗ ಕನ್ನಡದ ಬಗೆಗಳನ್ನು ಹುಡುಕುತ್ತಾ ಹೋದರೆ ಸಾವಿರ ತಲೆಯ ಆದಿಶೇಷನೇ  ಸೋತುಹೋಗುತ್ತಾನೆ ಅಷ್ಟು ಶ್ರೀಮಂತಭಾಷೆ ಎಂದೂ ಹೇಳುತ್ತದೆ. ಕನ್ನಡವನ್ನು ಮಾತೃಭಾಷೆಯಾಗಿ ಬಳಸುವವರಲ್ಲದೆ , ತುಳು, ಕೊಂಕಿಣಿ, ಮರಾಠಿ ಭಾಷೆಯವರು  ಕನ್ನಡವನ್ನು ಎರಡನೆಯ ಭಾಷೆಯಾಗಿ ಬಳಸುತ್ತಾರೆ. ಭಾಷಾ ವಿಜ್ನಾನಿಗಳು ಕನ್ನಡವನ್ನು ಮೈಸೂರು ಕನ್ನಡ, ಧಾರವಾಡ ಕನ್ನಡ, ಮಂಗಳೂರು ಕನ್ನಡ, ಗುಲ್ಬರ್ಗ ಕನ್ನಡ ಎಂದು ವಿಂಗಡಿಸಿದ್ದಾರೆ.
ಕನ್ನಡದಲ್ಲಿ ಕನ್ನಡ:
ಹವ್ಯಕ ಕನ್ನಡ, ಸಂಕೇತಿ ಕನ್ನಡ, ಕುಂದಾಪುರ ಕನ್ನಡ, ಗೌಡ ಕನ್ನಡ, ಬಡಗು ಕನ್ನಡ, ಕುರುಂಬ ಕನ್ನಡ, ಕೋಮಾರಪಂತ್ ಕನ್ನಡ, ಹಳೇಪೈಕಿ ಕನ್ನಡ, ನಾಡವರ ಕನ್ನಡ, ಸೋಲಿಗರ ಕನ್ನಡ, ಬೆಂಗಳೂರು ಕನ್ನಡ, ಉರಲಿ ಕನ್ನಡ, ಹೊಲಿಯ ಕನ್ನಡ, ಬಾರ್ಕೂರು ಕನ್ನಡ, ತಿಪಟೂರು ಕನ್ನಡ, ಉತ್ತರ ಕರ್ನಾಟಕ ಕನ್ನಡ, ನಂಜನಗೂಡು ಕನ್ನಡ, ಮೈಸೂರು ಕನ್ನಡ, ಮಂಡ್ಯ ಕನ್ನದ, ಬಳ್ಳಾರಿ ಕನ್ನಡ. ಮಹರಾಷ್ಟ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಗೋಳಾರಿ ಕನ್ನಡವನ್ನು ಮಾತನಾಡುತ್ತಾರೆ. ತಮಿಳುನಾಡಿನ ನೀಲಗಿರಿ ಪ್ರಾಂತ್ಯದಲ್ಲಿ ಬಡಗು ಕನ್ನದವನ್ನು ಮಾತನಾಡುತ್ತಾರೆ. ತಮಿಳುನಾಡಿನ ಸೇಲಂನಲ್ಲಿ ಕನ್ನಡವನ್ನು ಮಾತನಾಡುವ ಕನ್ನಡಿಗರಿದ್ದಾರೆ. ಅದಕ್ಕೆ ಸೇಲಂ ಕನ್ನಡವೆಂದೂ ಕರೆಯುತ್ತಾರೆ. ತಮಿಳಿನ ಹೆಬ್ಬಾರ್ ಸಮುದಾಯದ ಜನಗಳು ಮಾತನಾಡುವ ಭಾಷೆಯಲ್ಲಿ ಕನ್ನಡ ಕಾಣುತ್ತದೆ. ಮರಾಠಿ, ಕೊಂಕಿಣಿ, ಬೆಟ್ಟಕುರುಬ ಭಾಷೆ, ಇರುಳ, ದಖ್ಖನಿ, ಸೌರಾಷ್ಟ್ರ ಭಾಶೆಗಳಲ್ಲಿ ಅನೇಕ ಕನ್ನಡ ಪದಗಳನ್ನು ಕಾಣಬಹುದು. (ಸಂಗ್ರಹ  ವಿ.ಕ.೨೮/೧೧/೧೧)


Wednesday 15 February 2012

ಸಿ.ಸಿ.ಎಲ್ ಕ್ರಿಕೆಟ್ ಲೀಗ್

ತಮಿಳು ನಟ ಶ್ರೀಮಾನ್ ಜೀವ ಅವರೇ, ನೀವು ಕನ್ನಡಿಗರಿಗೆ ಮುಖ್ಯವಾಗಿ ಸುದೀಪ್ ಅವರಿಗೆ ಕ್ರೀಡಾ ಮನೋಭಾವ ಇಲ್ಲ ಅಂತ ಹೇಳಿದ್ರಂತೆ ಕ್ಷಮಿಸಿ.  ನಿಮಗೆ ಇರುವ ಕ್ರೀಡಾ ಮನೋಭಾವ ನಮಗೆ ಬರುವುದು ಖಂಡಿತಾ ಬೇಡ. ನೀವು ಪಂದ್ಯದ ಕೊನೆಯ ಎರೆಡು ಎಸತದಲ್ಲಿ ಚೆಂಡನ್ನು ಎಸಯದೆ ನಮ್ಮ ಕ್ರೀಡಾ ಪಟುವನ್ನು ಔಟ್ ಮಾಡಿದ ರೀತಿ ಮತ್ತು ಮೋಸದಿಂದ ಪಂದ್ಯವನ್ನು ಗೆದ್ದ ರೀತಿ ಸುಮಾರು ೫೯ ದೇಶಗಳಲ್ಲಿ ಪ್ರಸಾರವಾದ ಪಂದ್ಯದಲ್ಲಿ ಎಲ್ಲಾರು ನೋಡಿ ಹೀಗೂ ಕ್ರಿಕೆಟ್ ಆಡಬಹುದು ಎಂದು ತೋರಿಸಿಕೊಟ್ಟಿದ್ದೀರಲ್ಲಾ ನಿಮಗೆ ಧನ್ಯವಾದಗಳು. ಪಾಕಿಸ್ತಾನದವರು ಕೂಡ ನಮ್ಮ ಭಾರತದ ಮೇಲೆ ಹೀಗೆ ಪಂದ್ಯವನ್ನು ಆಡಿ ಗೆಲ್ಲಲಿಲ್ಲ. ಅಕಸ್ಮಾತ್ ನೀವು ನಮ್ಮ ಜೊತೆ ಪಂದ್ಯವನ್ನು ಆಡದೆ ಅಂದು ನಿಮ್ಮ ಪಂದ್ಯ ಮುಂಬೈ ಮೇಲೆ ಮುಂಬೈನಲ್ಲಿ ನಡೆದು ನೀವು ನಮ್ಮ ಮೇಲೆ ಮೋಸದ ಆಟ ಆಡಿ ಗೆದ್ದರಲ್ಲ ಹಾಗೆ ಆಡಿದ್ದರೆ, ನಿಮ್ಮ ಗತಿ ಎನಾಗುತಿತ್ತು ಯೋಚಿಸಿ ಶ್ರೀಮಾನ್ ಜೀವಾ ಅವರೇ. ಮತ್ತೊಂದು ವಿಷಯ ನಮಗೆ ಕ್ರೀಡೆಯಲ್ಲಿ ಅಷ್ಟೇ ಅಲ್ಲ ಎಲ್ಲದರಲ್ಲೂ ಕ್ರೀಡಾ ಮನೋಭಾವ ಜಾಸ್ತಿನೇ ಇದೆ. ಅದು ಇಲ್ಲದಿದ್ದರೆ ನಮ್ಮ ಕನ್ನಡ ನಿರ್ಮಾಪಕರು ನೀವು ಬೆಂಗಳೂರಿನಲ್ಲಿ ನಮ್ಮ ಮೇಲೆ ಆಟ ಆಡಲು ಬಂದಾಗ ನಿಮ್ಮ ಬಾವುಟವನ್ನು ಹಿಡಿದು ಕುಣಿದು ಕುಪ್ಪಳಿಸಲ್ಲಿವೇ. ಅಲ್ಲದೇ ನಮ್ಮ ರಾಜ್ಯದಲ್ಲಿ ತೆಲುಗು/ತಮಿಳು/ಮಲೆಯಾಳಂ/ಹಿಂದಿ/ಆಂಗ್ಲ ಭಾಷಾ ಚಿತ್ರಗಳು ಬಂದಾಗ ನಮಗೆ ಚಿತ್ರಮಂದಿರಗಳು ಇಲ್ಲದೇ ಇದ್ದರೂ ನಿಮಗೆ ನಮ್ಮ ಚಿತ್ರಮಂದಿರಗಳನ್ನು ಬಿಟ್ಟುಕೊಟ್ಟು ನಾವು ಸುಮ್ಮನೆ ಕುಳಿತುಕೊಳ್ಳವುದನ್ನು ನೋಡಿ ಇಡೀ ಭಾರತ ದೇಶವೇ "ಹೀಗೂ ಉಂಟೇ" ಎಂದು ಮೂಗಿನಮೇಲೆ ಬೆಟ್ಟು ಇಟ್ಟುಕೊಳ್ಳೂವುದನ್ನು ನೀವು ನೋಡಿಲ್ಲವೇ?. ನಿಮ್ಮ ರಾಜ್ಯದಲ್ಲಿ ತಮಿಳು ಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡಿದರೆ ಅವರನ್ನು ನೀವು ಶತ್ರುಗಳನ್ನು ನೋಡುವುದು ಇಡೀ ಭಾರತ ದೇಶಕ್ಕೇ ಗೊತ್ತಿದೆ. ನಿಮ್ಮಿಂದ ಕಲಿಯುವುದು ನಮಗೆ ಬೇಕಾಗಿಲ್ಲ. ಅದು ನಿಮ್ಮಲ್ಲಿಯೇ ಇರಲಿ.  ಕನ್ನಡಭಾಷೆಗೆ ಕೇಂದ್ರ ಸರ್ಕಾರದವರು ಶಾಸ್ತ್ರೀಯ ಸ್ಥಾನಮಾನ ಕೊಟ್ಟಾಗೆ ನೀವು ಅದಕ್ಕೆ ಕೂಡ ಕಲ್ಲು ಹಾಕಿದವರಲ್ಲವೇ. ನಮಗೆ ಒಂದು ಬೇಜಾರಿನ ವಿಷಯವೇನೆಂದರೆ ನೀವು ನಮ್ಮ ಕಾವೇರಿ ನೀರು ಕುಡಿದೂ ನಿಮಗೆ ನಮ್ಮಲ್ಲಿ ಇರುವ ವಿಶಾಲ ಬುದ್ದಿಬರಲಿಲ್ಲವೇ ಎಂಬುದು. ಅದು ನಿಮಗೆ ಬರುವುದೂ ಇಲ್ಲ ಬಿಡಿ. ಧನ್ಯವಾದಗಳು ಹಾಗೂ ಹೀಗೂ ಪಂಧ್ಯವನ್ನು ಗೆದ್ದಿದ್ದಕ್ಕೆ.

Saturday 11 February 2012

ಕನ್ನಡ ಕಲಿಸಿ:

ಮಕ್ಕಳಿಗೆ ಕನ್ನಡ ಕಲಿಸಿ.  ಇಂದಿನ ಮಕ್ಕಳೇ ನಾಡಿನ ಕಣ್ಮಣಿಗಳು.  ನಮಗಷ್ಟೇ ಕನ್ನಡ ಬಂದರೆ ಸಾಕೇ?  ಇದು ಮುಂದುವರೆಯವುದು ಬೇಡವೇ?  ಮಕ್ಕಳಿಗೆ ಕನ್ನಡ ಮಾತನಾಡುವುದು ಬಂದರೆ ಸಾಲದು.  ಅವರಿಗೆ ಓದಲು ಮತ್ತು ಬರೆಯಲು ಕನ್ನಡ ಬರುವುದು ಅವಶ್ಯಕ.  ಇಲ್ಲದಿದ್ದರೆ ಮುಂದೆ ಕನ್ನಡ ಮಾತನಾಡಲು ಮಾತ್ರ ಬರುತ್ತದೆ, ಅದರೆ ಕನ್ನಡ ಓದಲು ಬರೆಯಲು ಬರದ ಜನಾಂಗವೇ ಜಾಸ್ತಿಯಾಗಿ ಕನ್ನಡ ಲಿಪಿ ಕಣ್ಮರೆಯಾಗುತ್ತದೆ.  ಚಿಕ್ಕ ಮಕ್ಕಳಿಗೆ ಕನ್ನಡದ ಶಿಶು ಗೀತೆಗಳನ್ನು ಹೇಳಿಕೊಡಿ.  (ಉದಾ:ಉಂಡಾಡಿ ಗುಂಡ, ನಾಯಿಮರಿ ನಾಯಿಮರಿ, ಬಣ್ಣದ ತಗಡಿನ ತುತ್ತೂರಿ,  ಒಂದು ಎರಡು...... ಇತ್ತ್ಯಾದಿ)  ಮಕ್ಕಳಿಗೆ ಇವನ್ನು ಕಲಿಸಿ www.youtube.com/results?search_query=kannada+makkala+geethegalu&oq=kannada+makkala+geethegalu&aq=f&aqi=&aql=&gs_sm=3&gs_upl=29476l32545l0l34570l13l13l0l0l0l7l260l2636l0.7.6l13l0 ಈ ತಾಣಕ್ಕೆ ಭೇಟಿ ಕೊಡಿ.  ಕನ್ನಡದಲ್ಲಿ ಮಗು ಕತೆ ಹೇಳುವಂತ ಪ್ರೊತ್ಸಾಹಿಸಿ.  ಸ್ವಲ್ಪ ದೊಡ್ಡ ಮಕ್ಕಳಿಗೆ ಕನ್ನಡದ ಕತೆ, ಕಾದಂಬರಿ ಮತ್ತು ಸಾಹಿತ್ಯವನ್ನು ಪರಿಚಯಿಸಿ.  ಕುವೆಂಪು, ಮಾಸ್ತಿ, ಕಾರಂತರು, ಬೇಂದ್ರೆ, ತೇಜಸ್ವಿ, ಆಡಿಗರು, ಗಿರೀಶ್ ಕಾರ್ನಾಡ್, ಅನಂತ ಮೂರ್ತಿ, ಕಂಬಾರರು, ಬೈರಪ್ಪ ಹೀಗೆ ಕನ್ನಡದ ದಿಗ್ಗಜರ ಪುಸ್ತಕಗಳನ್ನು ಒದಿಕೊಳ್ಳೂವಂತಾಗಲಿ. (ನಾನು ಇಲ್ಲಿ ಕೇವಲ ಕೆಲವರನ್ನು ಮಾತ್ರ ಉದಾಹರಣೆಯಾಗಿ ಕೊಟ್ಟಿದ್ದೇನೆ)  ಅನ್ಯಥಾ ಭಾವಿಸಿಬೇಕಾಗಿಲ್ಲ.  ಮಕ್ಕಳಿಗೆ ಕನ್ನಡದ ಭಾವಗೀತೆ, ಜನಪದ ಗೀತೆಗಳನ್ನು ಕೇಳಿಸಿ, ಹೇಳಿ ಕೊಡಿ.

ಕನ್ನಡ ಕಲಿತರೆ ಅದರಿಂದ ನಷ್ಟವೇನಾಗಲಾರದು.  ಅದರಿಂದ ಮುಂದೆ ನಿಮಗೂ ಮತ್ತು ನಿಮ್ಮ ಮಕ್ಕಳಿಗೂ ಪ್ರಯೋಜನವೇ ಜಾಸ್ತಿ.  ಇದರಿಂದ ನಮ್ಮ ಮಕ್ಕಳು ನಮ್ಮ ಸಂಸೃತಿಯನ್ನು ಕಲಿಯುತ್ತಾರೆ.  ಒಮ್ಮೆ ನಮ್ಮ ಸಂಸೃತಿಯನ್ನು ಕಲಿತ ಮಗು ಮುಂದೆ ದೊಡ್ಡದಾದ ಮೇಲೆ ತಂದೆ, ತಾಯಿ, ಗುರುಹಿರಿಯರನ್ನು ಗೌರವಿಸುವುನ್ನು ಕಲಿಯುತ್ತದೆ.  ಕನ್ನಡದಲ್ಲಿ ಕಲಿತರೆ ಮುಂದೆ ಉದ್ಯೋಗ ಕಷ್ಟ ಎಂಬ ಭಾವನೆ ಬಿಡಿ.  ಕನ್ನಡಕ್ಕೊ ಉದ್ಯೋಗಕ್ಕೂ ಸಂಭಂಧವಿಲ್ಲ.  ನಮ್ಮ ಕಛೇರಿಯ ದ್ವಾರಪಾಲಕ ಕೂಡ ಎಲ್ಲರಂತೆ  ಆಂಗ್ಲ ಭಾಷೆಯಲ್ಲಿ ಮಾತನಾಡಬಲ್ಲ.  ಆಂಗ್ಲ ಭಾಷೆಯಲ್ಲಿ ಕಲಿತರೆ ಮಾತ್ರ ಉದ್ಯೋಗ ಎಂಬುದಿಲ್ಲ.  ಕೆಲಸಕ್ಕೆ ಜ್ನಾನ ಮುಖ್ಯ.  ಈಗ ಸುಮಾರು ೮೦-೯೦% ಐಟಿ, ಬಿಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರು ಚಿಕ್ಕಂದಿನಲ್ಲಿ ಕನ್ನಡ ಶಾಲೆಯಲ್ಲಿ ಓದಿದವರೆ.  ಡಾ.ಸಿ.ಎನ್.ಆರ್.ರಾವ್ ನಮ್ಮ ದೇಶದ, ನಾಡಿನ ಹೆಸರಾಂತ ವಿಜ್ನಾನಿಗಳು.  ಇವರಿಗೆ ಇತ್ತೀಚೆಗೆ ೫೩ ಡಾಕ್ಟರೇಟ್ ಪ್ರಶಸ್ತಿಗಳು ದೊರಕಿವೆ.  ಪ್ರಪಂಚದ ಅನೇಕ ವಿಶ್ವವಿದ್ಯಾನಿಲಯಗಳು ತಾಮುಂದು ತಾಮುಂದು ಎಂದು ಇವರಿಗೆ ಡಾಕ್ಟರೇಟ್ ಪ್ರಶಸ್ತಿಗಳನ್ನು ಹುದುಕಿಕೊಂಡು ಬಂದು ಕೊಡುತ್ತಾರೆ.  ಇನ್ನು ನಾಡಿನ ಹೆಸರಾಂತ ಇಂಜಿನಿಯರ್ ಆಗಿದ್ದಂತಹ ಡಾ.ಸರ್.ಎಂ.ವಿಶ್ವೇಶ್ವರಯ್ಯನವರು ಇವರ ಬಗ್ಗೆ ತಿಳಿಯದ ಜನರೇ ಇಲ್ಲ ಈ ನಾಡಿನಲ್ಲಿ.  ಇವರುಗಳು ಕನ್ನಡದ ಶಾಲೆಗಳಲ್ಲಿ ಕಲಿತವರೆ. ಇತ್ತೀಚೆಗೆ ನಾರಾಯಣ ಮೂರ್ತಿ, ಕ್ಯಾಪ್ಟನ್.ಗೋಪಿನಾಥ್ ಹೀಗೆ ನಾಡಿನಲ್ಲಿ ಹೆಸರು ಕೀರ್ತಿ ಗೌರವವನ್ನು ಪಡೆದಿರುವವರು ಚಿಕ್ಕಂದಿನಲ್ಲಿ ಇವರು ಸಹ ಕನ್ನಡದಲ್ಲಿ ಕಲಿತವರೇ.  ಆಂಗ್ಲ ಭಾಷೆಯಲ್ಲಿ ಕಲಿತವರು ಮಾತ್ರ ಬುದ್ದಿವಂತರು ಮಿಕ್ಕವರು ಇಲ್ಲ ಎಂಬ ಭಾವನೆಯನ್ನು ಬಿಟ್ಟುಬಿಡಿ.  ಓದುವುದು ಜ್ನಾನ ಸಂಪಾದನೆಗಾಗಿ ಮಾತ್ರ.  ಮಕ್ಕಳಿಗೆ ಕನ್ನಡದಲ್ಲಿ ಮೊದಲು ಸರಿಯಾದ ಜ್ನಾನವನ್ನು ಕೊಡಿ.  ಮುಂದೆ  ಮಕ್ಕಳು ಆಂಗ್ಲಭಾಷೆಯನ್ನಷ್ಟೇ ಅಲ್ಲದೆ ಅನೇಕ ಭಾಷೆಗಳನ್ನು ತಮ್ಮಷ್ಟಕ್ಕೆತಾವೆ ಕಲಿಯುತ್ತಾರೆ.  ಕನ್ನಡಕ್ಕೆ ಆಂಗ್ಲ ಭಾಷೆ ಮತ್ತು ಇತರೆ ಭಾಷೆಗಳು ಊರುಗೊಲಾಗಿರಲಿ, ಅದೇ ಕಾಲುಗಳಾಗುವುದು ಬೇಡ.  ಇಂದಿನ ಅನೇಕ ಮಕ್ಕಳು ಪಾಠವನ್ನು ಉರುಹೊಡೆಯುತ್ತರೆ.  ಅದರಲ್ಲಿ ಇರುವ ವಿಷಯಗಳಬಗ್ಗೆ ಅರಿವಿಲ್ಲ.  ಇದರಿಂದ ಮುಂದೆ ಅವರಿಗೇ ನಷ್ಟ. ಇತ್ತೀಚೆಗೆ ನಾರಾಯಣಮೂರ್ತಿಯವರು ಒಂದುಕಡೆ ನಮ್ಮಲ್ಲಿ ಐ.ಐ.ಟಿಯಲ್ಲಿ ಉತೀರ್ಣರಾಗಿ ಬಂದು ನಮ್ಮಲ್ಲಿ ಕೆಲಸ ಮಾಡುವವರೂ ಸಹ ಸೃಜನಶೀಲರಾಗಿಲ್ಲ ಎಂದು ಹೇಳಿದ್ದಾರೆ.   ಇದು ಆಂಗ್ಲ ಬಾಷೆಯಲ್ಲಿ ಓದಿ ಉರುಹೊಡೆದವರ ಲಕ್ಷಣ. ಮಕ್ಕಳಿಗೆ ಮಾತೃಭಾಷೆಯಲ್ಲಿ ಎನು ಓದುತ್ತಿದ್ದೇವೆ ಎಂಬ ಅರಿವಿರಬೇಕು.  ಆಗ ಉರುಹೊಡೆಯುವುದು ತಪ್ಪುತ್ತದೆ.  ಜ್ನಾನ ಹೆಚ್ಚುತ್ತದೆ.  ಆ ಕಾರಣಕ್ಕಾಗೇ ಹಿರಿಯ ಭಾಷಾ ವಿದ್ವಾಂಸರು, ಶಿಕ್ಷಣ ತಜ್ನರು, ಕವಿಗಳು, ಸಾಹಿತಿಗಳು ಮಕ್ಕಳಿಗೆ ಕನ್ನಡದಲ್ಲೇ ಬಾಲ್ಯ ಶಿಕ್ಷಣ ದೊರಕಬೇಕೆಂದು ಹೇಳುತ್ತಿರುವುದು.  ಉಚ್ಚನ್ಯಾಯಾಲಯವು ಸಹ ಈ ವಾದವನ್ನು ಒಪ್ಪುತ್ತಿವೆ.  ಇನ್ನು ಗುಣಮಟ್ಟದ ಕನ್ನಡ ಶಾಲೆಗಳು, ಅದರ ಕಾರ್ಯ ವೈಖರಿ ಮತ್ತು ಅದರಲ್ಲಿ ಇರುವ ಸೌಲಭ್ಹ್ಯಗಳ ಬಗ್ಗೆ ತಿಳಿಯಲು ನಮ್ಮ ಸ್ನೇಹಿತರ kalikeyu.blogspot.com ತಾಣಕ್ಕೆ ಭೇಟಿ ಕೊಡಿ.