ಎಲ್ಲಾ
ರಾಜಕೀಯ
ಪಕ್ಷಗಳದ್ದು
ಎರಡೇ
ಸಿದ್ದಾಂತ!
ಒಂದು
ಸರ್ಕಾರ
ರಚಿಸುವುದು!
ಮತ್ತೊಂದು
ಬೀಳಿಸುವುದು!
ಇದಕ್ಕಾಗಿ
ಮಾಡುವರು
ಹಲವು
ರಾದ್ದಾಂತ!!
ಇಂದು
ಗಣ
ರಾಜ್ಯೋತ್ಸವ!
ಇದು
ಗಣ್ಯರದೇ
ಉತ್ಸವ!
ಗಣರು
ಆಟಕ್ಕುಂಟು
ಲೆಕ್ಕಕ್ಕಿಲ್ಲ!
ಇದುವೇ
ಈ ದೇಶದ
ಕಟು ವಾಸ್ತವ!!
ಕನ್ನಡ ಬ್ಲಾಗ್ ನವರು
ಮತ್ತೊಮ್ಮೆ
ಇಟ್ಟರೊಂದು
ಸ್ಪರ್ಧೆ!
ಈ ಬಾರಿ
ಕಥೆ ಬರೆಯಿರಿ,
ಅದೂ
ನಿಮ್ಮಿಷ್ಟದಂತೆ!
ಆದರೆ ಬಹುಮಾನ
ಕೊಡುವುದು
ಅವರಿಗೆ ಇಷ್ಟವಾದರೆ
ಮಾತ್ರವಂತೆ!
ಮಿಕ್ಕವುಗಳನ್ನು
ಏನು
ಮಾಡುತ್ತಾರೋ
ತಿಳಿಯದು!
ಬಹುಶಃ
ಕನ್ನಡ
ಸಿನಿಮಾದವರಿಗೆ
ಕೊಡಬಹುದೇನೋ?
ಹೇಗಿದ್ದರೂ
ಅವರ ಬಳಿ
ಕಥೆಗಳೇ
ಇಲ್ಲವಂತಲ್ಲಾ!!
ಬೆಳೆ ನಷ್ಟ
ಭರ್ತಿ ಕೋರಿ
ತಮಿಳು ನಾಡು
ಸುಪ್ರೀಂ ಕೂರ್ಟ್ ನಲ್ಲಿ
ಅರ್ಜಿ!
ಈ ಬಾರಿಯಾದರೂ
ಸರಿಯಾಗಿ ಮಳೆ
ಸುರಿಸೆಂದು
ನಾವು
ಮಾಡಬೇಕು
ವರುಣದೇವನಲ್ಲಿ
ಮರ್ಜಿ!!
ಫೇಸ್
ಬುಕ್ ನಲ್ಲಿ
ಸ್ನೇಹಿತರು
ಒಟ್ಟಿಗೆ
ಸೇರುತ್ತಾರೆ
ತಮ್ಮಲ್ಲಿ
ಸಮಾನ
ಮನಸ್ಸಿದೆ
ಎಂದು
ತೋರಲು!
ಅದೇ
ನಮ್ಮ
ಶಾಸಕರೂ
ಒಟ್ಟಿಗೆ
ಸೇರುತ್ತಾರೆ
ಏನಾದರೂ
ಕಿತಾಪತಿ
ಮಾಡಲು!!