ರೈಲ್ವೆ
ಬಜೆಟ್ ನಲ್ಲಿ
ಮತ್ತೊಮ್ಮೆ
ರಾಜ್ಯಕ್ಕೆ
ಅನ್ಯಾಯ!
ಅಭಿಮಾನ
ಒಗ್ಗಟ್ಟು
ಯಾವುದೂ
ಇಲ್ಲದ
ನಮಗೆ
ಹೇಳಿ
ಹೇಗೆ
ಸಿಕ್ಕೀತು
ನ್ಯಾಯ!!
ಕನ್ನಡ ಬ್ಲಾಗ್ ನವರು
ಸುಮ್ಮನೇ ಕೂಡಲ್ಲ!
ನಮ್ಮನ್ನೂ ಸುಮ್ಮನೆ
ಕೂಡಲು ಬಿಡಲ್ಲ!
ಸ್ಪರ್ಧೆ ಮೇಲೆ
ಸ್ಪರ್ಧೆ ಇಡ್ತಾರೆ!
ಬಹುಮಾನನೂ
ಕೊಡ್ತಾರೆ!
ಹೀಗೇ ಅಲ್ಲವೆ
ಕನ್ನಡ ಬೆಳೆಸುವ
ಪರಿ!
ಇವರನ್ನು ನೋಡಿ
ಕಲಿಯುವುದು
ಬೇಕಾದಷ್ಟಿದೆ
ಬಿಡಿ!!
ನಾಯಿ, ನರಿ
ಹಂದಿ, ಕತ್ತೆ
ಎಂದು ನಿಮ್ಮ
ನಿಮ್ಮಲ್ಲೇ
ಬಡಿದಾಡಿಕೊಳ್ಳುವ
ನೀವೂ ಒಬ್ಬ
ನಾಯಕರೇ?
ನಿಮ್ಮನ್ನು
ಒಪ್ಪಿಕೊಳ್ಳಬೇಕಾದ
ಅನಿವಾರ್ಯ
ಕರ್ಮ ನಮಗೇಕೆ
ಶಾಸಕರೇ??
ನಮ್ಮ
ರಾಜಕಾರಣಿಗಳನ್ನು
ಪಕ್ಕದ
ತಮಿಳುನಾಡಿಗೆ
ಕಳುಹಿಸುವುದು
ಒಳಿತು!
ಹಿಡಿದ
ಕೆಲಸವನ್ನು
ಪಟ್ಟಾಗಿ
ಕುಳಿತು
ಸಾಧಿಸುವುದು
ಹೇಗೆಂದು
ಕಲಿತು
ಬರಲು!!
ಕಾವೇರಿ
ಐ ತೀರ್ಪು
ನಮ್ಮವರಿಗೆ
ಮರಣ!
ಅವರಿಗೆ
ಶಾಸನ!!