ಮತ
ಹಾಕುವ
ತನಕ
ಮತದಾರ
ಅಮೂಲ್ಯ!
ನಂತರ
ಅವನು
ಅಪಮೌಲ್ಯ!!
ಕೋಟಿ ಕೋಟಿ
ಹಣ ಸುರಿಯುತ್ತಾರೆ
ತಿಮ್ಮಪ್ಪನ
ಹುಂಡಿಗೆ!
ಮನಸ್ಸು ಬಾರದು
ಒಂದು ತುತ್ತು
ಅನ್ನ ನೀಡಲು
ಬಡವನ
ಹೊಟ್ಟೆಗೆ!
ರಾಜಕಾರಣಿಗಳು
ಒಬ್ಬರ ಮೇಲೆ
ಒಬ್ಬರು
ಎರಚುತ್ತಾರೆ
ಕೆಸರು!
ಕಳೆದುಕೊಳ್ಳುತ್ತಾರೆ
ಅಳಿದುಳಿದ
ಕೊಂಚ
ಹೆಸರು!!
ಹಲ್ಲು ಕಿರಿದು
ಕೈ ಜೋಡಿಸಿ
ಪೋಸ್ಟರ್ ಗಳಲ್ಲಿ
ಮುಖ ತೋರಿಸುವ
ಅಯೋಗ್ಯರು!
ಹಾಕುತ್ತಿರಬೇಕು
ಹಿಡಿ ಶಾಪ
ಇಂತಹ ಅವಕಾಶ
ತಪ್ಪಿಸಿದಕ್ಕಾಗಿ
ಚುನಾವಣಾ
ಆಯೋಗಕ್ಕೆ!!
ಸಾಕು
ಒಬ್ಬ
ಧನುಂಜಯ!
ಕೊಳೆಸಲು
ಯಡ್ಡಿಯ
ತೆಂಗಿನಕಾಯ!!
ಪುನೀತ್ ಕೇಳುವ
ಎಲ್ಲಾ ಪ್ರಶ್ನೆಗಳಿಗೆ
ಉತ್ತರಿಸಿದರೆ ಮಾತ್ರ
ನೀವಾಗುವಿರಿ
ಕೋಟ್ಯಾಧಿಪತಿ!
ಅದಾಗದಿದ್ದರೆ
ತೆಪ್ಪಗೆ ಹೆಣ್ಣು ಹುಡುಕಿ
ಮದುವೆಯಾಗಿಬಿಡಿ!
ನಿಮ್ಮ ಹೆಂಡತಿಯೇ
ನಿಮಗೆ ಕೋಟಿ
ನೀವು ಅವರ ಪತಿ!
ಅದೀರಲ್ಲಾ ನೀವೂ
ಕೋಟ್ಯಾಧಿಪತಿ!!