Thursday, 9 January 2014

ಮಹಾನಗರ ಪಾಲಿಕೆ


ಬೆಂಗಳೂರು
ಮಹಾ
ನಗರ
ಪಾಲಿಕೆ
ಆಗಿದೆಯಂತೆ
ದಿವಾಳಿ!

ಆಗದೆ
ಮತ್ತೇನಾದೀತು?

ಬಂದು ಹೋದವರೆಲ್ಲಾ
ದಿನಾವೂ
ಮಾಡಿದರೆ
ದೀಪಾವಳಿ!!

Tuesday, 7 January 2014

ಸಿದ್ದರಾಮ


ತುಂಬಿದ ಸಭೆಯಲ್ಲಿ
ತನ್ನ ಪ್ರಿಯ ಪತ್ನಿ
ಕೊಟ್ಟ ಕಂಠಿಹಾರವನ್ನು
ಆಂಜನೇಯ ಅಗಿದಗಿದು
ಉಗಿದರೂ ಏನೂ
ಹೇಳಲಾಗದೆ
ಸುಮ್ಮನೆ
ನೋಡುತ್ತಾ
ನಿಂತುಬಿಟ್ಟ
ತೇತ್ರಾಯುಗದ
ಆ ಶ್ರೀ ರಾಮ!

ವಿಧಾನಸೌಧದ
ಗೋಡೆಯನ್ನು
ಒಡೆದುರುಳಿಸಿದರೊ
ತುಟಿಬಿಚ್ಚದೆ
ಕುಳಿತುಬಿಟ್ಟ
ಕಲಿಯುಗದ
ನಮ್ಮ ಈ
ಸಿದ್ದರಾಮ!!

Saturday, 4 January 2014

ಈಡುಗಾಯಿ


ಬಳಲಿ
ಬೆಂಡಾಗಿದ್ದ
ಯಡ್ಡಿಗೆ
ಆಯಿತು
ಜ್ಞಾನೋದಯ!

ಈಡುಗಾಯಿ
ಒಡೆದು
ಒಳಸೇರಿದರು
ಕಮಲದ
ಕಾರ್ಯಾಲಯ!!

Friday, 3 January 2014

ಬಡಾ ಆದ್ಮಿ


ಹಿಂದೊಮ್ಮೆ
ನಾನಾಗಿದ್ದೆ
ಆಮ್ ಅದ್ಮಿ!

ಕಾರು
ಬಂಗಲೆ
ಎಲ್ಲಾ
ಬೇಕು
ನಾನೀಗ
ಬಡಾ ಆದ್ಮಿ!!

Tuesday, 31 December 2013

ಕೊಳಕು ಮನಸ್ಸುಗಳು


ಹೊಸ
ವರ್ಷದಂದು
ಕೇವಲ
ಕ್ಯಾಲಂಡರ್
ಬದಲಿಸಿದರೆ
ಸಾಲದು!

ನಮ್ಮ
ಕೊಳಕು
ಮನಸ್ಸುಗಳು
ಬದಲಿಸಿಕೊಳ್ಳದಿದ್ದರೆ
ಸುಖ,
ಶಾಂತಿ,
ನೆಮ್ಮದಿ
ಸಿಗದು!!