ತುಂಬಿದ ಸಭೆಯಲ್ಲಿ
ತನ್ನ ಪ್ರಿಯ ಪತ್ನಿ
ಕೊಟ್ಟ ಕಂಠಿಹಾರವನ್ನು
ಆಂಜನೇಯ ಅಗಿದಗಿದು
ಉಗಿದರೂ ಏನೂ
ಹೇಳಲಾಗದೆ
ಸುಮ್ಮನೆ
ನೋಡುತ್ತಾ
ನಿಂತುಬಿಟ್ಟ
ತೇತ್ರಾಯುಗದ
ಆ ಶ್ರೀ ರಾಮ!
ವಿಧಾನಸೌಧದ
ಗೋಡೆಯನ್ನು
ಒಡೆದುರುಳಿಸಿದರೊ
ತುಟಿಬಿಚ್ಚದೆ
ಕುಳಿತುಬಿಟ್ಟ
ಕಲಿಯುಗದ
ನಮ್ಮ ಈ
ಸಿದ್ದರಾಮ!!
No comments:
Post a Comment