ಹೊಸವರ್ಷದಂದು
ಖಂಡಿತಾ
ಕ್ಯಾಲೆಂಡರ್
ಬದಲಾಗತ್ತೆ!
ಬದಲಾಗದೆ
ಇರುವುದು
ನಮ್ಮ
ಕೊಳಕು
ಮನಸ್ಸುಗಳು
ಮಾತ್ರ!!
ಅಂದು
ಒಬ್ಬನೇ
ರಾವಣ,
ಒಬ್ಬನೇ
ದುಶ್ಯಾಸನ!
ಇಂದು
ರಸ್ತೆಗೆ
ನಾಲ್ಕಾರು
ರಾವಣರು,
ಹತ್ತಾರು
ದುಶ್ಯಾಸನರು!!
ತಂದೆ
ತಾಯಿ
ಮಕ್ಕಳಿಗೆ
ಗದರಿದ್ರೆ,
ಬೈದರೆ,
ಹೊಡೆದ್ರೆ
ನಾರ್ವೆಯಲ್ಲಿ
ಒಳಗೆ
ಹಾಕ್ತಾರೆ!
ನಮ್ಮ
ದೇಶದಲ್ಲಿ
ಕೊಲೆ,
ದರೋಡೆ,
ಅತ್ಯಾಚಾರ
ಮಾಡಿದ್ರೂ
ಹೊರಗೇ
ಉಳ್ಕೊತಾರೆ!!
ಹೂ
ಮಾರೋ
ಅಜ್ಜಿ
ಬುಟ್ಟಿ ತುಂಬಾ
ಹೂವು
ತುಂಬಿಕೊಂಡು
ಗಣೇಶನ
ಗುಡಿ
ಪಕ್ಕದಲ್ಲಿ
ಮಾರಕ್ಕೆ
ಕೂತ್ಲು!
ಗುಡಿಗೆ
ಬರೋರು
ದಾರಿಲ್ಲಿ
ಹೋಗೋರು
ಗಣೇಶನಿಗೆ
ಕೈ
ಮುಗಿದ್ರೇ
ಹೊರತು
ಯಾರೂ
ಹೂವು
ತಗೋಳ್ಲಿಲ್ಲ!!
ಕಾಲೇಜ್
ಕನ್ಯೆಯರು
ಹೂವನ್ನು
ನೋಡಿ
ಕಣ್ಣರಳಿಸಿದರೇ
ಹೊರತು
ಕಾಸು
ಬಿಚ್ಚಲಿಲ್ಲ!
ಹೂವು
ತಗೋಳ್ಲಿಲ್ಲ!!
ಆಟೋ,
ಲಾರಿ, ಟ್ಯಾಕ್ಸಿ
ಡ್ರೈವರ್
ಗಳು
ಗಾಡಿ
ನಿಲ್ಸಿ
ಹೂ
ತಗೊಂಡಿದ್ದು ಬಿಟ್ರೆ
ಬೇರೆ
ಯಾರೂ
ಕೇಳಲೇ
ಇಲ್ಲ!
ಮಧ್ಯಾಹ್ನ
ಆಯ್ತು
ಸಂಜೆ
ಬಂತು
ಕತ್ತಲಾಗ್ತಾ
ಇದೆ
ಹೂವು
ಬಾಡ್ತಾ ಇದೆ
ಅಜ್ಜಿ
ಸೊರಗ್ತಾ ಇದೆ
ವ್ಯಾಪಾರ
ಇಲ್ಲ!
ಇನ್ಯಾರೂ
ಬರಲ್ಲ ಅಂತ
ಮೇಲೆದ್ದ
ಅಜ್ಜಿ
ಮಿಕ್ಕ
ಹೂವು
ಗಣೇಶನಿಗೆ
ಕೊಟ್ಟು
ಕಾಪಾಡಪ್ಪಾ
ನನ್ನಪ್ಪಾ
ಎಂದು
ಕೈಮುಗಿದ್ಲು!!
ರಾಜಕಾರಿಣಿಗಳಿಗಿಲ್ಲ
ನಿವೃತ್ತಿ
ಯಾಕೆ?
ಬಾಚೋದೇ
ನಮ್ಮ
ವೃತ್ತಿ!
ಅದಕ್ಯಾಕೆ
ನಿವೃತ್ತಿ
ಅಂತಾರಾ??