Sunday 23 December 2012

ಜ್ಯೋತಿಷಿ


ಮೊನ್ನೆ ಪ್ರಳಯ
ಆಗೇ ಆಗತ್ತೇ
ಅಂದ ಜ್ಯೋತಿಷಿಯೊಬ್ಬರು
ಸಿಕ್ಕಿದ್ರು!

ಎಲ್ಲಿ ಸ್ವಾಮಿ,
ಪ್ರಳಯ ಅಗಲೇ
ಇಲ್ಲ ಅಂದೆ!

ಆಗತ್ತೆ ಸ್ವಾಮಿ
ಎಲ್ಲೂ ಹೋಗಲ್ಲ!

ಸಧ್ಯಕ್ಕೆ ಮುಂದಕ್ಕೆ
ಹೋಗಿದೆ ಅಷ್ಟೇ
ನಾವು, ಟಿ.ವಿಯವರು
ಎಲ್ಲಾ ಸೇರಿಕೊಂಡು
ಹೊಸ ದಿನ
ನಿಗದಿ ಮಾಡ್ತೀವಿ!

ಸಧ್ಯಕ್ಕೆ
ಸುಧಾರಿಸಿಕೊಳ್ಳಿ
ಅಂದ್ರು!!

No comments:

Post a Comment