Wednesday 15 February 2012

ಸಿ.ಸಿ.ಎಲ್ ಕ್ರಿಕೆಟ್ ಲೀಗ್

ತಮಿಳು ನಟ ಶ್ರೀಮಾನ್ ಜೀವ ಅವರೇ, ನೀವು ಕನ್ನಡಿಗರಿಗೆ ಮುಖ್ಯವಾಗಿ ಸುದೀಪ್ ಅವರಿಗೆ ಕ್ರೀಡಾ ಮನೋಭಾವ ಇಲ್ಲ ಅಂತ ಹೇಳಿದ್ರಂತೆ ಕ್ಷಮಿಸಿ.  ನಿಮಗೆ ಇರುವ ಕ್ರೀಡಾ ಮನೋಭಾವ ನಮಗೆ ಬರುವುದು ಖಂಡಿತಾ ಬೇಡ. ನೀವು ಪಂದ್ಯದ ಕೊನೆಯ ಎರೆಡು ಎಸತದಲ್ಲಿ ಚೆಂಡನ್ನು ಎಸಯದೆ ನಮ್ಮ ಕ್ರೀಡಾ ಪಟುವನ್ನು ಔಟ್ ಮಾಡಿದ ರೀತಿ ಮತ್ತು ಮೋಸದಿಂದ ಪಂದ್ಯವನ್ನು ಗೆದ್ದ ರೀತಿ ಸುಮಾರು ೫೯ ದೇಶಗಳಲ್ಲಿ ಪ್ರಸಾರವಾದ ಪಂದ್ಯದಲ್ಲಿ ಎಲ್ಲಾರು ನೋಡಿ ಹೀಗೂ ಕ್ರಿಕೆಟ್ ಆಡಬಹುದು ಎಂದು ತೋರಿಸಿಕೊಟ್ಟಿದ್ದೀರಲ್ಲಾ ನಿಮಗೆ ಧನ್ಯವಾದಗಳು. ಪಾಕಿಸ್ತಾನದವರು ಕೂಡ ನಮ್ಮ ಭಾರತದ ಮೇಲೆ ಹೀಗೆ ಪಂದ್ಯವನ್ನು ಆಡಿ ಗೆಲ್ಲಲಿಲ್ಲ. ಅಕಸ್ಮಾತ್ ನೀವು ನಮ್ಮ ಜೊತೆ ಪಂದ್ಯವನ್ನು ಆಡದೆ ಅಂದು ನಿಮ್ಮ ಪಂದ್ಯ ಮುಂಬೈ ಮೇಲೆ ಮುಂಬೈನಲ್ಲಿ ನಡೆದು ನೀವು ನಮ್ಮ ಮೇಲೆ ಮೋಸದ ಆಟ ಆಡಿ ಗೆದ್ದರಲ್ಲ ಹಾಗೆ ಆಡಿದ್ದರೆ, ನಿಮ್ಮ ಗತಿ ಎನಾಗುತಿತ್ತು ಯೋಚಿಸಿ ಶ್ರೀಮಾನ್ ಜೀವಾ ಅವರೇ. ಮತ್ತೊಂದು ವಿಷಯ ನಮಗೆ ಕ್ರೀಡೆಯಲ್ಲಿ ಅಷ್ಟೇ ಅಲ್ಲ ಎಲ್ಲದರಲ್ಲೂ ಕ್ರೀಡಾ ಮನೋಭಾವ ಜಾಸ್ತಿನೇ ಇದೆ. ಅದು ಇಲ್ಲದಿದ್ದರೆ ನಮ್ಮ ಕನ್ನಡ ನಿರ್ಮಾಪಕರು ನೀವು ಬೆಂಗಳೂರಿನಲ್ಲಿ ನಮ್ಮ ಮೇಲೆ ಆಟ ಆಡಲು ಬಂದಾಗ ನಿಮ್ಮ ಬಾವುಟವನ್ನು ಹಿಡಿದು ಕುಣಿದು ಕುಪ್ಪಳಿಸಲ್ಲಿವೇ. ಅಲ್ಲದೇ ನಮ್ಮ ರಾಜ್ಯದಲ್ಲಿ ತೆಲುಗು/ತಮಿಳು/ಮಲೆಯಾಳಂ/ಹಿಂದಿ/ಆಂಗ್ಲ ಭಾಷಾ ಚಿತ್ರಗಳು ಬಂದಾಗ ನಮಗೆ ಚಿತ್ರಮಂದಿರಗಳು ಇಲ್ಲದೇ ಇದ್ದರೂ ನಿಮಗೆ ನಮ್ಮ ಚಿತ್ರಮಂದಿರಗಳನ್ನು ಬಿಟ್ಟುಕೊಟ್ಟು ನಾವು ಸುಮ್ಮನೆ ಕುಳಿತುಕೊಳ್ಳವುದನ್ನು ನೋಡಿ ಇಡೀ ಭಾರತ ದೇಶವೇ "ಹೀಗೂ ಉಂಟೇ" ಎಂದು ಮೂಗಿನಮೇಲೆ ಬೆಟ್ಟು ಇಟ್ಟುಕೊಳ್ಳೂವುದನ್ನು ನೀವು ನೋಡಿಲ್ಲವೇ?. ನಿಮ್ಮ ರಾಜ್ಯದಲ್ಲಿ ತಮಿಳು ಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡಿದರೆ ಅವರನ್ನು ನೀವು ಶತ್ರುಗಳನ್ನು ನೋಡುವುದು ಇಡೀ ಭಾರತ ದೇಶಕ್ಕೇ ಗೊತ್ತಿದೆ. ನಿಮ್ಮಿಂದ ಕಲಿಯುವುದು ನಮಗೆ ಬೇಕಾಗಿಲ್ಲ. ಅದು ನಿಮ್ಮಲ್ಲಿಯೇ ಇರಲಿ.  ಕನ್ನಡಭಾಷೆಗೆ ಕೇಂದ್ರ ಸರ್ಕಾರದವರು ಶಾಸ್ತ್ರೀಯ ಸ್ಥಾನಮಾನ ಕೊಟ್ಟಾಗೆ ನೀವು ಅದಕ್ಕೆ ಕೂಡ ಕಲ್ಲು ಹಾಕಿದವರಲ್ಲವೇ. ನಮಗೆ ಒಂದು ಬೇಜಾರಿನ ವಿಷಯವೇನೆಂದರೆ ನೀವು ನಮ್ಮ ಕಾವೇರಿ ನೀರು ಕುಡಿದೂ ನಿಮಗೆ ನಮ್ಮಲ್ಲಿ ಇರುವ ವಿಶಾಲ ಬುದ್ದಿಬರಲಿಲ್ಲವೇ ಎಂಬುದು. ಅದು ನಿಮಗೆ ಬರುವುದೂ ಇಲ್ಲ ಬಿಡಿ. ಧನ್ಯವಾದಗಳು ಹಾಗೂ ಹೀಗೂ ಪಂಧ್ಯವನ್ನು ಗೆದ್ದಿದ್ದಕ್ಕೆ.

No comments:

Post a Comment