Saturday 11 February 2012

ಕನ್ನಡ ಕಲಿಸಿ:

ಮಕ್ಕಳಿಗೆ ಕನ್ನಡ ಕಲಿಸಿ.  ಇಂದಿನ ಮಕ್ಕಳೇ ನಾಡಿನ ಕಣ್ಮಣಿಗಳು.  ನಮಗಷ್ಟೇ ಕನ್ನಡ ಬಂದರೆ ಸಾಕೇ?  ಇದು ಮುಂದುವರೆಯವುದು ಬೇಡವೇ?  ಮಕ್ಕಳಿಗೆ ಕನ್ನಡ ಮಾತನಾಡುವುದು ಬಂದರೆ ಸಾಲದು.  ಅವರಿಗೆ ಓದಲು ಮತ್ತು ಬರೆಯಲು ಕನ್ನಡ ಬರುವುದು ಅವಶ್ಯಕ.  ಇಲ್ಲದಿದ್ದರೆ ಮುಂದೆ ಕನ್ನಡ ಮಾತನಾಡಲು ಮಾತ್ರ ಬರುತ್ತದೆ, ಅದರೆ ಕನ್ನಡ ಓದಲು ಬರೆಯಲು ಬರದ ಜನಾಂಗವೇ ಜಾಸ್ತಿಯಾಗಿ ಕನ್ನಡ ಲಿಪಿ ಕಣ್ಮರೆಯಾಗುತ್ತದೆ.  ಚಿಕ್ಕ ಮಕ್ಕಳಿಗೆ ಕನ್ನಡದ ಶಿಶು ಗೀತೆಗಳನ್ನು ಹೇಳಿಕೊಡಿ.  (ಉದಾ:ಉಂಡಾಡಿ ಗುಂಡ, ನಾಯಿಮರಿ ನಾಯಿಮರಿ, ಬಣ್ಣದ ತಗಡಿನ ತುತ್ತೂರಿ,  ಒಂದು ಎರಡು...... ಇತ್ತ್ಯಾದಿ)  ಮಕ್ಕಳಿಗೆ ಇವನ್ನು ಕಲಿಸಿ www.youtube.com/results?search_query=kannada+makkala+geethegalu&oq=kannada+makkala+geethegalu&aq=f&aqi=&aql=&gs_sm=3&gs_upl=29476l32545l0l34570l13l13l0l0l0l7l260l2636l0.7.6l13l0 ಈ ತಾಣಕ್ಕೆ ಭೇಟಿ ಕೊಡಿ.  ಕನ್ನಡದಲ್ಲಿ ಮಗು ಕತೆ ಹೇಳುವಂತ ಪ್ರೊತ್ಸಾಹಿಸಿ.  ಸ್ವಲ್ಪ ದೊಡ್ಡ ಮಕ್ಕಳಿಗೆ ಕನ್ನಡದ ಕತೆ, ಕಾದಂಬರಿ ಮತ್ತು ಸಾಹಿತ್ಯವನ್ನು ಪರಿಚಯಿಸಿ.  ಕುವೆಂಪು, ಮಾಸ್ತಿ, ಕಾರಂತರು, ಬೇಂದ್ರೆ, ತೇಜಸ್ವಿ, ಆಡಿಗರು, ಗಿರೀಶ್ ಕಾರ್ನಾಡ್, ಅನಂತ ಮೂರ್ತಿ, ಕಂಬಾರರು, ಬೈರಪ್ಪ ಹೀಗೆ ಕನ್ನಡದ ದಿಗ್ಗಜರ ಪುಸ್ತಕಗಳನ್ನು ಒದಿಕೊಳ್ಳೂವಂತಾಗಲಿ. (ನಾನು ಇಲ್ಲಿ ಕೇವಲ ಕೆಲವರನ್ನು ಮಾತ್ರ ಉದಾಹರಣೆಯಾಗಿ ಕೊಟ್ಟಿದ್ದೇನೆ)  ಅನ್ಯಥಾ ಭಾವಿಸಿಬೇಕಾಗಿಲ್ಲ.  ಮಕ್ಕಳಿಗೆ ಕನ್ನಡದ ಭಾವಗೀತೆ, ಜನಪದ ಗೀತೆಗಳನ್ನು ಕೇಳಿಸಿ, ಹೇಳಿ ಕೊಡಿ.

ಕನ್ನಡ ಕಲಿತರೆ ಅದರಿಂದ ನಷ್ಟವೇನಾಗಲಾರದು.  ಅದರಿಂದ ಮುಂದೆ ನಿಮಗೂ ಮತ್ತು ನಿಮ್ಮ ಮಕ್ಕಳಿಗೂ ಪ್ರಯೋಜನವೇ ಜಾಸ್ತಿ.  ಇದರಿಂದ ನಮ್ಮ ಮಕ್ಕಳು ನಮ್ಮ ಸಂಸೃತಿಯನ್ನು ಕಲಿಯುತ್ತಾರೆ.  ಒಮ್ಮೆ ನಮ್ಮ ಸಂಸೃತಿಯನ್ನು ಕಲಿತ ಮಗು ಮುಂದೆ ದೊಡ್ಡದಾದ ಮೇಲೆ ತಂದೆ, ತಾಯಿ, ಗುರುಹಿರಿಯರನ್ನು ಗೌರವಿಸುವುನ್ನು ಕಲಿಯುತ್ತದೆ.  ಕನ್ನಡದಲ್ಲಿ ಕಲಿತರೆ ಮುಂದೆ ಉದ್ಯೋಗ ಕಷ್ಟ ಎಂಬ ಭಾವನೆ ಬಿಡಿ.  ಕನ್ನಡಕ್ಕೊ ಉದ್ಯೋಗಕ್ಕೂ ಸಂಭಂಧವಿಲ್ಲ.  ನಮ್ಮ ಕಛೇರಿಯ ದ್ವಾರಪಾಲಕ ಕೂಡ ಎಲ್ಲರಂತೆ  ಆಂಗ್ಲ ಭಾಷೆಯಲ್ಲಿ ಮಾತನಾಡಬಲ್ಲ.  ಆಂಗ್ಲ ಭಾಷೆಯಲ್ಲಿ ಕಲಿತರೆ ಮಾತ್ರ ಉದ್ಯೋಗ ಎಂಬುದಿಲ್ಲ.  ಕೆಲಸಕ್ಕೆ ಜ್ನಾನ ಮುಖ್ಯ.  ಈಗ ಸುಮಾರು ೮೦-೯೦% ಐಟಿ, ಬಿಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರು ಚಿಕ್ಕಂದಿನಲ್ಲಿ ಕನ್ನಡ ಶಾಲೆಯಲ್ಲಿ ಓದಿದವರೆ.  ಡಾ.ಸಿ.ಎನ್.ಆರ್.ರಾವ್ ನಮ್ಮ ದೇಶದ, ನಾಡಿನ ಹೆಸರಾಂತ ವಿಜ್ನಾನಿಗಳು.  ಇವರಿಗೆ ಇತ್ತೀಚೆಗೆ ೫೩ ಡಾಕ್ಟರೇಟ್ ಪ್ರಶಸ್ತಿಗಳು ದೊರಕಿವೆ.  ಪ್ರಪಂಚದ ಅನೇಕ ವಿಶ್ವವಿದ್ಯಾನಿಲಯಗಳು ತಾಮುಂದು ತಾಮುಂದು ಎಂದು ಇವರಿಗೆ ಡಾಕ್ಟರೇಟ್ ಪ್ರಶಸ್ತಿಗಳನ್ನು ಹುದುಕಿಕೊಂಡು ಬಂದು ಕೊಡುತ್ತಾರೆ.  ಇನ್ನು ನಾಡಿನ ಹೆಸರಾಂತ ಇಂಜಿನಿಯರ್ ಆಗಿದ್ದಂತಹ ಡಾ.ಸರ್.ಎಂ.ವಿಶ್ವೇಶ್ವರಯ್ಯನವರು ಇವರ ಬಗ್ಗೆ ತಿಳಿಯದ ಜನರೇ ಇಲ್ಲ ಈ ನಾಡಿನಲ್ಲಿ.  ಇವರುಗಳು ಕನ್ನಡದ ಶಾಲೆಗಳಲ್ಲಿ ಕಲಿತವರೆ. ಇತ್ತೀಚೆಗೆ ನಾರಾಯಣ ಮೂರ್ತಿ, ಕ್ಯಾಪ್ಟನ್.ಗೋಪಿನಾಥ್ ಹೀಗೆ ನಾಡಿನಲ್ಲಿ ಹೆಸರು ಕೀರ್ತಿ ಗೌರವವನ್ನು ಪಡೆದಿರುವವರು ಚಿಕ್ಕಂದಿನಲ್ಲಿ ಇವರು ಸಹ ಕನ್ನಡದಲ್ಲಿ ಕಲಿತವರೇ.  ಆಂಗ್ಲ ಭಾಷೆಯಲ್ಲಿ ಕಲಿತವರು ಮಾತ್ರ ಬುದ್ದಿವಂತರು ಮಿಕ್ಕವರು ಇಲ್ಲ ಎಂಬ ಭಾವನೆಯನ್ನು ಬಿಟ್ಟುಬಿಡಿ.  ಓದುವುದು ಜ್ನಾನ ಸಂಪಾದನೆಗಾಗಿ ಮಾತ್ರ.  ಮಕ್ಕಳಿಗೆ ಕನ್ನಡದಲ್ಲಿ ಮೊದಲು ಸರಿಯಾದ ಜ್ನಾನವನ್ನು ಕೊಡಿ.  ಮುಂದೆ  ಮಕ್ಕಳು ಆಂಗ್ಲಭಾಷೆಯನ್ನಷ್ಟೇ ಅಲ್ಲದೆ ಅನೇಕ ಭಾಷೆಗಳನ್ನು ತಮ್ಮಷ್ಟಕ್ಕೆತಾವೆ ಕಲಿಯುತ್ತಾರೆ.  ಕನ್ನಡಕ್ಕೆ ಆಂಗ್ಲ ಭಾಷೆ ಮತ್ತು ಇತರೆ ಭಾಷೆಗಳು ಊರುಗೊಲಾಗಿರಲಿ, ಅದೇ ಕಾಲುಗಳಾಗುವುದು ಬೇಡ.  ಇಂದಿನ ಅನೇಕ ಮಕ್ಕಳು ಪಾಠವನ್ನು ಉರುಹೊಡೆಯುತ್ತರೆ.  ಅದರಲ್ಲಿ ಇರುವ ವಿಷಯಗಳಬಗ್ಗೆ ಅರಿವಿಲ್ಲ.  ಇದರಿಂದ ಮುಂದೆ ಅವರಿಗೇ ನಷ್ಟ. ಇತ್ತೀಚೆಗೆ ನಾರಾಯಣಮೂರ್ತಿಯವರು ಒಂದುಕಡೆ ನಮ್ಮಲ್ಲಿ ಐ.ಐ.ಟಿಯಲ್ಲಿ ಉತೀರ್ಣರಾಗಿ ಬಂದು ನಮ್ಮಲ್ಲಿ ಕೆಲಸ ಮಾಡುವವರೂ ಸಹ ಸೃಜನಶೀಲರಾಗಿಲ್ಲ ಎಂದು ಹೇಳಿದ್ದಾರೆ.   ಇದು ಆಂಗ್ಲ ಬಾಷೆಯಲ್ಲಿ ಓದಿ ಉರುಹೊಡೆದವರ ಲಕ್ಷಣ. ಮಕ್ಕಳಿಗೆ ಮಾತೃಭಾಷೆಯಲ್ಲಿ ಎನು ಓದುತ್ತಿದ್ದೇವೆ ಎಂಬ ಅರಿವಿರಬೇಕು.  ಆಗ ಉರುಹೊಡೆಯುವುದು ತಪ್ಪುತ್ತದೆ.  ಜ್ನಾನ ಹೆಚ್ಚುತ್ತದೆ.  ಆ ಕಾರಣಕ್ಕಾಗೇ ಹಿರಿಯ ಭಾಷಾ ವಿದ್ವಾಂಸರು, ಶಿಕ್ಷಣ ತಜ್ನರು, ಕವಿಗಳು, ಸಾಹಿತಿಗಳು ಮಕ್ಕಳಿಗೆ ಕನ್ನಡದಲ್ಲೇ ಬಾಲ್ಯ ಶಿಕ್ಷಣ ದೊರಕಬೇಕೆಂದು ಹೇಳುತ್ತಿರುವುದು.  ಉಚ್ಚನ್ಯಾಯಾಲಯವು ಸಹ ಈ ವಾದವನ್ನು ಒಪ್ಪುತ್ತಿವೆ.  ಇನ್ನು ಗುಣಮಟ್ಟದ ಕನ್ನಡ ಶಾಲೆಗಳು, ಅದರ ಕಾರ್ಯ ವೈಖರಿ ಮತ್ತು ಅದರಲ್ಲಿ ಇರುವ ಸೌಲಭ್ಹ್ಯಗಳ ಬಗ್ಗೆ ತಿಳಿಯಲು ನಮ್ಮ ಸ್ನೇಹಿತರ kalikeyu.blogspot.com ತಾಣಕ್ಕೆ ಭೇಟಿ ಕೊಡಿ.


No comments:

Post a Comment