Thursday 19 January 2012

ಗಾಂಚಲಿ ಬಿಡಿ ಕನ್ನಡ ಮಾತಾಡಿ:

ಮ್ಮುಖ್ಯವಾಗಿ ಈ ವಿಷಯ ಇಲ್ಲಿ ಪ್ರಸ್ತಾಪ ಮಾಡುವ ಕಾರಣ ಎನೆಂದರೆ ನಮ್ಮ ಕನ್ನಡಿಗರಲ್ಲಿ ಕೆಲವರು ಇಲ್ಲಿ ಹುಟ್ಟಿ ಬೆಳೆದು ದೊಡ್ಡವರಾಗಿ ಬೇರೆ ರಾಜ್ಯಗಳಲ್ಲಿ/ವಿದೇಶಗಳಲ್ಲಿ ನೆಲೆಸಿ ಹಣ, ಕೀರ್ತಿ, ಗೌರವ ಸಂಪಾದಿಸಿದವಾರಿದ್ದರೆ. ಅದರಲ್ಲಿ ಅನೇಕರು ಎಲ್ಲೇ ಹೋದರೂ ಕನ್ನಡವನ್ನು ಮರೆಯದೆ ನಾವು ಮೊದಲು ಕನ್ನಡಿಗರೇ.  ಎಲ್ಲಾದರೂ ಇರು, ಎಂತಾದರೂ ಇರು ಮೊದಲು ಕನ್ನಡಿಗನಾಗಿರು ಎಂಬ ಕವಿವಾಣಿಯಯನ್ನು ಮರೆಯದೆ ನಿಜ ಜೀವನದಲ್ಲೂ ಹಾಗೆ ನಡೆದುಕೊಂಡವರಾಗಿದ್ದಾರೆ. ಉದಾಹಾರಣೆಗೆ ರಜನಿಕಾಂತ್, ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ, ದೀಪಿಕಾ ಪಡುಕೊಣೆ, ಅನುಷ್ಕಾ ಶರ್ಮ, ಅನುಷ್ಕಾ ಶೆಟ್ಟಿ,  ಪ್ರಭುದೇವ, ಸುಮನ್ ರಂಗನಾಥ್, ಸುಮನ್, ಅರ್ಜುನ್ ಸರ್ಜ,  ರವಿಶಾಸ್ತ್ರಿ, ಡಾ.ನೀರಜ್ ಪಾಟೀಲ್ (ಮಹಾ ಪೌರರು-ಲಂಡನ್ ನಗರ) ಪ್ರಕಾಶ್  ರೈ, ಚರಣ್ ರಾಜ್ ಮುಂತಾದವರು ನಮ್ಮ ಕನ್ನಡಿಗರು.  ಅವರಲ್ಲಿ ಕೆಲವರು ಇಲ್ಲಿಗೆ ಬಂದಾಗ ಕನ್ನಡದಲ್ಲಿ ಮಾತನಾಡಿದರೆ ನಮಗೆ ಎಲ್ಲಿ ಲಕ್ವ ಹೊಡೆಯುವುದೊ ಎಂದು ಭಾವಿಸುತ್ತಾರೆ.  ಕನ್ನಡ ಬಂದರೂ ಮಾತನಾಡದೆ ಅಗೌರವ ತೊರಿಸುತ್ತಾರೆ. ಆದರೆ ನಮ್ಮ ರಜನಿಕಾಂತ್, ಅರ್ಜುನ್ ಸರ್ಜ, ಪ್ರಕಾಶ್ ರೈ, ಸುಮನ್ ರಂಗನಾಥ್, ಸುಮನ್, ಪ್ರಭುದೇವ, ಚರಣ್ ರಾಜ್ ಅವರುಗಳು ಇಲ್ಲಿಗೆ ಬಂದಾಗ ನಮ್ಮ ಕನ್ನಡದಲ್ಲಿ ಮಾತಾಡಿ ಅವರ ಅಭಿಮಾನವನ್ನು ತೊರಿಸುತ್ತಾರೆ.  ಇಲ್ಲಿಯೂ ಸಹ ನಮ್ಮ ಕನ್ನಡ ಚಿತ್ರಗಳಲ್ಲಿ ನಟಿಸುತ್ತಾರೆ ಕೂಡ.  ಅರ್ಜುನ್ ಸರ್ಜ, ಪ್ರಕಾಶ್ ರೈ ಅಂತಹವರು ನಮ್ಮ ಕನ್ನಡ ಚಿತ್ರಗಳಲ್ಲಿ ನಟಿಸುವುದಷ್ಟೇ ಅಲ್ಲದೇ ನಿರ್ಮಿಸಿ ನಿರ್ದೇಶನವನ್ನೂ ಮಾಡಿರುತ್ತಾರೆ.   ಐಶ್ವರ್ಯ ರೈ ಇಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಬಂದಾಗ ಕೆಟ್ಟ ಕನ್ನಡದಲ್ಲಿ ಮಾತನಾಡಿರುವುದನ್ನು ನೀವೆಲ್ಲಾ ನೋಡಿದ್ದೀರ. www.youtube.com/watch?v=F0kqNwNQYYY) ದೀಪಿಕಾ ಪಡುಕೊಣೆಯಂತೂ ತಮ್ಮ ಮೊದಲ ಚಿತ್ರ ಕನ್ನಡದ ಐಶ್ವರ್ಯ ಎಂಬುದನ್ನು ಎಲ್ಲಾದರೂ ಹೇಳಿರುವುದನ್ನು ಕೇಳಿದ್ದೀರಾ ಸ್ನೇಹಿತರೆ.  ಇವರಿಗೆಲ್ಲಾ ನಮ್ಮ ಧಿಕ್ಕಾರ.  ಇಂತಹದವರಿಗೆ ಹೇಳುವುದು ಗಾಂಚಲಿ ಬಿಡಿ   ಕನ್ನಡದಲ್ಲಿ ಮಾತಾಡಿ ಎಂದು. (ಈ ಹೆಸರಿನಲ್ಲಿ ನಮ್ಮ ಸ್ನೇಹಿತರ  gaanchalibidi kannadadallli maataadi ಎಂಬ ಫ಼ೇಸ್ ಬುಕ್ ಇದೆ).  ನಮ್ಮ ಡಾ.ನೀರಜ್ ಪಾಟೀಲ್ ಅವರಂತೂ ನಮ್ಮ ಹೆಮ್ಮೆಯ ಕನ್ನಡಿಗರೇ ಸರಿ.  ಅವರು ಬಂದು ಕನ್ನಡದಲ್ಲಿ ಮಾತನಾಡುವುದೇನು, ಹಾಡು ಹೇಳುವುದೇನು ಅದನ್ನು ನೊಡುವುದೆ ನಮ್ಮ ಸೌಭಾಗ್ಯ.  ಇನ್ನು  ರಜಿನಿಕಾಂತ್ ಇಲ್ಲಿಗೆ ಬಂದಾಗ ಕನ್ನಡದ ಚಿತ್ರಗಳನ್ನು ಚಲನಚಿತ್ರ ಮಂದಿರಗಳಲ್ಲಿ ನೊಡುತ್ತಾರೆ.  ಅವರ ಸ್ನೇಹಿತರೊಂದಿಗೆ ಕನ್ನಡದಲ್ಲಿ ಮಾತನಾಡುತ್ತಾರೆ. ಕನ್ನಡದಲ್ಲಿ ಪತ್ರ ಬರೆಯುತ್ತಾರೆ, ಕನ್ನಡದ ಕಾದಂಬರಿಯನ್ನು ಓದುತ್ತಾರೆ.  ಕನ್ನಡದ ಬಗ್ಗೆ ಇನ್ನೂ ಪ್ರೀತಿ, ವಿಶ್ವಾಸ, ಅಭಿಮಾನ ಹೊಂದಿರುವ ರಜನಿಯನ್ನು ಬೇರೆ ಕಲಾವಿದರು ನೋಡಿ ಕಲಿಯುವುದು ಬಹಳಷ್ಟು ಇದೆ. ರಜನಿಯವರು ಈಗ ಮನೆಯಲ್ಲಿ ಹೆಂಡತಿ ಮಕ್ಕಳ ಹತ್ತಿರ ಯಾವ ಭಾಷೆಯಲ್ಲಿ ಮಾತನಾಡುತ್ತರೆ ಎಂಬ ಕುತೂಹಲ ಎಲ್ಲರಂತೆ ನನಗೊ ಇದೆ.   ನಾನು ಕನ್ನಡದಲ್ಲಿ ನಟಿಸುವೆ.  ಒಳ್ಳೆ ಕಥೆ ತನ್ನಿ ಎಂದು ಅನೇಕ ಬಾರಿ ಹೇಳಿರುತ್ತಾರೆ.  "ದಳವಾಯಿ ಮುದ್ದಣ್ಣ" ಎಂಬ ಚಿತ್ರದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸುತ್ತಾರೆ.  .  ನಮ್ಮ ನಿಮಾ೯ಪಕರಾದ ದ್ವಾರಕೀಶ್, ಮುನಿರತ್ನಂ, ಕೊಬ್ರಿ ಮಂಜ, ರಾಕ್ಲೈನ್ ವಂಕಟೇಶ್ ಮನಸ್ಸು ಮಾಡಿದರೆ ಕನ್ನಡದಲ್ಲಿ ರಜನಿಕಾಂತ್ ಚಿತ್ರ ಬರುವುದು ಅಸಾಧ್ಯವೇನಲ್ಲ ಎಂದು ನನ್ನ ಭಾವನೆ. ಅವರೇ ಆದನ್ನು ನಿರ್ಮಾಣ ಮಾಡಿದರೆ ನಮಗೆ ಇನ್ನೂ ಸಂತೋಷವಾಗುತ್ತದೆ  www.youtube.com/watch?v=R6a7GlFNO48
ಇನ್ನು ಬೇರೆ ಭಾಷೆಯವರಾದಾರೂ ಕಮಲ್ ಹಾಸನ್, ಇಳೆಯರಾಜ, ಎಸ್.ಪಿ.ಬಾಲಸುಬ್ರಮಣ್ಯಂ, ಶರತ್ ಕುಮಾರ್ ಮುಂತಾದವರು ಇಲ್ಲಿಗೆ ಬಂದಾಗ ಕನ್ನಡದಲ್ಲಿ ಮಾತನಾಡಿ ನಮ್ಮ ಮನಸ್ಸನ್ನು ಗೆದ್ದಿದ್ದಾರೆ.   ಇದೆಲ್ಲಾ ಸರಿ, ಆದರೆ ಇಲ್ಲೇ ಹುಟ್ಟಿ, ಬೆಳೆದು ದೊಡ್ಡವರಾದ  ಕೆಲ ಕನ್ನಡ ಮಾತಾಡುವ ಕನ್ನಡಿಗರು ಒಳ್ಳೆ ಹೆಸರು, ಹಣ, ಕೀರ್ತಿ ಗಳಿಸಿದ ತಕ್ಷಣ ಕನ್ನಡವನ್ನು ಮರೆತು ಕನ್ನಡಕ್ಕೆ ದ್ರೊಹ ಮಾಡುವವರಿದ್ದಾರಲ್ಲಾ? ಇವರಿಗೆ ನಾವು ಹೇಳುವುದು ಗಾಂಚಲಿ ಬಿಡಿ, ಕನ್ನಡದಲ್ಲಿ ಮಾತಾಡಿ ಎಂದು. ನಾವು ಕನ್ನಡಿಗರೇ ಅಲ್ಲ ಅಂತ ಹೇಳಿಕೊಳ್ಳುದ ಒಂದು ವರ್ಗ ಇದೆ. ಅವರಿಗೆ ಕನ್ನಡದ ನೆಲ, ನೀರು, ಗಾಳಿ ಎಲ್ಲಾ ಬೇಕು. ಕನ್ನಡ ಮಾತ್ರ ಬೇಡ.  ನಮ್ಮ ಹೆಮ್ಮೆಯ ಗೋಡೆ ಎಂದು ಕರೆಸಿಕೊಳ್ಳುವ ರಾಹುಲ್ ದ್ರಾವಿಡ್ ಕನ್ನಡದಲ್ಲಿ ಮಾತನಾಡಿರುವುದನ್ನು ಕೇಳಿರುವಿರಾ? www.youtube.com/watch?v=964MqQqeMAk  ಇದು ಒಬ್ಬರು ಹೇಳಿಕೊಡುವ ವಿಷಯವಲ್ಲ.  ಅದು ಹೃದಯದಲ್ಲಿ ಇರಬೇಕು.  ಇದು ನಾವು ನಮ್ಮ ಭಾಷೆಗೆ ಕೊಡುವ ಗೌರವ, ಸಮ್ಮಾನ.  ಇದು ಕೇವಲ ಕಲಾವಿದರಿಗೆ ಮಾತ್ರ ಅನ್ವಯಿಸುವುದಿಲ್ಲ.  ಎಲ್ಲಾ ಕ್ಷೇತ್ರದ ಜನರಿಗೂ ಅನ್ವಯಿಸುವ ಮಾತು. ಇದೆಲ್ಲಾ ನೋಡಿದರೆ ನನಗೆ ಒಂದೊಂದು ಸಲ ಅನ್ನಿಸುತ್ತದೆ. ಇದು ನಮಗೆ ಆ ದೇವರು ಕೊಟ್ಟ ಶಾಪವೊ ಅಂತ. ಯಾಕೆಂದರೆ ನೋಡಿ ಕನ್ನಡದಲ್ಲಿ ಮಾತಾಡಿ, ಕಲಿಯಿರಿ ಅಂತ ನಾವು ನಮ್ಮವರಿಗೆ ಹೇಳಬೇಕಾಗಿದೆಯಲ್ಲ.



No comments:

Post a Comment