Wednesday 11 January 2012

ಕೀಳರಿಮೆ ಬಿಡೋಣ:

ಮೊದಲು ನಮ್ಮ ಕನ್ನಡಿಗರು ನಮ್ಮಲ್ಲಿರುವ ಕೀಳರಿಮೆಯನ್ನು ಬಿಡಬೇಕು.  ನಾವು ಯಾವುದರಲ್ಲಿಯೂ ಕಡಿಮೆಯಿಲ್ಲ ಎಂಬುದನ್ನು ಮೊದಲು ಅರಿಯಬೇಕು.  ನಮ್ಮಲ್ಲಿ ೮ ಜ್ಣಾನಪೀಠಿಗಳಿದ್ದಾರೆ.  ಇದು ಭಾರತದಲ್ಲೇ ಹಿಂದಿಯನ್ನು ಬಿಟ್ಟರೆ ಅತ್ಯಧಿಕ.  (ಹಿಂದಿ-೯, ಬೆಂಗಾಳಿ-೫, ಮಲೆಯಾಳಂ, ಉರ್ದು-೪, ಗುಜರಾತಿ, ಮರಾಠಿ, ಒರಿಯ-೩, ಅಸ್ಸಾಮಿ, ಪಂಜಾಬಿ, ತಮಿಳು-೨, ತೆಲುಗು, ಕಾಶ್ಮೀರಿ, ಕೊಂಕಿಣಿ, ಸಂಸ್ಕ್ರುತ-೧) (http://en.wikipedia.org/wiki/Kannada) ನಮಗೆ ಇನ್ನೂ ೩-೪ ಜ್ನಾನಪೀಠ ಪ್ರಶಸ್ತಿಗಳು ಬರಬೇಕಿತ್ತೆಂದು ಹಿರಿಯರು, ಕವಿಗಳು, ಜ್ನಾನಿಗಳು ಹೇಳುತ್ತಾರೆ.  (ಅಡಿಗರು,  ತೇಜಸ್ವಿಯವರು, ಡಿ.ವಿ.ಗುಂದಪ್ಪನವರು, ಪು.ತಿ.ನರಸಿಂಹಸ್ವಾಮಿಯವರು ಮತ್ತು ಬೈರಪ್ಪನವರಿಗೆ ಈಗಾಗಲೆ ಒಲಿದು ಬರಬೇಕಾಗಿತ್ತು.)  ನಮಗೆ ಮೂರಾದರೂ ಸಾಹಿತ್ಯ ನೊಬೆಲ್ ಪ್ರಶಸ್ತಿಗಳು ಬರಬೇಕಾಗಿತ್ತೆಂದು ಹೇಳುವವರಿದ್ದಾರೆ.  (ಕುವೆಂಪು ಅವರಿಗೆ, ಮಾಸ್ತಿ ಯವರಿಗೆ ಮತ್ತು ಬೇಂದ್ರೆ ಯವರಿಗೆ)  ಒಬ್ಬರು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸೃತರು.  ೫೫ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಿದ್ದಾರೆ. (೧೯೫೫ ರಲ್ಲಿ ಮೊದಲ ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತರಾದ ಕುವೆಂಪು ಅವರಿಂದ ಹಿಡಿದು ಇತ್ತೀಚಿನ ೨೦೧೧ರ ಗೋಪಾಲಕೃಷ್ಣ ಪೈ ಅವರು) ೧೯೫೭ ಮತ್ತು ೧೯೬೩ ಈ ಎರಡು ವರ್ಷ ಬಿಟ್ಟರೆ ಪ್ರತಿ ವರ್ಷವೂ ಕೇಂದ್ರ ಸಾಹಿತ್ಯ ಪ್ರಶಸ್ತಿ ನಮಗೆ ಬಂದಿದೆ.  ೩ ರಾಷ್ಟ್ರಕವಿಗಳಿದ್ದಾರೆ. (ಗೋವಿಂದ ಪೈ ಅವರು, ಕುವೆಂಪು ಅವರು, ಜಿ.ಎಸ್.ಶಿವರುದ್ರಪ್ಪನವರು)  ಇನ್ನೇನು ಬೇಕು ಸ್ನೇಹಿತರೆ.  ನಾವು ಸಾಹಿತ್ಯ ಲೋಕದಲ್ಲಿ ಭಾರತದಲ್ಲೇ ಪ್ರಥಮ ಸ್ಥಾನದಲ್ಲಿದ್ದೇವೆ.   ಇನ್ನು ಕಲೆ, ಚಲನಚಿತ್ರ, ನಾಟಕ, ರಂಗಭೂಮಿ, ವಚನ ನಾಹಿತ್ಯ, ಗಮಕ, ಜಾನಪದ ಸಾಹಿತ್ಯ, ಭಾವಗಿತೆ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಕ್ರೀಡೆ ಯಾವುದು ಬೇಕು ಸ್ನೇಹಿತರೆ, ಎಲ್ಲಾದರಲ್ಲೂ ಇರುವ ನಾವು ಯಾವುದರಲ್ಲಿ ಕಡಿಮೆ ಇದ್ದೇವೆ ಹೇಳಿ ಆಭಿಮಾನವೊಂದನ್ನು ಬಿಟ್ಟು.  ಇಲ್ಲಿ ನಾನು ಕೆಲವೊಂದು ಮತ್ತು ಕೆಲವರ ಉದಾಹರಣೆಯನ್ನು ಮಾತ್ರ ಕೊಟ್ಟಿದ್ದೇನೆ.  ಅನ್ಯಥಾ ಭಾವಿಸಿಬೇಡಿ.  ಇವೆಲ್ಲಾ ನಮಗೆ ಗೊತ್ತಿರುವ ಸಂಗತಿ.  ಆದರೂ ನಮ್ಮಲ್ಲಿ ಕೆಲವರಿಗೆ ನಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳೂವುದರಲ್ಲಿಯೆ ಆನಂದ.  ಮೊದಲು ನಾವು ನಮ್ಮ ಈ ಕೀಳರಿಮೆಯನ್ನು ಬಿಟ್ಟು ಮುಂದಿನ ಯೋಚನೆಯನ್ನು ಮಾಡೋಣ. ಇಷ್ಟೆಲ್ಲಾ ಇದ್ದೂ ನಾವು ಯಾಕೆ ಹಿಂದುಳಿದ್ದೇವೆ ಎಂದರೆ ನಮ್ಮಲ್ಲಿರುವ ಅಭಿಮಾನ ಶೂನ್ಯವೇ ಎಂದು ನನ್ನ ಭಾವನೆ.  ನೀವು ಎನನ್ನುವಿರಿ ಸ್ನೇಹಿತರೆ. 


No comments:

Post a Comment