ಒ, ಆಗಲೆ ಕಥೆ ಕೇಳಕ್ಕೆ ಬಂದುಬಿಟ್ರಾ? ನೀವೆಲ್ಲಾ ತುಂಬಾ ಒಳ್ಳೆಯವರು, ಜಾಣ ಮರಿಗಳು. ಈಗ ಕಥೆ ಹೆಳ್ಳಾ, ಅದ್ಸರಿ ನೀವು ಕಾಫಿ ಚಿಕ್ಕಪ್ಪನ್ನ ನೋಡಿದ್ರಾ? ಹೇಗಿದ್ದಾರೆ? ಎಸ್ಟೊಂದು ವಿಷ್ಯ ತಿಳ್ಕೊಂಡಿದ್ದಾರಲ್ವಾ (enguru.blogspot.com) ಅವಾಗಾವಾಗ ಅವರನ್ನು ಭೇಟಿ ಮಾಡ್ತಾ ಇರಿ ವಿಷ್ಯ ತಿಳಿದುಕೊಳ್ತಾ ಇರಿ. ಮತ್ತೆ ಇನ್ನೊಂದು ವಿಷ್ಯ ನಾನು ಕಥೆ ಹೇಳಬೇಕಾದರೆ ನೀವು ಮಧ್ಯದಲ್ಲಿ ಬಾಯಿ ಹಾಕಬಾರದು ಸರೀನಾ, ಮತ್ತೆ ಹೂ... ಹೂ... ಅಂತ ಅನ್ನಬೇಕು. ಅನ್ನಲಿಲ್ಲಾ ಅಂದ್ರೆ ಕಥೆ ನಿಲ್ಲಿಸಿ ಬಿಡ್ತೀನಿ ಅಷ್ಟೆ. ಅದು ತುಂಬಾ ದೊಡ್ಡ ಕಥೆ. ಅದ್ರೆ ನಾನು ಅದನ್ನು ಚಿಕ್ಕದಾಗಿ ನನಗೆ ಎಷ್ಟು ಜ್ನಾಪಕ ಇದ್ಯೊ ಅಷ್ಟು ಹೇಳ್ತೀನಿ. ನಾನು ಪುಟ್ಟ ಪಾಪು ಅಲ್ವಾ. ತಪ್ಪಾಗಿದ್ರೆ ಕ್ಷಮಿಸಿ ಮತ್ತೆ ಹೊ....ಹೂ. ಅನ್ನಬೇಕು.
ನಮ್ಮ ದೇಶ ಮೊದಲು ತುಂಬಾ ದೊಡ್ಡದಾಗಿತ್ತಂತೆ. ಅದರಲ್ಲಿ ನಾವೆಲ್ಲಾ ಒಟ್ಟಾಗಿ ವಾಸ ಮಾಡ್ತಿದ್ವಂತೆ. ಯಾರೊ ಪರಂಗಿ ದೇಶದ ದೊಡ್ಡಪ್ಪ ಇಲ್ಲಿ ವ್ಯಾಪಾರ ಮಾಡ್ತೀವಿ ಜಾಗ ಕೊಡಿ ಅಂತ ಬಂದು ಇಲ್ಲೇ ಇದ್ದುಬಿಟ್ರಂತೆ. ನಮ್ಮ ಹತ್ರ ಇರೊ ಹಣ, ಬಂಗಾರ ಎಲ್ಲಾ ತೆಗೆದುಕೊಂಡು ನಮ್ಮನ್ನ ಆಳುಗಳ ಥರ ನಡೆಸಿಕೊಳ್ತಾ ಇದ್ರಂತೆ. ಆಮೇಲೆ ಗಾಂಧಿ ತಾತ ಬಂದು ನಮ್ಮ ದೇಶ ನಮಗೆ ಕೊಟ್ಟುಬಿಡಿ ಇಲ್ಲಾಂದ್ರೆ ನಾನು ಊಟ ಮಾಡಲ್ಲ ಮತ್ತು ನಮ್ಮ ಜನಾನು ಊಟ ಮಾಡಲ್ಲ ಅಂತ ಹೇಳಿ ಅವರನ್ನು ಒಡಿಸಿಬಿಟ್ರಂತೆ. ಆವರು ಅವರ ದೇಶಕ್ಕೆ ಹೊಗೊ ಮೊದಲು ಒಂದು ಕೆಟ್ಟ ಕೆಲಸ ಮಾದಿಬಿಟ್ರಂತೆ. ನಮ್ಮ ದೇಶನ್ನ ಭಾಗ ಮಾಡಿ ಭಾರತ ಮತ್ತು ಪಾಕಿಸ್ತಾನ ಅಂತ ಹೆಸೆರಿಟ್ಟು ಅವರವರೆ ಜಗಳ ಮಾಡಿಕೊಂಡಿರಲಿ ಅಂತ ಹೊಗ್ಬಿಟ್ರಂತೆ. ಇವತ್ತಿಗೊ ಆ ಜಗಳ ನಿಂತಿಲ್ಲ. ಎನು ನೀವು ಹೂ.....ಹೂ....ಅಂತಾನೆ ಇಲ್ಲಾ. ಹೋಗಿ ನಾನು ಕಥೆ ಹೇಳಲ್ಲ. ನಾಳೆ ಮಿಕ್ಕಿದ್ದು. ಹೋಗೊ ಮೊದಲು ನೀವು ದೊಡ್ಡಪ್ಪಾ (www.totalkannada.com) ಗೆ ಹೋಗ್ಬಿಟ್ಟು ಬನ್ನಿ. ಅಲ್ಲಿ ಕನ್ನಡದ ಗಡಿಯಾರ, ಕನ್ನಡದ ಪುಸ್ತಕಗಳು, ಅಡಕ ತಟ್ಟೆಗಳು ಮತ್ತೆ ಎಲ್ಲಾನೂ ಸಿಗತ್ತೆ.
No comments:
Post a Comment