Saturday 21 July 2012

" ವಾಟ್ ಎನ್ ಐಡಿಯಾ ಸರ್ಜಿ "!!!!!


ಸರ್ಕಾರಿ ಕಚೇರಿಗಳಲ್ಲಿ ಯಾವ ಕೆಲಸವಾಗಬೇಕಾದರೂ ಲಂಚವಿಲ್ಲದೆ ಆಗುವುದಿಲ್ಲ. ಇದು ಎಲ್ಲರ ಅನುಭವವೂ ಹೌದು.  ಪಾಟ್ನಾದಲ್ಲಿ ಒಬ್ಬ ಬಡ ರೈತನಿಗೆ ಆ ಊರಿನೆ ಭೂ ಮಾಲೀಕರಿಂದ ಜೀವ ಬೆದರಿಕೆ ಇತ್ತು.  ತನ್ನ ಜೀವಕ್ಕೆ ರಕ್ಷಣೆ ಕೊಡಿ ಎಂದು ಪೋಲೀಸರನ್ನು ಕೇಳಿದಾಗ,  ಪೋಲೀಸರು ಅದಕ್ಕಾಗಿ ೧,೦೦೦ ರೊಪಾಯಿಗಳನ್ನು ಲಂಚವಾಗಿ ಅವನಿಂದ ಕೇಳಿದರು.  ಮೊದಲೇ ಬಡ ರೈತ. ಅವನ ಹತ್ತಿರ ಬಿಡುಕಾಸೂ ಇಲ್ಲ. ಆದರೆ ಅವನು ಸುಮ್ಮನಾಗಲಿಲ್ಲ. ಇದರ ಬಗ್ಗೆ ಯೋಚಿಸಿದಾಗ ಅವನಿಗೊಂದು ಆಲೋಚನೆ ಹೊಳೆಯಿತು.  ಅವನು ಬಿಕ್ಷೆ ಎತ್ತಿ ೧,೦೦೦ ರೊಪಾಯಿಗಳನ್ನು ಜಮಾ ಮಾಡಿ ೧೦೦ ರೊಪಾಯಿಯ ೧೦ ಪೋಸ್ಟಲ್ ಆರ್ಡರ್ ಗಳನ್ನು ಕೊಂಡು ಕಾನೂನಿನಲ್ಲಿ ಅವಕಾಶವಿದ್ದರೆ ನಾನು ಬಿಕ್ಷೆ ಎತ್ತಿದ ಈ ಹಣವನ್ನು ಆ ಪೋಲೀಸ್ ಅಧಿಕಾರಿಗೆ ಕಳುಹಿಸಿ" ಎಂದು ಆ ರಾಜ್ಯದ ಮುಖ್ಯಮಂತ್ರಿಗೆ ಕಳುಹಿಸಿದ್ದಾನೆ. ಆಮೇಲೇನಾಯಿತೋ ಗೊತ್ತಿಲ್ಲ. ನಾನು ಈ ಸುದ್ದಿಯನ್ನು ಮೊನ್ನೆ ಒಂದು ಪತ್ರಿಕೆಯಲ್ಲಿ ಓದಿದೆ. ಇದಾದ ಮೇಲೆ ಮತ್ತೊಬ್ಬ ತಮಿಳುನಾಡಿನ ವ್ಯಕ್ತಿ ತನ್ನ ಮಗನ ಜನ್ಮ ದಿನದ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಹೊಡಾಗ ಅವನಿಗೆ ೧೦೦ ರೊಪಾಯಿ ಲಂಚವನ್ನು ಕೇಳಲಾಯಿತು. ಅವನು ಲಂಚದ ಹಣವನ್ನು ಡಿ.ಡಿ.ಮಾಡಿ  "ಇದು ಲಂಚದ ಹಣ" ಎಂದು ಕಳುಹಿಸಿದನಂತೆ. ಆಮೇಲೆ ಪಾಲಿಕೆ ಅಧಿಕಾರಿಗಳು ಅವನಿಗೆ ಜನನ ಪ್ರಮಾಣ ಪತ್ರವನ್ನು ಅವನ ಮನೆಬಾಗಿಲಿಗೆ ಕಳುಹಿಸಿಕೊಟ್ಟರಂತೆ. ಇದೂಂದು ಹೊಸ ರೀತಿಯ ಚಳುವಳಿ ಎಂದೆನಿಸಿತು. ಇದನ್ನು ಎಲ್ಲಾರೂ ಅನುಸರಿಸಬಹುದೇನೋ?  ಅವರ ಕಲ್ಪನೆ ಚೆನ್ನಾಗಿದೆ.  " ವಾಟ್ ಎನ್ ಐಡಿಯಾ ಸರ್ಜಿ "!!!!!

No comments:

Post a Comment