ಕರ್ನಾಟಕ ಅನೇಕ ಕ್ರೀಡಾಪಟುಗಳನ್ನು ದೇಶಕ್ಕೆ ನೀಡಿದೆ, ಕ್ರಿಕೆಟ್, ಕಬ್ಬಡ್ಡಿ, ಹಾಕಿ, ಈಜು, ಅಥ್ಲೆಟಿಕ್ಸ್, ಸ್ನೂಕರ್, ಬಿಲಿಯರ್ಡ್ಸ್, ಫುಟ್ಬಾಲ್ ಹೀಗೆ ಹತ್ತು ಹಲವು ಕ್ರೀಡೆಗಳಲ್ಲಿ ನಮ್ಮ ರಾಜ್ಯದ ಕ್ರೀಡಾಪಟುಗಳು ದೇಶವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಗಾಲ್ಫ್ ಎಂಬ ಅತಿ ಶ್ರೀಮಂತರ ಕ್ರೀಡೆಡೆಯಲ್ಲಿ ನಮ್ಮ ಕನ್ನಡದ ಪ್ರತಿಭೆಯೊಂದು ಸದ್ದಿಲ್ಲದೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಹೊರಟಿದೆ. ಇವರನ್ನು ಈಗಾಗಲೇ ಭಾರತದ ಟೈಗರ್ ವುಡ್ಸ್ ಎಂದು ಕರೆಯುತ್ತಿದ್ದಾರೆ. ಆದರೆ ನಾವು ಅವರನ್ನು ಕನ್ನಡದ ಟೈಗರ್ ಎಂದು ಕರೆಯೋಣ. ಬಡತನದಲ್ಲಿ ಹುಟ್ಟಿ ಗಾಲ್ಫ್ ಅಂಗಳದಲ್ಲಿ ಯಾರೋ ಶ್ರೀಮಂತ ಹೊಡದ ಚೆಂಡನ್ನು ಹೆಕ್ಕಿ ತಂದು ಕೊಡುವು ಕೆಲಸವನ್ನು ಮಾಡುತ್ತಿದ್ದ "ಚಿಕ್ಕ ರಂಗಪ್ಪ"ನೇ ಇಂದಿನ ಭಾರತದ ಟೈಗರ್ ವುಡ್ಸ್. ಇವರು ತಾವು ಮಾಡುತ್ತಿದ್ದ ಕೇಲಸದ ಜೊತೆಜೊತೆಯಾಗಿ ಬೇರೆಯವರು ಆಡುತ್ತಿದ್ದ ಆಟವನ್ನು ನೋಡಿ ಬೇರೆಯವರು ಬಳಸುತ್ತಿದ್ದ ಚೆಂಡು/ಸ್ಟಿಕ್ ಅನ್ನೇ ಬಳಸಿ ಅವರು ಈ ಮಟ್ಟಕ್ಕೆ ಏರಿದ್ದಾರೆ ಎಂದರೆ ಅವರ ಶ್ರದ್ದೆ, ಗುರಿ, ತನ್ಮಯತೆಗೆ ಬೆಲೆ ಕಟ್ಟುವುದಕ್ಕೆ ಆಗುವುದಿಲ್ಲ. ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ, ಈಗ ಆಂಗ್ಲಭಾಷೆಯನ್ನು ಕಲಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶಕ್ಕೆ ಕೀರ್ತಿ, ಗೌರವವನ್ನು ತರಲು ಹೊರಟಿರುವ ನಮ್ಮ ಟೈಗರ್ ಗೆ ಅಭಿನಂದನೆಗಳನ್ನು ತಿಳಿಸಿ ಅವರನ್ನು ಆಶೀರ್ವದಿಸಿ. ಅವರ ಗುರುಗಳಾದ "ವಿಜಯ್ ದಿವೇಜಾ" ಅವರು ಈ ಬಾಲಕನಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ಅವರಿಗೆ ಆಟವನ್ನು ಸರಿಯಾಗಿ ಕಲಿಸಿ ಬೆಳೆಸಿದ್ದಾರೆ.
No comments:
Post a Comment