ಪಂಜಾಬಿನ ಭಟಿಂದಾದಿಂದ ರಾಜಾಸ್ಥಾನದ ಬಿಕನೇರಿಗೆ ತೆರಳುವ ರೈಲಿಗೆ ಇರುವ ಹೆಸರೇ “ಕ್ಯಾನ್ಸರ್ ಎಕ್ಸ್ ಪ್ರೆಸ್ “. ಕೇಳುವುದಕ್ಕೆ ವಿಚಿತ್ರವಾಗಿದೆ ಅಲ್ವಾ. ಹೌದು ಇದು ವಿಚಿತ್ರವಾದರೂ ಸತ್ಯ. ಈ ರೈಲಿನಲ್ಲಿ ಸಾಮಾನ್ಯವಾಗಿ ಪ್ರಯಾಣಿಸುವವರೆಲ್ಲರೂ ಕ್ಯಾನ್ಸರ್ ಪೀಡಿತರು ಮತ್ತು ಅವರ ಬಂಧುಭಾಂದವರು, ಹಾಗಾಗಿ ಈ ರೈಲಿಗೆ ಕ್ಯಾನ್ಸರ್ ಎಕ್ಸ್ ಪ್ರೆಸ್ ಎಂಬ ಹೆಸರು. ಆಹಾರ ಉತ್ಪಾದನೆಯಲ್ಲಿ ಪಂಜಾಬ್ ಯಾವಗಲೂ ಪ್ರಥಮ ಸ್ಥಾನದಲ್ಲೇ ಇರುವಂತಹ ರಾಜ್ಯ. ದೇಶದಲ್ಲಿ ಹಸಿರು ಕ್ರಾಂತಿಯ ಮುಂದಾಳತ್ವವನ್ನು ವಹಿಸಿದ್ದೂ ಕೂಡ ಇದೇ ರಾಜ್ಯವೇ. ಈ ರಾಜ್ಯವು ಅಪಾರ ಪ್ರಮಾಣದ ರಾಸಾಯನಿಕ ಕ್ರಿಮಿನಾಶಕಗಳನ್ನು ಬಳಸುವಲ್ಲಿಯೂ ಸಹ ಪ್ರಥಮ ಸ್ಥಾನದಲ್ಲೇ ಇದೆ. ಅತಿ ಹೆಚ್ಚು ರಾಸಾಯನಿಕ ಕ್ರಿಮಿನಾಶಕಗಳನ್ನು ಬಳಸಿ ತನ್ನ ಸತ್ವಭರಿತ ಭೂಮಿಯನ್ನು ಮಾಲಿನ್ಯಗೊಳಿಸಿದೆ. ಇವುಗಳು ಅಂತರ್ಜಲದಲ್ಲಿ ಕರಗಿ ಅಲ್ಲಿರುವ ಜನರು ಕ್ಯಾನ್ಸರ್ ನಂತಹ ಮರಣಾಂತಿಕ ಖಾಯಿಲೆಗೆ ಒಳಗಾಗುತ್ತಿದ್ದಾರೆ.
ಇತ್ತೀಚೆಗೆ ಪಂಜಾಬ್ ರಾಜ್ಯದ ಮಾಲ್ವಾ ಪ್ರಾಂತ್ಯದಲ್ಲಿರುವ ಅಂತರ್ಜಲವನ್ನು ಪರೀಕ್ಷೆಗೆ ಒಳಪಡಿಸಿದಾಗ ಯುರೇನಿಯಂ ಮತ್ತು ಆರ್ಸೆನಿಕ್, ಪಾದರಸ ಮುಂತಾದ ಲೋಹದ ಅಂಶಗಳು ಪತ್ತೆಯಾಗಿ ಅಲ್ಲಿರುವ ಜನರು ಕ್ಯಾನ್ಸರ್ ಖಾಯಿಲೆಗೆ ತುತ್ತಾಗುತ್ತಿರುವುದು ಕಂಡುಬಂದಿದೆ. ಮಕ್ಕಳು ಹುಟ್ಟುವಾಗಲೇ ಈ ರೋಗಗಳಿಂದ ಬಳಲುತ್ತಿದ್ದಾರೆ. ನೀರಿನಿಂದ ಯುರೇನಿಯಂ ಅನ್ನು ಬೇರ್ಪಡಿಸಲು ಕೆಂದ್ರ ಸರ್ಕಾರ ಪಂಜಾಬಿಗೆ ಹಣಕಾಸು ಸಹಾಯವನ್ನು ಮಾಡುತ್ತಿದೆ. ಸಮಸ್ಯೆಯ ಅರಿವು ನಿಧಾನವಾಗಿ ಅಲ್ಲಿನ ರಾಜ್ಯಕ್ಕೆ ಮತ್ತು ಕೆಂದ್ರಕ್ಕೆ ತಗುಲಿದೆ. ಇದು ಎಲ್ಲಾ ರಾಜ್ಯಕ್ಕೂ ಮತ್ತು ಕೆಂದ್ರಕ್ಕೂ ಎಚ್ಚರಿಕೆ ಗಂಟೆಯೂ ಸಹ. (ಮಿಕ್ಕಿದ್ದು ನಾಳೆಗೆ)
No comments:
Post a Comment