Saturday 7 July 2012

ಕನ್ನಡ ಚಿತ್ರಗಳು ಮತ್ತು ಇನ್ ಬ್ರಾಂಡಿಗ್ ಹಣ :

ಕನ್ನಡ ಚಿತ್ರಗಳಿಗೆ ಇನ್ ಬ್ರಾಂಡಿಗ್ ಹಣ ಬರುತ್ತಿಲ್ಲ. ತೆಲುಗು/ತಮಿಳು/ಹಿಂದಿ ಚಿತ್ರಗಳು ಇನ್ ಬ್ರಾಂಡಿಗ್ ಹಣದಿಂದಲೇ ಚಿತ್ರ ತೆಗೆಯುತ್ತಾರೆ. ಆದರೆ ಕನ್ನಡ ಚಿತ್ರಗಳಿಗೆ ಎಲ್ಲಾ ಹಣವನ್ನು ನಿರ್ಮಾಪಕನೇ ತೆರಬೇಕು. ಕನ್ನಡದಲ್ಲಿ ಪುನೀತ್, ದರ್ಶನ್, ಸುದೀಪ್, ಗಣೇಶ್ ಮುಂತಾದ ನಟರಿದ್ದರೂ ಕಂಪನಿಗಳಿಂದ ಹಣ ಹುಟುವುದಿಲ್ಲ ಎಂದು ಹೇಳುತ್ತಾರೆ.  ಅದಕ್ಕೆ ಮುಖ್ಯ ಕಾರಣ ಕನ್ನಡ ಚಿತ್ರಗಳಲ್ಲಿ ರೌಡಿಸಂ ಆಧಾರಿತ ಚಿತ್ರಗಳು ಜಾಸ್ತಿ. ನಾಯಕ ನಟರು ಕೈಯಲ್ಲಿ ಮಚ್ಚು ಹಿಡಿದರೆ ಕಾರ್ಪೊರೇಟ್ ಕಂಪನಿಗಳು ಹಣ ಹೂಡುವುದಿಲ್ಲ. ಕನ್ನಡದಲ್ಲಿ ಹೊಸ ನಟರಿಗೆ ಇನ್ ಬ್ರಾಂಡ್ ಹಣ ಹುಟ್ಟತ್ತೆ. ಆದರೆ ಪುನೀತ್, ದರ್ಶನ್, ಸುದೀಪ್  ಅಂತಹವರಿಗೆ ಹುಟ್ಟಲ್ಲ, ಕಾರಣ ಮತ್ತದೇ ಮಚ್ಚು. ಆದರೊ ನಮ್ಮ ನಿರ್ಮಾಪಕರು, ನಿರ್ದೇಶಕರಿಗೆ ಬುದ್ದಿ ಬರಲ್ಲ. ಕನ್ನಡ ಚಿತ್ರರಂಗಕ್ಕೆ ಇಂತಹ ಮೂಲಗಳಿಂದ ಹಣ ತರುವುದು ಗೊತ್ತಿಲ್ಲ. ಕಾರ್ಪೊರೇಟ್ ಕಂಪನಿಗಳು ಹಣ ಕೊಡಲು ತಯಾರಾದರೂ ಅವರನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ನಮಗೆ ಬರಲ್ಲ. ನಮ್ಮ ನಿರ್ಮಾಪಕರು, ನಿರ್ದೇಶಕರು ಹೇಳುವುದು ಒಂದು ಮಾಡುವುದು ಮತ್ತೊಂದು ಹಾಗಾಗಿ ನಮ್ಮ ನಿರ್ಮಾಪಕರನ್ನು, ನಿರ್ದೇಶಕರನ್ನು ಕಾರ್ಪೊರೇಟ್ ಮಂದಿ ನಂಬುವುದಿಲ್ಲ. ಉಪೇಂದ್ರರ ಐಶ್ವರ್ಯ ಚಿತ್ರ, ದೇವ್ ಸನ್ ಆಫ್ ಮುದ್ದೇಗೌಡ  ೫೦ ಲಕ್ಷ ಹಣ, ಅಲೆಮಾರಿ ಚಿತ್ರಗಳಿಗೆ ಸುಮಾರು ೧೦ ಲಕ್ಷ ಹಣ ಇನ್ ಬ್ರಾಂಡ್ ರೂಪದಲ್ಲಿ ಬಂದಿತ್ತು.  ಇಂದ್ರಜಿತ್ ಲಂಕೇಶ್ ನನಗೆ ಪುನೀತ್,ಕಾಲ್ ಶೀಟ್ ಸಿಕ್ಕಿದರೆ ನನಗೆ ನಿರ್ಮಾಪಕರೇ ಬೇಡ. ನಾನು ಇನ್ ಬ್ರಾಂಡಿಗ್ ಹಣದಿಂದಲೇ ಚಿತ್ರ ತೆಗೆಯುತ್ತೇನೆ ಎನ್ನುತ್ತಾರೆ. ಇದು ಅವರ ಆತ್ಮವಿಶ್ವಾಸ ಮತ್ತು ತಾಕತ್ತು. ಇದು ಮೊನ್ನೆ ನಾನು ಒಂದು ಲೇಖನದಲ್ಲಿ ಓದಿದ್ದು.

ಇತರ ಚಿತ್ರರಂಗದವರು ನಮಗಿಂತ ಎಷ್ಟು ಮುಂದಿದ್ದಾರೆ ನೋಡಿ. ನಾವು ಅವರಿಂದ ಬಹಳ ಕಲಿಯಬೇಕಿದೆ. ಪರ ಭಾಷಾ ಚಿತ್ರಗಳು  ಅದ್ದೊರಿಯಾಗಿರಲು ಕಾರಣ ಅವರ ಚಿತ್ರಗಳಿಗೆ  ಕಾರ್ಪೊರೇಟ್ ಕಂಪನಿಗಳು ಹಣ ಹೂಡುತ್ತಾರೆ. ಚಿತ್ರದ ನಿರ್ಮಾಪಕರಿಗೆ ಅಷ್ಟಾಗಿ ನಷ್ಟವಾಗುವುದಿಲ್ಲ. ಚಿತ್ರದ ವೆಚ್ಚ ಸುಮಾರು ೫೦ ಕೋಟಿಯಷ್ಟಿದ್ದರೆ, ಇನ್ ಬ್ರಾಂಡಿಗ್ ಮೊತ್ತವೇ ಸುಮಾರು ಅದರ ಅರ್ಧದಷ್ಟಿರುತ್ತದೆ. ಇನ್ನು ಟಿ.ವಿ. ರೈಟ್ಸ್, ಆಡಿಯೊ ರೈಟ್ಸ್ ಮುಂತಾದವು ನಿರ್ಮಾಪಕನನ್ನು ಹೆಚ್ಚಿನ ನಷ್ಟದಿಂದ ಉಳಿಸುತ್ತವೆ ಮತ್ತು ಲಾಭಗಳಿಕೆಯಲ್ಲಿಯೂ ಕೂಡ ಚಿತ್ರ ಯಶಸ್ವಿಯಾಗುತ್ತದೆ.   ನಿರ್ಮಾಪಕ ಆದಷ್ಟೂ ಸುರಕ್ಷಿತವಾಗಿರುತ್ತಾನೆ.   ನಮ್ಮಲ್ಲಿ ಕೂಡ ಇಂತಹ ಪ್ರಯತ್ನಗಳಾಗಬೇಕು. ಹೀಗಾದಾಗ ನಮ್ಮ ಚಿತ್ರಗಳೂ ಕೂಡ ಅದ್ದೂರಿತನದಿಂದ ಕೂಡಿರುತ್ತದೆ. ನಾವುಗಳೂ ಬೇರೆಯವರಿಗೆ ಸ್ಪರ್ಧೆ ಒಡ್ಡಬಹುದು. ನಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಬಹುದು. ನಮ್ಮಲ್ಲಿ ಒಳ್ಳೆಯ ನಟ/ನಟಿ/ನಿರ್ಮಾಪಕ/ನಿರ್ದೇಶಕರು/ತಂತ್ರಜ್ಞರು ಎಲ್ಲರೂ ಇದ್ದಾರೆ. ಆದರೆ ಕಾರ್ಪೊರೇಟ್ ಮಂದಿಯ ಜೊತೆ ವ್ಯವಹರಿಸುವ ಚತುರತೆಯುಳ್ಳವರು ಕಡಿಮೆ. ನಮ್ಮಲ್ಲಿ ಚಿತ್ರವನ್ನು ಸರಿಯಾದ ರೀತಿಯಲ್ಲಿ  ಪ್ರಚಾರ  ಮಾಡುವವರೂ ಸಹ ಕಡಿಮೆ. ಪ್ರಚಾರ ಅಂದರೆ ಕೆಲಸಕ್ಕೆ ಬಾರದ ತಂತ್ರಗಳನ್ನು ಹೆಣೆಯುತ್ತಾರೆ. ಅದು ಈ ಕಾಲದಲ್ಲಿ ಪ್ರಯೋಜನವಾಗುವುದೇ? ಇಂತಹ ಸೂಕ್ಷವೂ ಗೊತ್ತಿಲ್ಲದಿರುವ ಕಾರಣವೇ ನಮ್ಮ ಚಿತ್ರಗಳು ಪರಭಾಷಾ ಚಿತ್ರದೊಂದಿಗೆ ಹೋಲಿಸಿದಾಗ ಸಪ್ಪೆಯೆನಿಸುತ್ತದೆ.  ಮೊದಲು ಇದನ್ನು ನಾವು ಸರಿ ಮಾಡಿಕೊಳ್ಳಬೇಕು. ಯಾರೋ ಒಬ್ಬಿಬ್ಬರು ಇಂತಹ ಪ್ರಯತ್ನದಲ್ಲಿದ್ದಾರೆ, ಅದು ಏನೇನೂ ಸಾಲದು. ಸಂಬಂಧಪಟ್ಟವರು ಇದರ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಇದೆಲ್ಲಾ ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ. ಚಿತ್ರ ರಂಗದ ಸಮಸ್ತರೂ ಇದರ ಬಗ್ಗೆ ಸಹಕಾರ ಕೊಡಬೇಕು. ತಾವು ನಟಿಸಿದ ಚಿತ್ರಕ್ಕೇ  ಪ್ರಚಾರಕ್ಕೆ ಬರದೆ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳವ ನಮ್ಮ ನಟ/ನಟಿಯರಿಂದ ನಾವು ಇದನ್ನೆಲ್ಲಾ ನಿರೀಕ್ಷಿಸಬಹುದೇ???

No comments:

Post a Comment