Saturday 30 June 2012

"ಕನ್ನಡದ ಪೂಜಾರಿ"

ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನ ಕಣ್ಣನ್ ಅವರ "ಹರಟೆ" ಕಾರ್ಯಕ್ರಮವನ್ನು (ಉದಯ ಟಿ.ವಿಯವರು ಪ್ರಸಾರ ಮಾಡುತ್ತಿದ್ದ) ಬಹಳಷ್ಜ್ಟು ಜನರು ನೋಡಿದ್ದಾರೆ.  ಅದು ಬಹಳ ಜನಪ್ರಿಯವಾಗಿತ್ತು. ಈಗಲೂ ಹಬ್ಬ ಮುಂತಾದ ವಿಶೇಷ ಸಂಧರ್ಭದಲ್ಲಿ ಆ ಕಾರ್ಯಕ್ರಮ ಬರುತ್ತದೆ. ಅವರ ನಾಲಿಗೆ ಮೇಲೆ ಕನ್ನಡ ಕುಣಿದಾಡುವುದನ್ನು ನೋಡುವುದೇ ಒಂದು ಸೊಗಸು.  ಒಂದು ಆಚ್ಚರಿಯ ಸಂಗತಿ ಎಂದರೆ ಅವರ ಮಾನೆಯ ಮಾತು ತಮಿಳು, ಅವರ ಕನ್ನಡ ಸೇವೆ ಬಹಳ ದೊಡ್ಡದು.   ಅವರು ದೇವರಿಗೆ ಸಂಸ್ಕೃತ ಶ್ಲೋಕದ ಬದಲಿಗೆ ಕನ್ನಡದ ದೇವರನಾಮಗಳಿಂದ ಪೂಜೆಯನ್ನು ಸಲ್ಲಿಸಿ ಇತರ ಅರ್ಚಕರಿಗೆ ಮಾದರಿಯಾಗಿದ್ದಾರೆ.  ಅನೇಕ ಭಕ್ತರ ಮನಗೆದ್ದಿದ್ದಾರೆ. ಹಿರೇಮಗಳೂರಿನ "ಶ್ರೀ ರಾಮ" ದೇವಸ್ಥಾನದಲ್ಲಿ ದೇವರಿಗೆ ಕನ್ನಡದಲ್ಲಿ ಮಾತ್ರ ಪೂಜೆ, ಪುನಸ್ಕಾರಗಳು. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲೂ, ಮದುವೆ, ಮುಂಜಿ ಮುಂತಾದ ಕಾರ್ಯಕ್ರಮಗಳು  ಸಂಸ್ಕೃತದಲ್ಲಿ ನಡೆಯುವುದು ಎಲ್ಲರಿಗೂ ತಿಳಿದ ವಿಚಾರ. ಅದು ಎಷ್ಟು ಜನರಿಗೆ ಅರ್ಥವಾಗುವುದೋ, ಇಲ್ಲವೋ ತಿಳಿಯದು.  ಅವರು ಮದುವೆ, ಮುಂಜಿ,  ಮುಂತಾದ ಎಲ್ಲಾ ಶುಭ ಕಾರ್ಯಕ್ರಮವನ್ನೂ ಸಹ ಕನ್ನಡದಲ್ಲಿ ನೆರವೇರಿಸುವರು ಮತ್ತು ಅದರ ಅರ್ಥವನ್ನು ಎಲ್ಲರಿಗೂ ತಿಳಿಯುವ ಹಾಗೆ ಕನ್ನಡದಲ್ಲಿ ವಿವರಿಸುವರು. ಅವರು ತಮ್ಮಂತೆಯೇ ೮-೧೦ ಶಿಷ್ಯಂದಿರನ್ನೂ ತಯಾರು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಕರ್ನಾಟಕದ ಉಳಿದ ದೇವಸ್ಥಾನಗಳಲ್ಲಿ ಕನ್ನಡದಲ್ಲಿ ಪೂಜೆ ಪುನಸ್ಕಾರಗಳು ನಡೆಯುವಂತಾಗಲಿ. ಯುವ ಅರ್ಚಕರು ಮತ್ತು ಯುವ ಭಕ್ತರು ಇದರ ಬಗ್ಗೆ ಯೋಚಿಸಿ ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಒಳ್ಳೆಯದು.

No comments:

Post a Comment