Friday 8 June 2012

"ನೇತ್ರದಾನ, ದೇಹದಾನ ಮತ್ತು ಅಂಗಾಂಗ ದಾನ:- " ಸರಣಿ ಲೇಖನ ಭಾಗ - ೩.

ಕಳೆದ ಸಂಚಿಕೆಯಿಂದ:

ವೈದ್ಯರು ನಮ್ಮದೇಶದಲ್ಲಿ ನೇತ್ರಗಳ ಕೊರತೆ ಬಹಳ ಇದೆ. ಸಾರ್ವಜನಿಕರು ತಾವು ಮರಣಹೊಂದಿದ ಮೇಲೆ ತಮ್ಮ ಕಣ್ಣುಗಳನ್ನು ಶರೀರದ ಜೊತೆ ಹೂಳುವ ಅಥವಾ ಸುಡುವ ಬದಲು ದಾನ ಮಾಡಿದರೆ, ಆ ಕಣ್ಣುಗಳಿಂದ ಇಬ್ಬರ ಅಂಧತ್ವ ನಿವಾರಿಸಬಹುದು ಎಂದು ವೈದ್ಯರು ಅನೇಕ ಬಾರಿ ಕರೆ ಕೊಟ್ಟಿರುತ್ತಾರೆ. ನಾಡಿನ ಗಣ್ಯರು ಮತ್ತು ಸಮಾಜದ ಕೆಲ ಬಂದುಗಳು ಈ ಕರೆಗೆ ಓಗೊಟ್ಟು ತಾವು ಸತ್ತ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿರುತ್ತಾರೆ. ಕರ್ನಾಟಕದಲ್ಲಿ ಈ ನೇತ್ರದಾನ ಮತ್ತು ದೇಹದಾನ ಸದ್ದಿಲ್ಲದೆ ನಡೆಯುತ್ತಿರುವುದಂತೂ ನಿಜ.  ಆದರೂ ಆಗ ಬೇಕಾದ ಕೆಲಸ ಬೆಟ್ಟದಷ್ಟಿದೆ. ಇದೇ ರೀತಿ ಅಂಗಾಗ ದಾನಗಳೂ ಆಗೊಮ್ಮೆ ಈಗೊಮ್ಮೆ ಆಗುತ್ತಿರುತ್ತದೆ, ನಾವು ಈ ಬಗ್ಗೆ ಪತ್ರಿಕೆ/ಟಿ.ವಿಯಲ್ಲಿ ಓದಿ/ಕೇಳಿ ತಿಳಿದುಕೋಂಡಿರುತ್ತೇವೆ.

ನಮ್ಮ ಕರ್ನಾಟಕದಲ್ಲಿ ರಾಜ್ ಅವರು ತಾವು ಮರಣಹೊಂದಿದ ನಂತರೆ ತಮ್ಮ ಕಣ್ಣುಗಳನ್ನು ದಾನ ಮಾಡಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅವರ ಅಭಿಮಾನಿಗಳೂ ಸಹ (ಸುಮಾರು ೩೫,೦೦೦) ತಾವು ಸತ್ತ ನಂತರ ತಮ್ಮ ಕಣ್ಣುಗಳನ್ನು ಈ ಪವಿತ್ರ ಕಾರ್ಯಕ್ಕೆ ಉಪಯೋಗಿಸಲು ಬರೆದುಕೊಟ್ಟಿರುತ್ತಾರೆ. ನಾಡಿನ ಕೆಲವು ಗಣ್ಯರು, ಸಾರ್ವಜನಿಕರು ತಾವು ಸತ್ತ ನಂತರ ತಮ್ಮ ಮೃತ ಶರೀರವನ್ನು ದಾನ ಮಾಡಿದ್ದಾರೆ. ಅವರಲ್ಲಿ ನಟ ಲೋಕೇಶ್ ಸಹ ಒಬ್ಬರು. ರಾಜ್ ಪುತ್ರರು ಸಹ ತಮ್ಮ ದೇಹವನ್ನು ನಾವು ಸತ್ತ ನಂತರ ದಾನ ಮಾಡುತ್ತೇವೆ ಎಂದು ಬರೆದುಕೊಟ್ಟಿರುತ್ತಾರೆ.

ವಯುಕ್ತಿಕವಾಗಿ ಹೇಳಬೇಕೆಂದರೆ ನಾನು ಕೆಲವು ಬಾರಿ ರಕ್ತದಾನವನ್ನು ಮಾಡಿರುತ್ತೇನೆ. ಲಯನ್ಸ್ ಕಣ್ಣಿನ ಆಸ್ಪತ್ರೆಗೆ ನಾನು ನನ್ನ ನೇತ್ರಗಳನ್ನು ದಾನಮಾಡುತ್ತೇನೆಂದು ಬರೆದುಕೊಟ್ಟಿದ್ದೇನೆ. ನನಗೆ ದೇಹವನ್ನೂ ಮತ್ತು ಅದರ ಅಂಗಾಗಗಳನ್ನು ದಾನ ಮಾಡುವ ಇಚ್ಚೆ ಇದೆ. ಅದನ್ನೊ ಕೂಡ ಬರೆದುಕೊಡುವವನಿದ್ದೇನೆ. ಇದರ ಬಗ್ಗೆ ನನ್ನ ಮನೆಯವರಿಗೆ, ಸ್ನೇಹಿತರಿಗೆ ಮತ್ತು ಬಂಧುಬಳಗದವರಿಗೆ ಈಗಾಗಲೇ ಅನೇಕ ಸಲ ತಿಳಿಸಿಯೂ ಇದ್ದೇನೆ. (ಮುಗಿಯಿತು)

No comments:

Post a Comment