Saturday 9 June 2012

ರೈತರ ಗೋಳು:

ನಮ್ಮ ರಾಜ್ಯ/ದೇಶದಲ್ಲಿ ಯಾವುದೇ ಸರ್ಕಾರ ಬಂದರೂ ನಮ್ಮದು ರೈತರ ಪರ ಸರ್ಕಾರ ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದಿದೆ. ನಿಜವಾಗಿ ರೈತರ ಪರ ಸರ್ಕಾರವೇ ಆದರೆ, ಸ್ವಾತಂತ್ರ್ಯ ಬಂದು ೬೫ ವರ್ಷಗಳಾದರೂ ನಮ್ಮ ರೈತರು ಯಾಕೆ ಉದ್ದಾರವಾಗಲಿಲ್ಲ?  ಈಗಲೂ ನಮ್ಮ ದೇಶದಲ್ಲಿ ಒಂದು ಹೊತ್ತು ಊಟವೂ ಇಲ್ಲದೆ ನರಳುವರೆಷ್ಟೋ? ಇನ್ನು ನಮ್ಮ  ರೈತರ ಪಾಡಂತೂ ಯಾವ ಶತೃವಿಗೂ ಬರಬಾರದು. ನಮ್ಮ ಅನೇಕ ರೈತರರು ಅವಿದ್ಯಾವಂತರು. ಸರಿಯಾದ ವ್ಯವಹಾರ ಜ್ಞಾನವೂ ಸಹ ಇಲ್ಲ. ಯಾರನ್ನೂ ನಂಬದ ಪರಿಸ್ಥಿತಿಗೆ ಅವರನ್ನು ತಂದು ಬಿಟ್ಟಿದೆ ಈ ಸಮಾಜ ಮತ್ತು ಸರ್ಕಾರ. ಅಭಿವೃದ್ದಿ ಕಾರ್ಯಗಳಿಗೆ ಭೂಮಿಯ ಕೊರತೆ ಊಂಟಾದರೆ ಸರ್ಕಾರಕ್ಕೆ ಮೊದಲು ಕಾಣ ಸಿಗುವುದು ನಮ್ಮ ರೈತರ ಭೂಮಿ.  ಅಭಿವೃದ್ದಿಗಾಗಿ ಅವರ ಕೃಷಿಭೂಮಿಯನ್ನು ಸರ್ಕಾರ ಕಿತ್ತುಕೊಳ್ಳುತ್ತದೆ, ಮುಂದೆ ಅವರು ಅವರ ಜಮೀನಿನಲ್ಲೇ ಕೂಲಿ ಕೆಲಸ ಮಾಡಬೇಕಾದ ಅನಿವಾರ್ಯತೆ. ಕೃಷಿಭೂಮಿ ದಿನವೂ ಕಡಿಮೆಯಾಗುತ್ತಿದ್ದರೂ ಸರ್ಕಾರಕ್ಕೆ ಇದರ ಬಗ್ಗೆ ಚಿಂತೆ ಇಲ್ಲ. ಮತ್ತೊಂದೆಡೆ ಅವರು ಬೆಳೆದ ವಸ್ತುಗಳಿಗೆ ಸರಿಯಾದ ಬೆಲೆ ನಿಗದಿ ಮಾಡುವುದಿಲ್ಲ. ನೆರೆ ಬಂದು ಅವರ ಬೆಳೆಗಳಿಗೆ ಹಾನಿಯಾದರೆ ಅವರಿಗೆ ಪರಿಹಾರ ಸರಿಯಾಗಿ ಕೊಡುವುದಿಲ್ಲ. ಬರ ಬಂದರಂತೂ ಅವರನ್ನು ದೇವರೇ ಕಾಪಾಡಬೇಕು. ಇನ್ನು ಅವರಿಗೆ ಬ್ಯಾಂಕ್ ನಿಂದ ಸಾಲ ಸರಿಯಾಗಿ ದೊರಕುವುದಿಲ್ಲ, ದೊರಕಿದರೂ ಮಧ್ಯವರ್ತಿಗಳ ಕಾಟ. ಹೊರಗಿನಿಂದ ಸಾಲ ತಂದರೆ ಬಡ್ಡಿ ಕಟ್ಟಲಾಗದೆ ಅವರಿಗೆ ಆತ್ಮಹತ್ಯೆಯೇ ಪಾರಿಹಾರ. ರೈತ ವರ್ಷಕ್ಕೆ ಮೂರು ಬೆಳೆ ತೆಗೆಯಲು ಹೊರಟರೆ, ಅವನಿಗೆ ದಕ್ಕುವುದು ಕೇವಲ ಒಂದೊ, ಎರಡೋ. ಅದೂ ಸರಿಯಾಗಿ ಮಳೆಯಾದರೆ ಮಾತ್ರ. ನಮ್ಮ ದೇಶದ್ದು ಮಳೆ ಆದರಿತ ವ್ಯವಸಾಯ. ಮಳೆ ಇಲ್ಲ ಅಂದರೆ ಬೆಳೆ ಇಲ್ಲ.  ಯಾರದೋ ಮಾತು ಕೇಳಿ  ರಸಗೊಬ್ಬರವನ್ನು ಅಗತ್ಯಕ್ಕಿಂತ ಜಾಸ್ತಿ ಹಾಕಿ ಭೂಮಿಯಲ್ಲಿರುವ ಸತ್ವವನ್ನೇ ನಮ್ಮ ರೈತರು ಹಾಳುಮಾಡಿಕೊಂಡಿದ್ದಾರೆ. ನಮ್ಮ ರೈತರು ಸಾವಯುವ ಗೊಬ್ಬರವನ್ನು ಇನ್ನಾದರೂ ಉಪಯೋಗಿಸುವುದನ್ನು ಕಲಿಯಬೇಕು. ಎಲ್ಲದಕ್ಕಿಂತ ಹೆಚ್ಚಾಗೆ ಅವರು ಬೆಳೆದ ಬೆಳೆಗಳನ್ನು ಸರಿಯಾಗಿ ಸಂರಕ್ಷಿಸಿಡಲು ನಮ್ಮ ದೇಶದಲ್ಲಿ ಸರಿಯಾದ ಉಗ್ರಾಣಗಳಿಲ್ಲ ಎಂದರೆ ಅದಕ್ಕಿಂತ ದೊಡ್ಡ ವಿಪರ್ಯಾಸ ಇಲ್ಲ. ನಮ್ಮ ದೇಶದಲ್ಲಿ ಹೀಗೆ ಸುಮ್ಮನ ಕೊಳೆತ ಆಹಾರ ಧಾನ್ಯಗಳು ಸಾವಿರಾರು ಟನ್ ಗಳು. ಉಚ್ಚ ನ್ಯಾಯಾಲಯ ಕೂಡ ಇದನ್ನು ಸರಿಪಡಿಸಿ, ಅಲ್ಲದೇ ಹೀಗೆ ಆಹಾರ ಧಾನ್ಯಗಳು ಕೊಳೆತು ನಾಶವಗುವ ಬದಲು ಬಡವರಿಗೆ ಅದನ್ನು ಹಂಚಿ ಎಂದು ಆ ಮಾಡಿದ್ದರೂ ನಮ್ಮ ಸರ್ಕಾರಗಳಿಗೆ ಜಾಣ ಕಿವುಡು.

No comments:

Post a Comment