Sunday 3 June 2012

"ಶುದ್ದ ಜಲ-ಜೀವ ಜಲ"

ಕೇವಲ ೧೦ ಪೈಸೆಗೆ ೧ ಲೀಟರ್ ಶುದ್ದ ಕುಡಿಯುವ ನೀರು, ಕೆಲವು ಕಡೆ ೧ ರೊಪಾಯಿಗೆ ೨ ಲೀಟರ್ ಶುದ್ದ ಕುಡಿಯುವ ನೀರು, ಇಂತಹದ್ದನ್ನು ನೀವುಗಳು ಇತ್ತೀಚೆಗೆ ಕೇಳಿರಬಹುದು. ನಿಜ, ಇದು ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮವೊಂದು ಸದ್ದಿಲ್ಲದೆ ನಡೆಯುತ್ತಿದೆ. ಮೊದಲು ಕೋಲಾರದ ಒಂದು ಗ್ರಾಮೀಣ ಪ್ರದೇಶದಲ್ಲಿ ಈ ರೀತಿ "ಶುದ್ದ ಜಲ" ಘಟಕವೊಂದನ್ನು ಅಲ್ಲಿನ ಗ್ರಾಮೀಣ ವಾಸಿಗಳ ಸಂಘವೊಂದು ಮೊದಲ ಬಾರಿ ಸ್ಥಾಪಿಸಿತು. ಇತ್ತೀಚೆಗೆ ಹೆಚ್.ಕೆ.ಪಾಟೀಲ್ ಮತ್ತು ಸತೀಶ್ ಜಾರಕಿಹೊಳ್ಳಿ ಎಂಬ ಶಾಸಕರು ಉತ್ತರ ಕರ್ನಾಟಕದಲ್ಲಿ ಇಂತಹ ಘಟಕಗಳನ್ನು ಸ್ಥಾಪಿಸಿ ಅಲ್ಲಿನ ಜನರಿಗೆ ಶುದ್ದ ನೀರನ್ನು ಕುಡಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅನೇಕ ಕೆರೆ, ನದಿಗಳು ಬತ್ತಿಹೋಗಿ ಅಲ್ಲಿನ ಜನರಿಗೆ, ದನ ಕರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಅವರಿಗೆ ಬೋರ್ ವೆಲ್ ನೀರೇ ಆಧಾರ. ಆ ನೀರಿನಲ್ಲಿ ಫ್ಲೋರೈಡ್ ಅಂಶವು ಜಾಸ್ತಿ ಇದ್ದು, ಕುಡಿಯಲಾರದ ಹಾಗಿದೆ. ಆ ನೀರು ಆರೋಗ್ಯಕ್ಕೆ ಬಲು ಮಾರಕ. ಇಂತಹ ಘಟಕವನ್ನು ಸ್ಥಾಪಿಸಲು ಆಗುವ  ಖರ್ಚು ಸುಮಾರು ೭ ಲಕ್ಷಗಳು. (ಘಟಕಕ್ಕೆ ಸುಮಾರು ೪.೫ ಲಕ್ಷಗಳು, ಕಟ್ಟಡಕ್ಕೆ ೧.೫ ಲಕ್ಷಗಳು ಮತ್ತು ಕೊಳವೆ ಬಾವಿಗಾಗಿ ಸುಮಾರು ೧ ಲಕ್ಷ.) ಒಂದು ಸಲಕ್ಕೆ ಇದು ಸುಮಾರು ೪ ಲಕ್ಷ ಲೀಟರ್ ನೀರನ್ನು ಶುದ್ದೀಕರಿಸುತ್ತದೆ. ನಂತರ ಅದರ ಫಿಲ್ಟರ್ ಗಳನ್ನು ಬದಲಾಯಿಸಿದರೆ ಆಯಿತು. ನಮ್ಮ ರಾಜ್ಯದಲ್ಲಿರುವ ಶಾಸಕರು, ನಟ/ನಟಿಯರು, ನಿರ್ಮಾಪಕರು, ಇನ್ಫೋಸಿಸ್, ಬಯೋಕಾನ್, ವಿಪ್ರೋ ಮುಂತಾದ ಕಂಪನಿಗಳು, ನಮ್ಮಲ್ಲಿರುವ ಶ್ರೀಮಂತ ಮಠಗಳು ಮತ್ತು ಸಮಾಜದ ಇತರೆ ಗಣ್ಯರು ಇಂತಹ ಘಟಕಗಳನ್ನು ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಬಿಸಿದರೆ ಅಲ್ಲಿನ ಜನತೆಗೆ ಶುದ್ದ ಕುಡಿಯುವ ನೀರು ದೊರಕಿದಂತಾಗುತ್ತದೆ. ನಗರ ಪ್ರದೇಶದಲ್ಲಿ ಇರುವ ನಮಗೆ ಇದರ ಅರಿವು ಬಹಳ ಕಡಿಮೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ಶೌಚಾಲಯದ ಸಮಸ್ಯೆ ಬಹಳ ಇದೆ.  ಇದರ ಬಗ್ಗೆಯೂ ಯೋಚಿಸಬಹುದು.

No comments:

Post a Comment