Monday 25 June 2012

ಬ್ರಾಂಡ್ ಮತ್ತು ಜನರಿಕ್ ಓಷಧಗಳು : ಭಾಗ-೧

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು (ಕೇಂದ್ರ ಸರ್ಕಾರ) ಗ್ಲಾಕ್ಸೊಸ್ಮಿತ್ ಕ್ಲೈನ್, ರಾನ್ ಬಕ್ಸಿ, ಡಾ.ರೆಡ್ಡೀಸ್, ಮುಂತಾದ ಪ್ರಖ್ಯಾತ ಔಷಧಿ ತಯಾರಿಸುವ ಕಂಪನಿಗಳು ತಮ್ಮ ಉತ್ಪಾದನಾ ವೆಚ್ಚಕ್ಕಿಂತ ಶೇ.೧,೧೨೩ ರಷ್ಟು ಹೆಚ್ಚು ದರದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟಮಾಡುತ್ತಿವೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಔಷಧಿಗಳಿಗೆ ಗರಿಷ್ಟ ರೀಟೇಲ್ ದರವನ್ನು ನಿಗದಿಪಡಿಸಿ ಮಾರಾಟ ಮಾಡಬೇಕಾದ ಈ ಕಂಪನಿಗಳು ಅತ್ಯಧಿಕ ದರವನ್ನು ನಿಗದಿಪಡಿಸುತ್ತವೆ (ಸುಮಾರು ೧,೦೦೦ ಪಟ್ಟು.) ಇದರಲ್ಲಿ ವಿತರಕರು, ಸಗಟು ವ್ಯಾಪಾರದಾರರು, ರೀಟೇಲ್ ವ್ಯಾಪಾರಸ್ಥರು ಈ ವಂಚನೆಯಲ್ಲಿ ಪಾಲ್ಗೊಂಡು ಗ್ರಾಹಕರಿಗೆ ವಂಚಿಸುತ್ತಾರೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಈ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದಾಗ ನನಗೆ ಸತ್ಯಮೇವ ಜಯತೆ ಕಾರ್ಯಕ್ರಮದ ನೆನಪು ಬಂತು.

ಆ ಕಾರ್ಯಕ್ರಮದಲ್ಲಿ ಜನರಿಕ್ ಓಷದ ಮಳಿಗೆಗಳ ಬಗ್ಗೆ ವಿವರಿಸುತ್ತಾ ಸುಮಾರು ೨,೩೦೦ ಬೆಲೆಯ ಔಷಧಿಗಳು ಈ ರೀತಿಯ ಜನರಿಕ್ ಔಷಧ ಮಳಿಗೆಗಳಲ್ಲಿ ಕೇವಲ ೩೫೦ ರೂಪಾಯಿಗಳಿಗೆ ದೊರಕುತ್ತದೆ. ಇದು ಇತರೆ ಔಷಧ ಮಳಿಗೆ ಮತ್ತು ಜನರಿಕ್ ಔಷಧ ಮಳಿಗೆಗಳ ವ್ಯ್ತತ್ಯಾಸ. ಈ ರೀತಿಯ ಜನರಿಕ್ ಓಷಧ ಮಳಿಗೆಗಳು ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲೂ ಇದ್ದರೆ ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗುವುದು ಎಂದು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದ್ಯರು ತಿಳಿಸಿದ್ದರು. ಮೇಲಿನ ಸುದ್ದಿ ಇದನ್ನು ಪುಷ್ಟೀಕರಿಸುತ್ತದೆ. ಈ ಓಷಧಗಳನ್ನು ಕಂಡು ಹಿಡಿಯಲು, ತಯಾರಿಸಲು ಮತ್ತು ಜನರ ಮೇಲೆ ಪ್ರಯೋಗಿಸಿ ಅದು ಸೂಕ್ತವಾಗಿ ಕೆಲಸ ಮಾಡುತ್ತದೆ ಎಂದರೆ ಮಾತ್ರ ಆ ಓಷದವು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆ. ಇಲ್ಲದ್ದಿದ್ದರೆ ಇಲ್ಲ. ಈ ಅವಧಿಯಲ್ಲಿ ನಮಗೆ ಬಹಳಷ್ಟು ಸಮಯ, ಹಣ ಖರ್ಚಾಗುತ್ತದೆ ಎಂದು ಈ ಕಂಪನಿಗಳ ವಾದ. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡರೂ ೧,೦೦೦ ಪಟ್ಟು ಹೆಚ್ಚಿನ ಬೆಲೆ ಎಂದರೆ, ಅದು ಕಂಪನಿಗಳ ಧನದಾಹವೆಂದೇ ಹೇಳಬೇಕು.

ಜೂನ್ ೨೧ ರಿಂದ ಕರ್ನಾಟಕದ ೨೦ ಜಿಲ್ಲೆಗಳಲ್ಲಿ ಮಾರುಕಟ್ಟೆ ದರದ ಅರ್ಧಕ್ಕಿಂತ ಕಡಿಮೆ ದರದಲ್ಲಿ ಜನರಿಕ್ ಔಷಧ ಲಭ್ಯ ಎಂಬ ಮಾಹಿತಿ ರಾಜ್ಯ ಸರ್ಕಾರದಿಂದ ಬಂದಿದೆ. ನಗರದ ವಿಕ್ಟೋರಿಯಾ ಆಸ್ಪತ್ರೆಯ ಜನತಾ ಬಜಾರ್ ಮಳಿಗೆಯಲ್ಲಿ ದೊರಯುವ ಮಾಹಿತಿ ಇದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬಹುದು. (ಈಗಾಗಲೇ ಅನೇಕ ಅಂಗಡಿಗಳಲ್ಲಿ ಜನರಿಕ್ ಓಷಧಗಳು ದೊರಕುತ್ತಿವೆ.) ವೈದ್ಯರು ತಮ್ಮ ಬಳಿ ಬರುವ ರೋಗಿಗಳಿಗೆ ಜನರಿಕ್ ಓಷಧಗಳನ್ನು ಶಿಫಾರಸ್ಸು ಮಾಡಿದರೆ ಒಳ್ಳೆಯದು. ಇಂದಿನ ದಿನಗಳಲ್ಲಿ ವೈದ್ಯಕೀಯ ಖರ್ಚು ಬಹಳ ಜಾಸ್ತಿಯಾಗಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಬಹಳ ಹೊರೆಯಾಗುತ್ತಿದೆ.  ಜನರೂ ಸಹ ವೈದ್ಯರಿಗೆ ಜನರಿಕ್ ಓಷಧಿಗಳನ್ನು ಬರೆದುಕೊಡುವಂತೆ ವಿನಂತಿಸಬೇಕು. ಸಾಧಾರಣವಾಗಿ ವೈದ್ಯರು ಜನರಿಕ್ ಓಷಧಗಳನ್ನು ಬರೆದುಕೊಡುವುದಿಲ್ಲ. ಅವರು ಬರೆದುಕೊಡುವುದು ಕೇವಲ ಬ್ರಾಂಡ್ ಓಷಧಿಗಳನ್ನೇ. ಅವರು ಯಾಕೆ ಬರೆದುಕೊಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯವೇ.  "ವೈದ್ಯರು ಜನರಿಕ್ ಓಷಧಗಳನ್ನು ಶಿಫಾರಸು ಮಾಡಬೇಕು, ಇಲ್ಲದಿದ್ದರೆ ಅಂತಹವರನ್ನು ಗಂಭೀರವಾಗಿ ಪರಿಗಣಿಸಲಾಗುವುದು " ಎಂದು ಸರ್ಕಾರವೇನೋ ಹೇಳುತ್ತದೆ. ಆದರೆ ಅದು ನಮ್ಮ ದೇಶದಲ್ಲಿ ಸಾಧ್ಯವೇ ಎಂಬುದು ಪ್ರಶ್ನೆ. ಜನರಿಕ್ ಓಷದಗಳು ಕೇವಲ ಚಿಕ್ಕ ಪುಟ್ಟ ಖಾಯಿಲೆಗಳಿಗೆ ಮಾತ್ರವಲ್ಲದೇ  ಕ್ಯಾನ್ಸರ್, ಮೂತ್ರ ಪಿಂಡ ರೋಗ, ಮಧುಮೇಹ, ಹೃದ್ರೋಗ ಮುಂತಾದ ಖಾಯಿಲೆಗಳಿಗೂ ಜನರಿಕ್ ಓಷಧಗಳು ಲಭ್ಯ.   (ಮಿಕ್ಕಿದ್ದು ನಾಳೆಗೆ)


No comments:

Post a Comment