Saturday 3 March 2012

ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳ ಸಮಸ್ಯೆಗಳು:

ಕನ್ನಡ ಚಿತ್ರರಂಗದ ಮುಖ್ಯ ಸಮಸ್ಯೆ ಎಂದರೆ  ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದಕ್ಕೆ ಚಿತ್ರಮಂದಿರಗಳಿಲ್ಲ ಎಂಬ ಕೂಗು. ಇದು ಈಗ ಮಾತ್ರವೇ ಅಲ್ಲ. ಡಾ.ರಾಜ್ ಕುಮಾರ್ ಅವರ ಕಾಲದಿಂದಲೂ ಇದೇ ಸಮಸ್ಯೆ. ಈಗಲೂ ಇದೇ ಸಮಸ್ಯೆ. ಇಂದು ಕನ್ನಡ ಚಿತ್ರಕ್ಕೆ ನಮ್ಮ ರಾಜ್ಯದಲ್ಲಿ ನಾವೇ ಹೊಡೆದಾಡಬೇಕಾದ ಪರಿಸ್ಥಿತಿ ಬಂದಿರುವುದಕ್ಕೆ ಎನು ಕಾರಣ?  ಚಿತ್ರರಂಗದ ಒಳಹೊರಗು ಬಲ್ಲ ಚಿತ್ರರಂಗದ ಉದ್ಯಮದವರೇ ಇದಕ್ಕೆ ಕಾರಣ.  ಚಿತ್ರದ ನಿರ್ಮಾಕರಿಗೆ/ಹಂಚಿಕೆದಾರರಿಗೆ ಮತ್ತು ನಟರಿಗೆ ಕೆಂಪೇಗೌಡ ರಸ್ತೆಯಲ್ಲಿ ಚಿತ್ರಮಂದಿರ ಸಿಕ್ಕಿದರೆ ಸಾಕು, ಬೇರೆಲ್ಲಿಯೂ ಬೇಡ. ಬೆಂಗಳೂರು ಎಂದರೆ ಕೇವಲ ಕೆಂಪೇಗೌಡ ರಸ್ತೆ ಮಾತ್ರವೇ? ಇಲ್ಲಿ ಮಾತ್ರ ಕನ್ನಡ ಚಿತ್ರ ನಡೆಯತ್ತದೆಯೇ? ಬೇರೆಲ್ಲಿಯೂ ನಡೆಯವುದಿಲ್ಲವೇ? ಹಾಗಾಗಲು ಯಾರು ಕಾರಣ, ನೀವೆ ಅಲ್ಲವೇ. ಕರ್ನಾಟಕದಲ್ಲಿ ಇರುವುದು ಕೇವಲ ೬೫೦ ಚಿತ್ರಮಂದಿರಗಳು. ಇದರಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳ ಸಂಖ್ಹೆ ಸುಮಾರು ೪೦೦ ಇರಬಹುದು.  ಉಳಿದ ೨೫೦  ಚಿತ್ರಮಂದಿರಗಳು ಪರಭಾಷಾ ಚಿತ್ರಗಳಿಗೆ ಮೀಸಲು. ಹೀಗಿರುವಾಗ ನಮ್ಮ ಕನ್ನಡ ಚಿತ್ರಗಳನ್ನು ೧೦೦೦ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವುದು ಯಾವಾಗ? ಮೊದಲು ಈಗಿರುವ ಕನ್ನಡ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳ ಸಂಖ್ಯೆಯನ್ನು ಕನಿಷ್ಟ ೬೦೦ಕ್ಕೆ ಹೆಚ್ಚು ಮಾಡಿಕೊಳ್ಳುವುದು. ಕರ್ನಾಟಕಾದ್ಯಂತ ಚಿಕ್ಕ ಚಿಕ್ಕ ಚಿತ್ರಮಂದಿರಗಳನ್ನು ಸ್ಥಾಪಿಸುವುದು. ಇದು ನಮ್ಮ ಕನ್ನಡ ಚಿತ್ರನಿರ್ಮಾಪಕರು ಮನಸ್ಸು ಮಾಡಿದರೆ ಕಷ್ಟವೇನಾಗಲಾರದು.
೮೦-೯೦ರ ಇಸವಿಯಲ್ಲಿ ಕನ್ನಡ ೫೦-೬೦, ತೆಲುಗು/ತಮಿಳು ಚಿತ್ರಗಳು ೨೦೦ ರಿಂದ ೩೦೦ ಮತ್ತು ಹಿಂದಿ ಚಿತ್ರಗಳು ೫೦೦ ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗುತ್ತಿದ್ದವು.  ಈಗ ಕನ್ನಡ ೧೦೦-೧೫೦,ತೆಲುಗು ೨೦೦೦, ತಮಿಳು ೩೦೦೦್ ಮತ್ತು ಹಿಂದಿ ಚಿತ್ರಗಳು  ೫೦೦೦ ಚಿತ್ರಗಳು ವಿಶ್ವಾದಾದ್ಯಂತ ಪ್ರದರ್ಶಿತವಾಗುತ್ತಿವೆ. ಕೇವಲ ೨೦ವರ್ಷಗಳಲ್ಲಿ ಎಂತಹ ಬದಲಾವಣೆ. ಅವರಿಗೆ ಇದು ಹೇಗೆ ಸಾಧ್ಯವಾಯಿತು. ನಮಗೇಕೆ ಇದು ಸಾಧ್ಯವಾಗುತ್ತಿಲ್ಲ? ಮಾರುಕಟ್ಟೆಯನ್ನು ವಿಸ್ತರಿಸುವುದನ್ನು ನೀವುಗಳು ಕಲಿಯುವುದು ಯಾವಾಗ? ಇಂದು ಪ್ರಪಂಚವೇ ಒಂದು ಹಳ್ಳಿಯಂತೆ ಕಾಣುತ್ತಿದೆ. ಆದರೆ ನೀವುಗಳು ಮಾತ್ರ ಮಾರುಕಟ್ಟೆಯನ್ನು ವಿಸ್ತರಿಸುವುದನ್ನು ಬಿಟ್ಟು ಕನ್ನಡ ಚಿತ್ರಗಳನ್ನು ನೋಡುವವರೇ ಇಲ್ಲ ಎಂದು ಹಳೇ ಪುರಾಣವನ್ನೇ ಊದುವಿರಲ್ಲ. ಮಾರುಕಟ್ಟೆ ತಾನಾಗೆ ಹುಡುಕಿಕೊಂಡು ಬರುವುದಿಲ್ಲ. ಅದನ್ನು ನೀವು ಹುಡುಕಿಕೊಂಡು ಹೋಗಬೇಕು. ಬರೀ ಒಳ್ಳೆಯ ಚಿತ್ರಗಳನ್ನು ತೆಗೆಯುವುದು ಮಾತ್ರ ಸಾಕಾಗುವುದಿಲ್ಲ. ಅದನ್ನು ಸರಿಯಾಗಿ, ಸರಿಯಾದ ಸಮಯದಲ್ಲಿ ಎಲ್ಲಾ ಕಡೆ ಎಲ್ಲಾ ಜನರಿಗೆ ತಲುಪಿಸುವುದು ಬಹಳ ಮುಖ್ಯ   ಇಲ್ಲದಿದ್ದರೆ ನಮ್ಮ ಮಾರುಕಟ್ಟೆ ಯನ್ನು ಬೇರೆಯವರಿಗೆ ಬಿಟ್ಟು ಕೊಡಬೇಕಾಗಬಹುದು. ಹೇಗೆ ಪ್ರಚಾರ ಮಾಡಬೇಕೆಂಬುದನ್ನು ಯಾವುದಾದರೊ ಪ್ರಚಾರ ಮಾಡುವ ಸಂಸ್ಥೆಗೆ ವಹಿಸಿ. ಚಿತ್ರದ ವಿವರಗಳನ್ನು ಫ಼ೇಸ್ ಬುಕ್/ಟ್ವಿಟ್ಟರ್/ಯುಟ್ಯೂಬ್/ಮೊಬೈಲ್ ಮುಖಾಂತರ ಪ್ರಚಾರಪಡಿಸಿ. ಬಸ್ ಟಿಕೀಟುಗಳು/ರೈಲ್ವೆ ಟಿಕೀಟುಗಳು ಎಲ್ಲಾಕಡೆ ಆನ್ ಲೈನ್ ನಲ್ಲಿ ಸಿಗುವ ಹಾಗೆ ನಿಮ್ಮ ಚಿತ್ರದ ಟಿಕೀಟುಗಳು ಎಲ್ಲಾಕಡೆ ಸಿಗುವ ಹಾಗೆ ನೋಡಿಕೊಳ್ಳಿ. ಹೀಗೆ ಮಾಡುವ ಮುಖಾಂತರ ಚಿತ್ರಮಂದಿರಕ್ಕೆ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಬಹುದು.
ಬೆಂಗಳೂರಿನ ಎಲ್ಲಾ ಬಡಾವಣೆಯಲ್ಲೂ ಕನ್ನಡಿಗರಿದ್ದಾರೆ. ಈಗ ಬೆಂಗಳೂರು ಎಲ್ಲಾ ಕಡೆ ಬೆಳೆದಿದೆ. ಎಷ್ಟೊ ಕಡೆ ಚಿತ್ರಮಂದಿರಗಳೇ ಇಲ್ಲ. ಇದ್ದರೆ ಅಲ್ಲಿ  ಬೇರೆ ಭಾಷಾ ಚಿತ್ರಗಳು ನಡೆಯತ್ತವೆ. ಕನ್ನಡ ಚಿತ್ರ ಅಲ್ಲಿ ಪ್ರದರ್ಶಿತ ವಾಗುವುದಿಲ್ಲ. ಅಲ್ಲಿರುವ ಜನಗಳು ವಿಧಿ ಇಲ್ಲದೆ ಬೇರೆ ಚಿತ್ರಗಳನ್ನು ನೋಡುತ್ತಾರೆ. ನೀವು ಅಲ್ಲೆಲ್ಲಾ ಯಾಕೆ ಪ್ರದರ್ಶಿಸುವುದಿಲ್ಲ. ಅದೇ ರೀತಿ ಕನ್ನಡ ಚಿತ್ರಗಳನ್ನು ರಾಜ್ಯದ ಉದ್ದಗಲಕ್ಕೂ ಪ್ರದರ್ಶಿಸಿ. ಕರ್ನಾಟಕದ ಯಾವುದೇ ಹಳ್ಳಿ, ತಾಲ್ಲೂಕು, ಜಿಲ್ಲೆ ಬಿಡಬೇಡಿ. ಬೆಂಗಳೂರಿನಲ್ಲಿ ಬಿಡುಗಡೆಯಾದ ದಿನವೇ ಇಲ್ಲಿಯೂ ಬಿಡುಗಡೆಯಾಗಬೇಕು. ಕನ್ನಡ ಚಿತ್ರಗಳನ್ನು ತೆಲುಗು/ತಮಿಳು/ಮಲೆಯಾಳಂ/ಗುಜರಾತಿ/ಒರಿಯಾ/ಭೋಜಪುರಿ/ಬಂಗಾಲಿ/ಹಿಂದಿ ಹೀಗೆ ಬೇರೆ ಬೇರ ಭಾಷೆಗಳಿಗೆ ಡಬ್ ಮಾಡಿ ಆ ರಾಜ್ಯಗಳಲ್ಲಿ ಪ್ರಚರ್ಶಿಸಿ ಮಾರುಕಟ್ಟೆಯನ್ನು  ವಿಸ್ತರಿಸಬಹುದು. ಅಲ್ಲದೇ ಕನ್ನಡ ಚಿತ್ರಗಳನ್ನು ಹೊಸೂರು, ಕೃಷ್ಣಗಿರಿ, ಸೇಲಂ, ಮಧುರೈ,  ಚೆನ್ನೈ, ಅನಂತಪುರ, ಹಿಂದುಪುರ, ಹೈದರಾಬಾದ್, ವಿಜಯವಾಡ, ತಿರುಪತಿ, ಮುಂಬೈ, ಪುಣೆ, ಸೊಲ್ಲಾಪುರ, ಗೋವಾ, ಕಾಸರಗೋಡು, ಕೊಚ್ಚಿನ್ ಅಲ್ಲದೇ ವಿದೇಶಗಳಾದ ಅಮೇರಿಕ, ಬ್ರಿಟನ್, ಸಿಂಗಪುರ, ಮಲೇಶಿಯಾ, ಆಸ್ಟ್ರೆಲಿಯಾ, ನ್ಯೂಜಿಲೆಂಡ್, ದುಬೈ ,ಜಪಾನ್, ಜರ್ಮನಿ ಇಲ್ಲೆಲ್ಲಾ ಬಿಡುಗಡೆ ಮಾಡಬಹುದು. ಇಲ್ಲೆಲ್ಲಾ ಲಕ್ಷಗಟ್ಟಲೆ ಕನ್ನಡಿಗರಿದ್ದಾರೆ ನೆನಪಿಡಿ. ಪುನೀತ್ ಅವರ ಎಲ್ಲಾ ಚಿತ್ರಗಳು ಇಲ್ಲೆಲ್ಲಾ ಬಿಡುಗಡೆಯಾಗಿ ಯಶಸ್ವಿಯಾಗಿರುತ್ತದೆ. ಉಳಿದವರದು ಯಾಕಿಲ್ಲ? ಕೇವಲ ಕೆಲವೇ ಕೆಲವು ಕನ್ನಡ ಚಿತ್ರಗಳು ಹೊರ ರಾಜ್ಯ/ದೇಶಗಳಲ್ಲಿ ಬಿಡುಗಡೆ ಯಾದರೆ ಸಾಲದು. ಎಲ್ಲಾ ಕನ್ನಡ ಚಿತ್ರಗಳೂ ಬಿಡುಗಡೆಯಾಗಬೇಕು. ಅಗ ನಮ್ಮ ಮಾರುಕಟ್ಟೆ ವಿಸ್ತಾರವಾಗಿ ನಾವೂ ಸಹ ೧೦೦ ಕೋಟಿ ಬಂಡವಾಳ ಹೂಡಬಹುದು. ಚಿತ್ರಗಳನ್ನು ೨೦-೩೦ ಕೋಟಿ ಖರ್ಚು ಮಾಡಿ ತೆಗೆಯುತ್ತೀರ, ಆದರೆ ಅದರ ಪ್ರತಿಗಳು ಕೇವಲ ೨೦ ರಿಂದ ೩೦ರ ಮೇಲೆ ಹೋಗುವುದಿಲ್ಲ. ಚಿತ್ರಗಳ ಪ್ರತಿಗಳು ೨೦೦ ರಿಂದ ೩೦೦ರಷ್ಟಾದರೂ ಇರಬೇಕು ಮತ್ತು ಚಿತ್ರಗಳನ್ನು ಸ್ಯಾಟಲೈಟ್ ಮುಖಾಂತರ ಒಟ್ಟಿಗೇ ಎಲ್ಲಾ ಕೆಂದ್ರಗಳಲ್ಲೂ ಪ್ರದರ್ಶಿಸಬಹುದು.  ನಮ್ಮ ಚಿತ್ರಗಳು ಕನಿಷ್ಠ ೧೦೦೦ ಚಿತ್ರಮಃದಿರಗಳಲ್ಲಿ ಬಿಡುಗಡೆ ಕಾಣಬೇಕು. ಆಗ ನಾವು ಸಹ  ಯಶಸ್ವಿಯಾಗಬಹುದು. ಮುಂಗಾರು ಮಳೆ, ದುನಿಯಾ, ಜಾಕಿ, ಆಪ್ತಮಿತ್ರ, ಆಪ್ತರಕ್ಷಕ, ಈ ಚಿತ್ರಗಳು ಬೇರೆ ರಾಜ್ಯ/ದೇಶ ಗಳಲ್ಲಿ ಯಶಸ್ವಿಯಾದ ಕೆಲವು ಚಿತ್ರಗಳು. ಇವರಿಗೆ ಸಾಧ್ಯವಾಗಿದ್ದು ಬೇರೆಯವರಿಗೂ ಸಾಧ್ಯವಲ್ಲವೇ

No comments:

Post a Comment