ಕಳೆದ ಸಂಚಿಕೆಯಿಂದ:
ಸಧ್ಯದ ಪರಿಸ್ತಿತಿಯನ್ನು ಅವಲೋಕಿಸಿದಾಗ, ನಮ್ಮಲ್ಲಿ ಯಾರೂ ಪ್ರಾದೇಶಿಕ ಪಕ್ಷವನ್ನು ಸ್ಥಾಪನೆ ಮಾಡುವ ನಾಯಕರೇ ಇಲ್ಲವೇ ಎಂದು ಕೂಲಂಕುಶಿತವಾಗಿ ಪರಿಶೀಲಿಸಿದಾಗ ಕಂಡುಬರುವ ಹೆಸರುಗಳು ಕುಮಾರ ಸ್ವಾಮಿ, ಯಡೆಯೂರಪ್ಪ ಮತ್ತು ಸಿದ್ದರಾಮಯ್ಯ. ಇವರೆಲ್ಲರೂ ಬೇರೆ ಬೇರೆ ಪಕ್ಷಗಳಲ್ಲಿ ಇದ್ದಾರೆ. ಇವರೆಲ್ಲರೂ ಅವರ ಜಾತಿಯ/ವರ್ಗದ ನಾಯಕನೆಂದೇ ಪ್ರಸಿದ್ದರು. ಇವರುಗಳು ಸಹ ಎಲ್ಲಾ ವರ್ಗದ ಜನರನ್ನು ಹೊಂದಿಸಿಕೊಂಡು/ತೂಗಿಸಿಕೊಂಡು ಹೋಗುವ ಸಂಭವಗಳು ಕಾಣುತ್ತಿಲ್ಲ. ಇವರಿಗೆ ಅವರದೇ ಆದ ತೊಡಕುಗಳಿವೆ. ಅದನ್ನು ಬಿಟ್ಟು ಹೊರಬರುವುದು ಕಷ್ಟ. ಕುಮಾರ ಸ್ವಾಮಿ ಯವರು ೪/೫ ಜಿಲ್ಲೆಗಳನ್ನು ಹೊರತುಪಡಿಸಿ ಮಿಕ್ಕೆ ಕಡೆ ಅಷ್ಟಕಷ್ಟೇ. ಇನ್ನು ಯಡೆಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಕಥೆಯೂ ಅಷ್ಟೇ. ಇವರೂ ಮೂರೂ ಜನ ಒಂದು ಕಡೆ ಸೇರಿ, ತಮ್ಮ ತಮ್ಮ ಅಹಂ ಬಿಟ್ಟು ಉಳಿದ ಎಲ್ಲಾ ಜಾತಿ/ಪಂಗಡ/ವರ್ಗದ ಜನರ ಜೊತೆ ಸೇರಿ ಕನ್ನಡ ಮತ್ತು ಕರ್ನಾಟಕದ ಅಭಿವೃದ್ದಿಯ ಬಗ್ಗೆ ಚಿಂತಿಸಿದರೆ ಒಂದು ಹೊಸ ಶಕೆ ಉದಯವಾಗಬಹುದೇನೋ? ಆದರೆ ಇದು ಸಾಧ್ಯವೇ? ಇವರ ಮನಸ್ಥಿತಿ ಇದಕ್ಕೆ ಒಪ್ಪಿಗೆ ಕೊಡುತ್ತದೆಯೇ? ಇವರುಗಳು ಒಬ್ಬರಿಗೊಬ್ಬರನ್ನು ನಂಬುವ ಸ್ತಿತಿಯಲ್ಲಿದ್ದಾರೆಯೆ? ಅಕಸ್ಮಾತ್ ಇವರುಗಳು ಒಬ್ಬರನೊಬ್ಬರು ಅಧಿಕಾರದ ಆಸೆಗೆ ಕೂಡಿಕೊಂಡರೂ ಮತದಾರ ಈ ಮೂವರನ್ನೊ ನಂಬುವ ಸ್ಥಿತಿಯಲ್ಲಿದ್ದಾನೆಯೇ? ಹೀಗೆ ನೂರೆಂಟು ಉತ್ತರವಿಲ್ಲದ ಪ್ರಶ್ನೆಗಳು.
ಜಾತ್ಯಾತೀಯ ಜನತಾದಳ ಪಕ್ಷವು ರಾಷ್ಟೀಯ ಪಕ್ಷವೋ? ಪ್ರಾದೇಶಿಕ ಪಕ್ಷವೊ? ಎಂಬುದು ಅವರ ಪಕ್ಷದವರಿಗೇ ಗೊಂದಲವಿರುವಂತಿದೆ. ಈಗಲೇ ಒಂದು ಪ್ರಾದೇಶಿಕ ಪಕ್ಷವು ಬೇಕೆಂದರೆ (ದಿಡೀರ್ ತಿಂಡಿಯ ಹಾಗೆ) ನಾನಿದ್ದೇನೆ ಎನ್ನುತ್ತಾರೆ ಕುಮಾರ ಸ್ವಾಮಿ. ಇದರ ಜೊತೆ ಸಂಯುಕ್ತ ಜನತಾದಳ, (ಇದು ನಿಜವಾಗಲೂ ರಾಜ್ಯದಲ್ಲಿ ಇದೆಯಾ?) ಶ್ರೀರಾಮುಲು ಅವರ ಬಿ.ಎಸ್.ಆರ್ ಪಕ್ಷವು ಸೇರಬಹುದೇನೋ? (ಮುಗಿಯಿತು) (ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ)
ಸಧ್ಯದ ಪರಿಸ್ತಿತಿಯನ್ನು ಅವಲೋಕಿಸಿದಾಗ, ನಮ್ಮಲ್ಲಿ ಯಾರೂ ಪ್ರಾದೇಶಿಕ ಪಕ್ಷವನ್ನು ಸ್ಥಾಪನೆ ಮಾಡುವ ನಾಯಕರೇ ಇಲ್ಲವೇ ಎಂದು ಕೂಲಂಕುಶಿತವಾಗಿ ಪರಿಶೀಲಿಸಿದಾಗ ಕಂಡುಬರುವ ಹೆಸರುಗಳು ಕುಮಾರ ಸ್ವಾಮಿ, ಯಡೆಯೂರಪ್ಪ ಮತ್ತು ಸಿದ್ದರಾಮಯ್ಯ. ಇವರೆಲ್ಲರೂ ಬೇರೆ ಬೇರೆ ಪಕ್ಷಗಳಲ್ಲಿ ಇದ್ದಾರೆ. ಇವರೆಲ್ಲರೂ ಅವರ ಜಾತಿಯ/ವರ್ಗದ ನಾಯಕನೆಂದೇ ಪ್ರಸಿದ್ದರು. ಇವರುಗಳು ಸಹ ಎಲ್ಲಾ ವರ್ಗದ ಜನರನ್ನು ಹೊಂದಿಸಿಕೊಂಡು/ತೂಗಿಸಿಕೊಂಡು ಹೋಗುವ ಸಂಭವಗಳು ಕಾಣುತ್ತಿಲ್ಲ. ಇವರಿಗೆ ಅವರದೇ ಆದ ತೊಡಕುಗಳಿವೆ. ಅದನ್ನು ಬಿಟ್ಟು ಹೊರಬರುವುದು ಕಷ್ಟ. ಕುಮಾರ ಸ್ವಾಮಿ ಯವರು ೪/೫ ಜಿಲ್ಲೆಗಳನ್ನು ಹೊರತುಪಡಿಸಿ ಮಿಕ್ಕೆ ಕಡೆ ಅಷ್ಟಕಷ್ಟೇ. ಇನ್ನು ಯಡೆಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಕಥೆಯೂ ಅಷ್ಟೇ. ಇವರೂ ಮೂರೂ ಜನ ಒಂದು ಕಡೆ ಸೇರಿ, ತಮ್ಮ ತಮ್ಮ ಅಹಂ ಬಿಟ್ಟು ಉಳಿದ ಎಲ್ಲಾ ಜಾತಿ/ಪಂಗಡ/ವರ್ಗದ ಜನರ ಜೊತೆ ಸೇರಿ ಕನ್ನಡ ಮತ್ತು ಕರ್ನಾಟಕದ ಅಭಿವೃದ್ದಿಯ ಬಗ್ಗೆ ಚಿಂತಿಸಿದರೆ ಒಂದು ಹೊಸ ಶಕೆ ಉದಯವಾಗಬಹುದೇನೋ? ಆದರೆ ಇದು ಸಾಧ್ಯವೇ? ಇವರ ಮನಸ್ಥಿತಿ ಇದಕ್ಕೆ ಒಪ್ಪಿಗೆ ಕೊಡುತ್ತದೆಯೇ? ಇವರುಗಳು ಒಬ್ಬರಿಗೊಬ್ಬರನ್ನು ನಂಬುವ ಸ್ತಿತಿಯಲ್ಲಿದ್ದಾರೆಯೆ? ಅಕಸ್ಮಾತ್ ಇವರುಗಳು ಒಬ್ಬರನೊಬ್ಬರು ಅಧಿಕಾರದ ಆಸೆಗೆ ಕೂಡಿಕೊಂಡರೂ ಮತದಾರ ಈ ಮೂವರನ್ನೊ ನಂಬುವ ಸ್ಥಿತಿಯಲ್ಲಿದ್ದಾನೆಯೇ? ಹೀಗೆ ನೂರೆಂಟು ಉತ್ತರವಿಲ್ಲದ ಪ್ರಶ್ನೆಗಳು.
ಜಾತ್ಯಾತೀಯ ಜನತಾದಳ ಪಕ್ಷವು ರಾಷ್ಟೀಯ ಪಕ್ಷವೋ? ಪ್ರಾದೇಶಿಕ ಪಕ್ಷವೊ? ಎಂಬುದು ಅವರ ಪಕ್ಷದವರಿಗೇ ಗೊಂದಲವಿರುವಂತಿದೆ. ಈಗಲೇ ಒಂದು ಪ್ರಾದೇಶಿಕ ಪಕ್ಷವು ಬೇಕೆಂದರೆ (ದಿಡೀರ್ ತಿಂಡಿಯ ಹಾಗೆ) ನಾನಿದ್ದೇನೆ ಎನ್ನುತ್ತಾರೆ ಕುಮಾರ ಸ್ವಾಮಿ. ಇದರ ಜೊತೆ ಸಂಯುಕ್ತ ಜನತಾದಳ, (ಇದು ನಿಜವಾಗಲೂ ರಾಜ್ಯದಲ್ಲಿ ಇದೆಯಾ?) ಶ್ರೀರಾಮುಲು ಅವರ ಬಿ.ಎಸ್.ಆರ್ ಪಕ್ಷವು ಸೇರಬಹುದೇನೋ? (ಮುಗಿಯಿತು) (ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ)
No comments:
Post a Comment