Tuesday 27 March 2012

ಹೇಳದೆ ಉಳಿದ ಮಾತು:

ನಮ್ಮ ನೆಲದಲ್ಲಿ ನಮ್ಮದೇ ಆದ ಒಂದು ಪ್ರಾದೇಶಿಕ ಪಕ್ಷ ಇಲ್ಲವೆಂಬ ಭಾವನೆ ಬಹಳಷ್ಟು  ಕನ್ನಡಿಗರಲ್ಲಿದೆ.  ಆದರೆ ನಮ್ಮ ಕನ್ನಡ ನಾಡಿನಲ್ಲಿ ಅನ್ಯ ನಾಡಿನ ಬಹಳಷ್ಟು ಪ್ರಾದೇಶಿಕ ಪಕ್ಷಗಳಿವೆ. "ಎ.ಐ.ಡಿ.ಎಂ.ಕೆ" ಕಳೆದ ನಾಲ್ಕು ದಶಕಗಳಿಂದ ಇಲ್ಲಿ ಮನೆ ಮಾಡಿದೆ. ಹಿಂದೆ ಕೆ.ಜಿ.ಎಫ಼್ ನಲ್ಲಿ ಅವರ ಶಾಸಕರು ಸಹ ಆಯ್ಕೆಯಾಗಿದ್ದರು. ಬೆಂಗಳೂರಿನ ಗಾಂಧಿನಗರದಿಂದ ಆ ಪಕ್ಷದ ಶಾಸಕರು ಆಯ್ಕೆ ಯಾಗಿದ್ದೂ ಸಹ ಇದೆ. ಬಂಗಾರಪ್ಪನವರು ಉತ್ತರ ಪ್ರದೇಶದ "ಎಸ್.ಪಿ"ಯನ್ನು ಕನ್ನಡಿಗರಿಗೆ ಕಾಣಿಕೆಯಾಗಿ ಕೊಟ್ಟಿದ್ದೂ ಇದೆ. ಇನ್ನು ಮಾಯಾವತಿಯವರ "ಬಿ.ಎಸ್.ಪಿ" ಸಹ ಇದೆ. ಮಹಾರಾಷ್ಟ್ರದ "ಶಿವಸೇನೆ" ಯನ್ನು ಪ್ರಮೋದ್ ಮುತಾಲಿಕ್ ಅವರು ಕರೆದುಕೊಂಡು ಬಂದಿದ್ದರು. ಕಾರಣಾಂತರದಿಂದ ಅದನ್ನು "ಶ್ರೀರಾಮಸೇನೆ" ಎಂದು ಬದಲಿಸಿದರು. ಎನ್.ಟಿ.ರಾಮರಾವ್ ಅವರು "ತೆಲುಗು ದೇಶಂ" ಅನ್ನು ಕನ್ನಡಕ್ಕೆ ಡಬ್ ಮಾಡಿ "ಕನ್ನಡ ದೇಶಂ" ಎಂದು ಇಲ್ಲಿ ಬೆಳೆಸಲು ನೋಡಿದರು. ಅದು ಕೆಲವು ಕಾರಣಗಳಿಂದ ಸಾಧ್ಯವಾಗಲಿಲ್ಲ. ಬಿಹಾರದ ಲಾಲು ಪ್ರಸಾದ್ ಅವರು ಆರ್.ಜೆ.ಡಿ ಯನ್ನು ಇಲ್ಲಿ ತರಲು ಸೂಕ್ತ ಸಮಯ, ಸಂಧರ್ಬಕ್ಕಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ನಮ್ಮ ಕೆಲವು ಶಾಸಕರು ಮಹರಾಷ್ಟ್ರದ ಶರತ್ ಪವಾರ್ ಅವರ "ಎನ್.ಸಿ.ಪಿ"ಯನ್ನು  ರತ್ನಕಂಬಳಿ ಹಾಸಿ ಕರೆತರಲು ಹೊರಟಿದ್ದಾರೆ. ಬೆಳಗಾವಿಯಲ್ಲಿ "ಎಂ.ಇ.ಎಸ್" ಸದಸ್ಯರು ಶಾಸಕರಾಗಿ, ನಗರ ಸಭೆ ಸದಸ್ಯರಾಗಿ, ಪುರ ಪಿತೃವಾಗಿ ಎಲ್ಲಾ ಬಗೆಯ ಅಧಿಕಾರವನ್ನು ಅನುಭವಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ಕರ್ನಾಟಕದ ಆಡಳಿತ  ಜಯಲಲಿತಾ, ಲಾಲು, ಶರತ್ ಪವಾರ್, ಮುಂತಾದವರ ಕೈಗೆ ಬಂದರೆ ಕನ್ನಡಿಗರು ಆಶ್ಚರ್ಯಪಡುವಂತಹದ್ದೇನೂ ಇಲ್ಲ.

No comments:

Post a Comment