Saturday 17 March 2012

ಮಲ್ಟಿಪ್ಲೆಕ್ಸ್/ಪಿ.ವಿ.ಆರ್.ಮಾಲ್ ನಲ್ಲಿ ಕನ್ನಡ ಚಿತ್ರಗಳು:

ಇತ್ತೀಚೆಗೆ ನಟಿ ತಾರ ಅವರನ್ನು  ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆಯನ್ನಾಗಿ ಸರ್ಕಾರ ನೇಮಿಸಿದೆ. ಅವರಿಗೆ ಮೊದಲು ಅಭಿನಂದನೆಗಳು. ಅವರು ಕನ್ನಡ ಚಿತ್ರರಂಗದ ಒಳಹೊರಗನ್ನು ಚೆನ್ನಾಗಿ ಬಲ್ಲವರು ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಕಾಳಜಿ ಮತ್ತು ಅಭಿಮಾನ ಹೊಂದಿರುವವರು. ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಚೆನ್ನಾಗಿ ಅರಿತಿರುವಂತಹವರು. ಅವರು ಅಧಿಕಾರ ಸ್ವೀಕಾರ ಮಾಡಿದ ನಂತರ ಅವರು ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಪ್ರದರ್ಶನದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಅವುಗಳಲ್ಲಿ ಶೇ.೫೦ ರಷ್ಟನ್ನು ಕನ್ನಡ ಚಿತ್ರಗಳಿಗಾಗಿ ಮೀಸಲಿಡುವಂತೆ ಮಾಡಲಾಗುವುದು ಎಂದು ಹೇಳಿರುವರು. ಇದು ನಿಜವಾಗಲೂ ಒಂದು ಒಳ್ಳೆಯ ನಿರ್ದಾರ. (ಅವರು ಇದರಲ್ಲಿ ಎಷ್ಟು ಯಶಸ್ವಿಯಾಗುತ್ತಾರೋ ಕಾಲವೇ ನಿರ್ಣಯಿಸಬೇಕು.)  ಈಗಿನ ಮಾಲ್/ಮಲ್ಟಿಪ್ಲೆಕ್ಸ್/ಪಿ.ವಿ.ಆರ್ ಗಳಲ್ಲಿ ಕನ್ನಡ ಚಿತ್ರವು ಕೇವಲ ೩-೪ ಪರದೆಯಲ್ಲಿ, ಕೇವಲ ೨-೩ ಪ್ರದರ್ಶನ ಮಾತ್ರ ಕಾಣುತ್ತಿದೆ. (ಮಲ್ಟಿಪ್ಲೆಕ್ಸ್/ಪಿ.ವಿ.ಆರ್ ಮೊದಮೊದಲು ನಮ್ಮ ನಗರದಲ್ಲಿ ಶುರುವಾದಾಗ ಅದರಲ್ಲಿ ಕನ್ನಡ ಚಿತ್ರಗಳಿಗೆ ಮೊದಲ ಅದ್ಯತೆಯನ್ನು ಕೊಡದಿದ್ದರೆ ಅದರ ಪರವಾನಗಿಯನ್ನು ರದ್ದು ಪಡಿಸುವೆವು ಎಂದು ಸರ್ಕಾರ ತಿಳಿಸಿತ್ತು. ಪಾಪ, ಅದಕ್ಕೆ ಈಗ ಜಾಣ ಕುರುಡು )  ಉಳಿದ ೮-೧೦ ಪರದೆಗಳಲ್ಲಿ ಪರಭಾಷಾಚಿತ್ರಗಳದ್ದೇ ಹಾವಳಿ. ಕರ್ನಾಟಕದ ಬಿಡಿ ಚಿತ್ರಮಂದಿರಗಳದ್ದೂ ಇದೇ ಸಮಸ್ಯೆ. ಕರ್ನಾಟಕದಲ್ಲಿರುವ ಸುಮಾರು ೬೫೦ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳು ಸುಮಾರು ೩೫೦-೪೦೦ ಇರಬಹುದು, ಉಳಿದವುಗಳಲ್ಲಿ ಮತ್ತದೇ ಪರಭಾಷಾ ಚಿತ್ರಗಳು. ಇದರ ಬಗ್ಗೆಯೂ ಸರಿಯಾದ ನಿರ್ಣಯಗಳನ್ನು ತಾರ ಅವರು ತೆಗೆದುಕೊಳ್ಳಲಿ. ಇಡೀ ಭಾರತದಲ್ಲಿ ಒಂದು ವರ್ಷ ಪ್ರದರ್ಶನ ಕಂಡಿರುವ ಚಿತ್ರಗಳು ಕೇವಲ ಕನ್ನಡ ಚಿತ್ರಗಳು ಎಂಬ ದಾಖಲೆ ಈಗಲೂ ಇದೆ. ಆದರೊ ಮಲ್ಟಿಪ್ಲೆಕ್ಸ್/ಪಿ.ವಿ.ಆರ್/ಮಾಲ್ ಗಳವರಿಗೆ ಏನೋ ಪೊಗರು.

ಸರ್ಕಾರ/ನಿರ್ಮಾಪಕರು ಚಿತ್ರಮಂದಿರದ ಸಮಸ್ಯೆಗಳಿಗೆ ಏನು ಮಾಡಬಹುದು?

ವರ್ಷ ಪೂರ್ತಿ ನಾಲ್ಕು ಪ್ರದರ್ಶನವೂ ಕೇವಲ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳಿಗೆ :-
* ಉಚಿತ ವಿದ್ಯುತ್ ಮತ್ತು ನೀರು ಸರಬರಾಜು ಮಾಡಬಹುದು.
* ಆಸ್ತಿ ತೆರಿಗೆಯನ್ನು ರದ್ದುಗೊಳಿಸಬಹುದು.

ಮಿಕ್ಕಂತೆ:-

* ಬೆಂಗಳೂರು ನಗರ ಅಭಿವೃದ್ದಿ ಪ್ರಾಧಿಕಾರ ನಿರ್ಮಿಸುವ ಪ್ರತಿ ಬಡಾವಣೆಯಲ್ಲಿ ಕನಿಷ್ಟ ಎರಡು ಚಿತ್ರಮಂದಿರಗಳನ್ನು ನಿರ್ಮಿಸಿ ಅವುಗಳನ್ನು ಕನ್ನಡ ಚಿತ್ರಗಳಿಗೆ ಮಾತ್ರ ಮೀಸಲಿಡಬಹುದು. 
* ಸರ್ಕಾರದ ಶಂಕರ್ ನಾಗ್ ಮತ್ತು ಪುಟ್ಟಣ್ಣ ಚಿತ್ರಮಂದಿರಗಳಲ್ಲಿ ಕೇವಲ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದು.
 ಸರ್ಕಾರವೇ ಪ್ರತಿ ಜಿಲ್ಲೆ/ತಾಲ್ಲೂಕು ಗಳಲ್ಲಿ ೫೦೦ ಜನ ಕುಳಿತುಕೊಳ್ಳಬಹುದಾದ ಕನಿಷ್ಟ ಎರಡು ಚಿತ್ರಮಂದಿರಗಳನ್ನು ನಿರ್ಮಿಸಿ, ಅದನ್ನು ಕನ್ನಡ ಚಿತ್ರಗಳಿಗೆ ಮಾತ್ರ ಮೀಸಲಿಡಬಹುದು.
* ಪಿವಿಆರ್/ಮಲ್ಟಿಪ್ಲೆಕ್ಸ್ ಮುಂತಾದ ಮಾಲ್ ಗಳಲ್ಲಿನ ಚಿತ್ರಮಂದಿರಗಳಲ್ಲಿ ಶೇ.೫೦% ರಷ್ಟನ್ನು ಕನ್ನಡ ಚಿತ್ರಗಳಿಗೆ ಮೀಸಲಿಡಬೇಕೆಂಬ ಕಾನೂನು ಜಾರಿಗೊಳಿಸಬಹುದು.  ಇಲ್ಲದಿದ್ದರೆ ಅವುಗಳ ಪರವಾನಗಿಯನ್ನು ರದ್ದುಗೊಳಿಸಬಹುದು.
* ಸರ್ಕಾರ ಖಾಸಗಿಯವರಿಂದ ಚಿತ್ರಮಂದಿರವನ್ನು ೧೦/೨೦ ವರ್ಷಕ್ಕೆ ಲೀಸ್ ತೆಗೆದುಕೊಂಡು ಅದನ್ನು ಕನ್ನಡ ಚಿತ್ರಗಳಿಗೆ ಮೀಸಲಿಡಬಹುದು.
* ಎಲ್ಲಾ ಚಿತ್ರಮಂದಿರಗಳಲ್ಲಿ ೨ ಪ್ರದರ್ಶನವನ್ನು ಕೇವಲ ಕನ್ನಡ ಚಿತ್ರಗಳಿಗೆ ಮೀಸಲಿಡಬಹುದು.
* ಸರ್ಕಾರ ಸಾರ್ವಜಿನಿಕರ ಸಹಭಾಗಿತ್ವದಲ್ಲಿ ಚಿತ್ರಮಂದಿರಗಳನ್ನು ನಿರ್ಮಿಸಿ ಅದನ್ನು ಕನ್ನಡ ಚಿತ್ರಗಳಿಗಾಗಿ ಮೀಸಿಲಿಡಬಹುದು.
* ಸರ್ಕಾರ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಲಿಯ ಸಹಭಾಗಿತ್ವದಲ್ಲಿ ಚಿತ್ರಮಂದಿರವನ್ನು ನಿರ್ಮಾಣ ಮಾಡಿ ಅದನ್ನು ಕೇವಲ ಕನ್ನಡ ಚಿತ್ರಗಳಿಗಾಗಿ ಮೀಸಲಿಡಬಹುದು.

ನಿರ್ಮಾಪಕರು:

* ಕನ್ನಡ ಚಿತ್ರ ನಿರ್ಮಾಪಕರೇ ನಗರ/ತಾಲೂಕು/ಜಿಲ್ಲಾ ಮಟ್ಟದಲ್ಲಿ ಚಿತ್ರಮಂದಿರಗಳನ್ನು ನಿರ್ಮಿಸಿ ಅದರಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವುದು. (ರಾಕ್ ಲೈನ್, ಕುಮಾರ ಸ್ವಾಮಿ, ಶಿವಣ್ಣ ಮುಂತಾದವರು ಈಗಾಗಲೇ ಇಂತಹ ಪ್ರಯತ್ನದಲ್ಲಿದ್ದಾರೆ), ದ್ವಾರಕೀಶ್, ಕೊಬ್ರಿ ಮಂಜು, ಉಪೇಂದ್ರ, ರವಿಚಂದ್ರನ್, ರಾಮು, ಮುನಿರತ್ನ ಮುಂತಾದವರು ಈ ಪ್ರಯತ್ನ ಮಾಡಬಹುದು. ಅವರಿಗೆ ಅದು ಒಂದು ಆಸ್ತಿಯಂತಾಗುತ್ತದೆ.
* ನಿರ್ಮಾಪಕರು ನಗರದ/ತಾಲ್ಲೂಕು/ಜಿಲ್ಲಾ ಮಟ್ಟದಲ್ಲಿ ಕೆಲವು ಚಿತ್ರಮಂದಿರಗಳನ್ನು ಲೀಸ್ ಮುಖಾಂತರ ತೆಗೆದುಕೊಳ್ಳಬಹುದು.

No comments:

Post a Comment