Saturday 10 March 2012

ಐ.ಎ.ಎಸ್ ಮತ್ತು ಐ,ಪಿ.ಎಸ್:

ಸಚಿವೆ ಶೋಭಾ ಅವರು "ಕರ್ನಾಟಕದಲ್ಲಿ ಐ.ಪಿ.ಎಸ್ ಮತ್ತು ಐ.ಎ.ಎಸ್ ಅದಿಕಾರಿಗಳಲ್ಲಿ ಕನ್ನಡಿಗರು ಬೆರೆಳೆಣಿಕೆಯಷ್ಟಿದ್ದರೆ ಅನ್ಯಭಾಷಿಕರು ೮೦% ರಷ್ಟು ಹೊರ ರಾಜ್ಯದವರಾಗಿದ್ದಾರೆ. ಅನ್ಯ ರಾಜ್ಯದವರಿಗೆ ಭಾಷಾ ಸಮಸ್ಯೆ ಇದೆ. ಹೀಗಿರುವಾಗ ಅವರು ಜನಸಾಮಾನ್ಯರಿಗೆ ಹೇಗೆ ಸ್ಪಂದಿಸುತ್ತಾರೆ  ಇದನ್ನು ಅರಿತು ವಿದ್ಯಾರ್ಥಿ ದೆಸೆಯಲ್ಲಿ ಗುರಿ ಇಟ್ಟು ಕೊಂಡು ಐ..ಎ.ಎಸ್ ಮತ್ತು ಐ.ಪಿ.ಎಸ್ ಸ್ಥಾನಗಳನ್ನು ಕರ್ನಾಟಕದವರು ತುಂಬಬೇಕು" ಎಂದು ಇತ್ತೀಚಿನ ಒಂದು ಸಮಾರಂಭದಲ್ಲಿ ಹೇಳಿರುತ್ತಾರೆ. ಇದು ಖಂಡಿತಾ ಒಂದು ಒಳ್ಳೆಯ ಸಲಹೆ, ನಮ್ಮ ಕನ್ನಡದ ಮಕ್ಕಳಿಗೆ. ಕನ್ನಡಿಗರು ಕೇವಲ ಬೆರೆಳೆಣಿಕೆಯಷ್ಟು ಮಂದಿ ಮಾತ್ರ ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ. ಪರಭಾಷಿಕರು ಇದರಲ್ಲಿ ಯಾವಾಗಲೂ ಮುಂದಿರುತ್ತಾರೆ. ನಮ್ಮ ಕನ್ನಡಿಗರು ಇದರಲ್ಲಿ ಉತೀರ್ಣರಾಗಿ ನಮ್ಮ ರಾಜ್ಯಕ್ಕೆ ಸೇವೆ ಸಲ್ಲಿಸಲು ಉತ್ತಮ ಅವಕಾಶ. ಹೀಗಾದಾಗ ಆಡಳಿತದಲ್ಲಿ ಕನ್ನಡವನ್ನು ಸರಿಯಾಗಿ ಜಾರಿಗೆ ತರಲು ಸಹಕಾರಿಯಾಗುತ್ತದೆ ಮತ್ತು ಜನರ ಕಷ್ಟಗಳನ್ನು ಸರಿಯಾಗಿ ಅದಿಕಾರಿಗಳು ಅರ್ಥ ಮಾಡಿಕೊಳ್ಲಲು ಅವರಿಗೆ ಸಹಕಾರಿಯಾಗುತ್ತದೆ. ನಮ್ಮ ಕರ್ನಾಟಕದಲ್ಲಿ ದೊಡ್ಡ ದೊಡ್ಡ ಸರಕಾರಿ ಅಧಿಕಾರಿಗಳು ಪರಭಾಷಿಕರೇ ಆಗಿದ್ದಾರೆ. ಅವರಲ್ಲಿ ಕೇವಲ ಒಂದಿಬ್ಬರು ಮಾತ್ರ ಕನ್ನಡ ಕಲಿತು ಕನ್ನಡದಲ್ಲಿ ಜನರ ಹತ್ತಿರ ಉತ್ತಮವಾಗಿ ವ್ಯವಹರಿಸುತ್ತಾರೆ. (ಉದಾ.ಪಂಜಾಬ್ ರಾಜ್ಯದವರಾದ ಚಿರಂಜೀವಿ ಸಿಂಗ್ ಇಲ್ಲಿ ಬಂದು ಕನ್ನಡವನ್ನು ಕಲಿತು ಜನಸಾಮಾನ್ಯರ ಜೊತೆ ಕನ್ನಡದಲ್ಲಿ ವ್ಯವಹರಿಸಿ ಅವರ ಕಷ್ಟಗಳಿಗೆ ಸ್ಪಂದಿಸಿರುತ್ತಾರೆ.)
ಅನ್ಯ ರಾಜ್ಯದ ಅಧಿಕಾರಿಗಳ ಜೊತೆ ಜನರಿಗೆ ಅವರ ಸಮಸ್ಯೆಯನ್ನು ಹೇಳಿಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಪೋಷಕರು ತಮ್ಮ ತಮ್ಮ ಮಕ್ಕಳನ್ನು ಈ ಪರೀಕ್ಷೆಗಳಿಗೆ ಸಜ್ಜುಗೊಳಿಸಬಹುದು. ನಮ್ಮ  ಮಕ್ಕಳು ಕೇವಲ ಡಾಕ್ಟರ್ ಮತ್ತು ಇಂಜಿನಿಯರ್ ಆದರೆ ಸಾಕೆಂದು ಹೆಚ್ಚಿನ ಜನ ಯೋಚಿಸುತ್ತಾರೆ. ಇದರ ಬಗ್ಗೆ ಯೋಚಿಸುವವರು ಬಹಳ ಕಮ್ಮಿ. ನಮ್ಮ ಭಾರತದ ಬಿಹಾರ್, ಪಂಜಾಬ್ ಮತ್ತು ತಮಿಳುನಾಡಿನ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಐ.ಎ.ಎಸ್,ಐ.ಪಿ.ಎಸ್ ಅಧಿಕಾರಿಗಳಾಗಿ ಇಡೀ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಕನ್ನಡದ ಮಕ್ಕಳೂ ಇದರಲ್ಲಿ ಮುಂದುವರೆಯಲು ಯೋಚಿಸಬಹುದು.

No comments:

Post a Comment