Sunday 2 June 2013

ಅಸ್ತಂಗತ


ಮೊನ್ನೆ ಸ್ನೇಹಿತರೊಬ್ಬರು
ಆದರು ಅಸ್ತಂಗತ
ಮನೆಯಲ್ಲಿ, ಮನದಲ್ಲಿ
ಸ್ನೇಹಿತರು, ನೆಂಟರಿಷ್ಟರಲ್ಲಿ ದುಖ: ನೋವು
ಯಾರಲ್ಲೂ ಹೇಳಿಕೊಳ್ಳಲಾಗದ ವೇದನೆ
ಮುಂದೇನು? ಯಾರಿಗೂ ಗೊತ್ತಿಲ್ಲ
ತಿಳಿದವರು ಇಲ್ಲವೇ ಇಲ್ಲ!

ಆಡಿಸುವಾತನಿಗೆ ಬೇಜಾರಾದರೆ
ಹೀಗೇ ಆಗುವುದೇನೋ ಅಂತಂದ್ರು ಒಬ್ಬರು
ಕಾಣದ ದೇವ್ರಿಗೆ ಕರುಣೆ ಇಲ್ಲ ಅಂದ್ರು ಮತ್ತೊಬ್ಬರು
ಹೋದವರಿಗೆ ಎಲ್ಲರಿಂದಲೂ, ಎಲ್ಲಾದರಿಂದಲೂ ಬಿಡುಗಡೆ
ಇರುವವರಿಗೆ ಬಂಧನ, ಜೀವಾವಧಿ ಶಿಕ್ಷೆ!

ಜೀವನ ಎಂದರೆ ಹೀಗೆ ಏನೋ?
ಯಾರಲ್ಲೂ ಉತ್ತರ ಇಲ್ಲ
ಇಷ್ಟವಿರಲಿ ಬಿಡಲಿ, ಕೇಳುವವರು ಯಾರು?
ಅನುಭವಿಸಲೇ ಬೇಕು, ಇರುವ ತನಕ
ಇದು ನಿಲ್ಲದ ಬವಣೆ!!

No comments:

Post a Comment