Sunday 15 April 2012

"ಯಾರಿಗೇಳೋಣಾ ನಮ್ಮ ಪ್ರಾಬ್ಲಮ್ಮು, ಕನ್ನಡ ಚಿತ್ರಗಳ ನೋವಿಗೆ ಇಲ್ಲಾ ಮುಲಾಮು"

ನಮ್ಮ ಚಿತ್ರಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಕ್ಕೆ ತೊಂದರೆ ಮಾಡುತ್ತಿದ್ದಾರೆ, ನಾವು ಕೇಳಿದಷ್ಟು ಚಿತ್ರಮಂದಿರಗಳನ್ನು ಕೊಡುತ್ತಿಲ್ಲ ಎಂದು "ಕೈಟ್ಸ್" ಹಿಂದಿ ಚಿತ್ರದ  ವಿತರಕರು ಇತ್ತೀಚೆಗೆ ಸಿ.ಸಿ.ಐ. ಸಂಸ್ಥೆಗೆ ಮೊರೆ ಹೋಗಿದ್ದರು. ಸಿ.ಸಿ.ಐ ಸಂಸ್ಥೆಯು ಕರ್ನಾಟಕ ಚಲನಚಿತ್ರ ಮಂಡಲಿಗೆ "ಹೀಗೆಲ್ಲಾ ಹೇಳುವ ಅಧಿಕಾರ ನಿಮಗಿಲ್ಲ, ಜತೆಗೆ, ಯಾರು ಬೇಕಿದ್ದರೂ ಎಷ್ಟು ಚಿತ್ರಮಂದಿರಗಳಲ್ಲಿ ಬೇಕಿದ್ದರೂ ಚಿತ್ರಗಳನ್ನು ಪ್ರದರ್ಶಿಸಬಹುದು" ಎಂದು ಎಚ್ಚರಿಕೆ ನೀಡುವ ಜೊತೆಗೆ ೧೬.೮೨ ಲಕ್ಷವನ್ನು ದಂಡದ ರೂಪದಲ್ಲಿ ಕೊಡಬೇಕೆಂದು ತಾಕೀತು ಮಾಡಿದೆ. (ಸಿ.ಸಿ.ಐ-ಇದು ಕೇಂದ್ರ ಸರಕಾರದ ಅಧೀನದಲ್ಲಿರುವ ಸಂಸ್ಥೆ. ಭಾರತದಲ್ಲಿ ಯಾರು ಬೇಕಾದರೂ ವ್ಯಾಪಾರ, ವಹಿವಾಟು ನಡೆಸಬಹುದು. ಇದಕ್ಕೆ ಅಡ್ಡಿ ಉಂಟು ಮಾಡುವ ಕೆಲಸಕ್ಕೆ ಯಾರೇ ಮುಂದಾದರೂ ಈ ಸಂಸ್ಥೆ  ಆ ಪ್ರಕರಣಗಳನ್ನು  ದಾಖಲಿಸಿಕೊಂಡು ತನಿಖೆ ನಡೆಸಿ ದಂಡ ನೀಡುವ ಅಧಿಕಾರವಿದೆ)

ಇದಕ್ಕೆ ನಮ್ಮ ಸರ್ಕಾರ, ವಾಣಿಜ್ಯ ಮಂಡಲಿ, ಹಂಚಿಕೆದಾರರು, ನಿರ್ಮಾಪಕರು ಎಲ್ಲರೂ ಕಾರಣರು. ಇವರಲ್ಲಿ ಯಾರಿಗೂ ಒಗ್ಗಟ್ಟಿಲ್ಲ. ಇವರಿಗೆ ಮುಂದಿನ ಗುರಿ, ಆಲೋಚನೆ ಯಾರಿಗೂ ಇಲ್ಲ. ಈ ತರಹದ ಕಷ್ಟಗಳು ಬಂದಾಗ ಏನು ಮಾಡಬೇಕು ಎಂಬುದು ಯಾರಿಗೂ ತಿಳಿದಿಲ್ಲ. ಇವರಿವರೇ ಒಬ್ಬರಿಗೊಬ್ಬರು ಕಚ್ಚಾಡಿಕೊಂಡು ಜಗಳವಾಡುತ್ತಿದ್ದರೆ ಇಬ್ಬರ ಜಗಳ ಮೂರನೆಯವನಿಗೆ ಲಾಭವೆನ್ನುವಂತೆ ಪರಭಾಷಾಚಿತ್ರರಂಗದವರು ಇಲ್ಲಿ ಮೆರೆಯುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ನಾವು ಕೇಳಿದಷ್ಟು ಚಿತ್ರಮಂದಿರ ಕೊಡಿ, ಇಲ್ಲದಿದ್ದರೆ ದಂಡ ಕೊಡಿ. ಹೇಗಿದೆ ನೋಡಿ. ಇವರ ನ್ಯಾಯ. ಒಟ್ಟಿನಲ್ಲಿ ಪ್ರಾದೇಶಿಕ ಭಾಷೆಗಳಿಗೆ (ಕನ್ನಡಕ್ಕೆ ಅನ್ಯಾಯವಾಗುವುದೇ ಜಾಸ್ತಿ) ಅನ್ಯಾಯ ಮಾಡುವುದೇ ಕೆಂದ್ರದ ಗುರಿ ಅಂತ ಕಾಣಿಸುತ್ತದೆ.ನಮ್ಮ ಕನ್ನಡ ಚಿತ್ರಗಳಿಗೆ ನಮ್ಮ ರಾಜ್ಯದಲ್ಲಿ ಸರಿಯಾಗಿ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂಬ ಕೂಗು ಒಂದು ಕಡೆ ಇದ್ದರೆ, ಈಗ ಇವರ ತಕರಾರು. ನಮಗೆ ಸಖತ್ ನಿದ್ದೆ. "ಯಾರಿಗೇಳೋಣಾ ನಮ್ಮ ಪ್ರಾಬ್ಲಮ್ಮು, ಕನ್ನಡದ ನೋವಿಗೆ ಇಲ್ಲಾ ಮುಲಾಮು"

No comments:

Post a Comment