Monday 23 April 2012

ಪ್ರಚಾರ ಕಾರ್ಯದಲ್ಲಿ ನಾವೇಕೆ ಹಿಂದೆ? (ಭಾಗ-೩)

ಕಳೆದ ಸಂಚಿಕೆಯಿಂದ:

ತಮಿಳಿಗೆ ಈಗಾಗಲೇ ಶ್ರೀಲಂಕಾ, ಸಿಂಗಪೂರ್, ಮಲೇಶಿಯಾ, ಕೊಲಾಲಾಂಪುರ್ ದೇಶಗಳಲ್ಲಿ ಅಧಿಕೃತ ಸ್ಥಾನಮಾನ ದೊರಕಿದೆ. ವಿಶ್ವಸಂಸ್ಥೆಯಲ್ಲಿ ತಮಿಳನ್ನು ಒಂದು ಅಧಿಕೃತ ಭಾಷೆಯನ್ನಾಗಿ ಮಾಡಲು ತಮಿಳರು ಸದ್ದಿಲ್ಲದೆ ಕಾರ್ಯದಲ್ಲಿ ತೊಡಗಿದ್ದಾರೆ. ನಾವು ಇನ್ನೂ ಕರ್ನಾಟಕದಲ್ಲಿ ಕನ್ನಡವನ್ನು ಸರಿಯಾಗಿ ಆಡಳಿತ ಭಾಷೆಯನ್ನಾಗಿ ಮಾಡಲು ಪರದಾಡುತ್ತಿದ್ದೇವೆ. ರಜನಿಕಾಂತ್ ಅವರ ಜನ್ಮದಿನವನ್ನು (೧೨ ಡೆಸೆಂಬರ್)  ಅಂತರಾಷ್ಟ್ರೀಯ ಸ್ಟೈಲ್ ದಿನವನ್ನಾಗಿ ಮಾಡಲು ಹೊರಟಿದ್ದಾರೆ.  ನೋಡಿ ಅವರು ಎಷ್ಟು ಮುಂದೆ ಯೋಚಿಸುತ್ತಾರೆ. ನಾವು ಎಷ್ಟು ಹಿಂದೆ ಉಳಿದಿದ್ದೇವೆ ಯೋಚಿಸಿ.

ಇದರಲ್ಲಿ ನಾವು ಎಲ್ಲಾ ತಪ್ಪುಗಳನ್ನು ಸರ್ಕಾರದ ಮೇಲೆ ಹಾಕಿ ಸುಮ್ಮನಾಗುತ್ತೇವೆ. ಇದರಲ್ಲಿ ನಮ್ಮ ಸಾರ್ವಜನಿಕರದೂ (ಕನ್ನಡಿಗರ) ತಪ್ಪೂ ಬಹಳಷ್ಟಿದೆ. ನಾವು ಎಷ್ಟು ಜನ ಮನೆಗೆ/ಕಛೇರಿಗೆ ಕನ್ನಡ ಪತ್ರಿಕೆ ತರಿಸುತ್ತೇವೆ. ಎಷ್ಟು ಜನ ತಿಂಗಳಿಗೆ ಎರಡು ಕನ್ನಡ ಚಿತ್ರವನ್ನು ನೋಡುತ್ತಾರೆ. ಎಷ್ಟು ಜನರ ಮನೆಯಲ್ಲಿ ನಮ್ಮ ಕವಿ/ಸಾಹಿತಿಗಳ ಕನಿಷ್ಟ ೨ ಪುಸ್ತಕಗಳಿವೆ. ಎಷ್ಟು ಜನರಿಗೆ ಸರಿಯಾಗಿ ಕನ್ನಡ ಓದಲು, ಬರೆಯಲು ಬರೆಯುತ್ತದೆ? ಎಷ್ಟು ಜನ ಮಕ್ಕಳಿಗೆ ಕನ್ನಡ ಒದಲು ಬರೆಯಲು ಕಲಿಸುತಿದ್ದಾರೆ? ಮೊನ್ನೆ ಉಗಾದಿ ಹಬ್ಬದ ವಿಶೇಷ ಸಂದರ್ಭಕ್ಕಾಗಿ ಸುಧಾ, ತರಂಗ, ವಿಜಯ ಕರ್ನಾಟಕ ಪತ್ರಿಕಗಳು ಒಂದು ವಿಶೇಷಾಂಕವೊಂದನ್ನು ಹೊರ ಹೊರತಂದಿದ್ದಾರೆ. ನಮ್ಮಲ್ಲಿ ಎಷ್ಟು ಜನ ಅದನ್ನು ತಂದು ಓದಿದ್ದಾರೆ? ಹಬ್ಬಕ್ಕೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ನಾವು ೧೦೦/೧೫೦ ರೂಪಾಯಿಗಳನ್ನು ಖರ್ಚು ಮಾಡಲು ಹಿಂದೆ ಮುಂದೆ ನೋಡುತ್ತೇವೆ  ನಾವು ಏನನ್ನೂ ಮಾಡದೆ ಸುಮ್ಮನೆ ಕನ್ನಡ ಕನ್ನಡ ಅಂತ ಬಾಯಲ್ಲಿ ಹೇಳಿದರೆ ಕನ್ನಡ ಉಳಿಯುತ್ತದೆಯೇ? ಮೊದಲು ನಾವು ಸರಿಯಾದರೆ ಸಮಸ್ತವೂ ಸರಿಯಾಗುತ್ತದೆ. ನಮ್ಮ ಅಭಿಮಾನ ಕೇವಲ ಬಾಯಲ್ಲಿ ಇರವ ಬದಲು ಹೃದಯದಲ್ಲಿದ್ದರೆ ಮಾತ್ರ ಕನ್ನಡ ಉಳಿದೀತು ಬೆಳೆದೀತು.

ಈಗಿನ ಕಾಲದಲ್ಲಿ ಸರಿಯಾದ ಪ್ರಚಾರವಿಲ್ಲದೆ ಯಾವ ಕೆಲಸ ಕಾರ್ಯಗಳೂ ಆಗುವುದಿಲ್ಲ. ಇನ್ನಾದರೂ ಸರ್ಕಾರ, ಸಾರ್ವಜನಿಕರು ಇದರ ಬಗ್ಗೆ ಎಚ್ಚೆತ್ತುಕೊಂಡು ಸರಿಯಾದ ರೀತಿಯಲ್ಲಿ ನಮ್ಮ ಭಾಷೆ, ರಾಜ್ಯವನ್ನು ರಾಷ್ಟ್ರ ಮತ್ತು ಜಾಗತಿಕ ಮಟ್ಟದಲ್ಲಿ ಒಂದು ಬ್ರಾಂಡ್ ಆಗಿ ನಿಲ್ಲಿಸಲು ಪ್ರಯತ್ನ ಪಟ್ಟರೆ ಮಾತ್ರ ಕನ್ನಡ, ಕರ್ನಾಟಕ ಮುಂದಿನ ಪೀಳಿಗೆಗೆ ಉಳಿದೀತು. (ಮುಗಿಯಿತು) (ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.)

No comments:

Post a Comment