Saturday 25 August 2012

ಭಾರತದಲ್ಲಿ ಮಠ, ಮಂದಿರಗಳು: ಭಾಗ ೧


ಭಾರತದಲ್ಲಿ ಮಠ, ಮಂದಿರಗಳಿಗೆ ಕೊರತೆಯಿಲ್ಲ. ಅದರ ಆಸ್ತಿ ಪಾಸ್ತಿಯೂ ಸಹ. ಭಾರತದಲ್ಲಿ ಬಡವರಿರಬಹುದು, ಆದರೆ ನಮ್ಮ ದೇವರುಗಳಲ್ಲಿ ಯೂರೂ ಬಡವರಿಲ್ಲ. ಕೆಲವು ಶ್ರೀಮಂತ ದೇವರುಗಳಿದ್ದರೆ ಮತ್ತೆ ಕೆಲವರು ಭಾರೀ ಭಾರೀ ಶ್ರೀಮಂತರು. ಅನಂತ ಪದ್ಮನಾಭ, ಶ್ರೀನಿವಾಸ, ಗಣೇಶ, ಲಕ್ಷಿ, ಮಂಜುನಾಥ, ಶಿರಡಿ ಸಾಯಿಬಾಬ ಹೀಗೆ ಸಾಮಾನ್ಯವಾಗಿ ಹೆಚ್ಚಿನ ದೇವರುಗಳು ಕೋಟ್ಯಾಧಿಪತಿಗಳೇ. ಸಾವಿರಾರು ಕೋಟಿ ನಗ, ನಾಣ್ಯ, ಬಂಗಾರ, ಮುತ್ತು, ರತ್ನ, ವಜ್ರ, ವೈಡೂರ್ಯಗಳನ್ನು ಹೊಂದಿರುವವರೇ. ತಿರುಪತಿಯ ಒಡೆಯ ಶ್ರೀನಿವಾಸನ ವಾರ್ಷಿಕ ಅದಾಯ ಸುಮಾರು ೯೦೦ ಕೋಟಿಗಳಷ್ಟು, ಶಿರಡಿ ಸಾಯಿಬಾಬನ ವಾರ್ಷಿಕ ಆದಾಯ ಸುಮಾರು ೪೦೦ ಕೋಟಿಗಳಷ್ಟು, ಇನ್ನು ಜಗತ್ತಿನ ಅತ್ಯಂತ ಶ್ರೀಮಂತ ದೇವರೆಂದು ಪ್ರಸಿದ್ದಿಪಡೆದ ಪದ್ಮನಾಭಾನ ಆಸ್ತಿ ಸುಮಾರು ೧೦ ಲಕ್ಷ ಕೋಟಿಗಳಷ್ಟು. (ಇನ್ನೂ ಎಣಿಕೆ ಕಾರ್ಯ ನಡೆಯುತ್ತಿದೆ)

ಇನ್ನು ಮಠಗಳ ಆಸ್ತಿಯ ಬಗ್ಗೆ ಹೇಳುವುದೇ ಬೇಡ. ನಮ್ಮಲ್ಲಿರುವ ಯಾವುದೇ ಮಠಗಳನ್ನು ತೆಗೆದುಕೊಳ್ಳಿ, ಉತ್ತರ ಭಾರತದ ಜೈ ಗುರುದೇವನ ಆಸ್ತಿ ಸುಮಾರು ೧೨,೦೦೦ ಕೋಟಿಗಳಷ್ಟು, ಪುಟ್ಟಪರ್ತಿ ಸಾಯಿಬಾಬನ ಆಸ್ತಿ ಸುಮಾರು ೪೦,೦೦೦ ಕೋಟಿಗಳಷ್ಟು, ಇನ್ನು ಬಿಡದಿಯ ನಿತ್ಯಾನಂದನ ಆಸ್ತಿ ಸುಮಾರು ,೦೦೦ ಕೋಟಿಗಳಷ್ಜು. ಉತ್ತರಾದಿ ಮಠ, ವ್ಯಾಸರಾಜ ಮಠ, ಶಂಕರ ಮಠ, ಉಡುಪಿ ಮಠ, ಸಿದ್ದಗಂಗಾ ಮಠ, ಆದಿ ಚುಂಚನಗಿರಿ ಮಠ ಹೀಗೆ ಯಾವುದೇ ಮಠ ತೆಗೆದುಕೊಳ್ಳಿ ಎಲ್ಲ ಮಠಗಳೂ ಕೋಟಿ ಲೆಕ್ಕದಲ್ಲಿ ಬಾಳುತ್ತವೆ. ಈ ಮಠಗಳು ಸಾವಿರಾರು ಎಕರೆ ಭೂಮಿಯನ್ನೂ ಸಹ ಹೊಂದಿರುವಂತಹದ್ದನ್ನೂ ನಾವು ಕಂಡಿದ್ದೇವೆ. ಕೆಲವು ಮಠಗಳಲ್ಲಿ ನಿತ್ಯವೂ ಅನ್ನದಾನ, ಉಚಿತ ವಿದ್ಯಾದಾನ ಮುಂತಾದ ಕೆಲವು ಸಮಾಜ ಸೇವಾ ಕಾರ್ಯಗಳು ನಡೆಯುತ್ತಿವೆ. ಕೈಗೊಂಡಿವೆ. ಕೆಲವು ಮಠಗಳು ವೈದ್ಯಕೀಯ ಮತ್ತು ಇಂಜಿನಿಯರ್ ಕಾಲೇಜುಗಳನ್ನು ಸಹ ನಡೆಸುತ್ತಿವೆ. ಅದರಿಂದಲೂ ಒಳ್ಳೆಯ ಆದಾಯಗಳಿಸುತ್ತಿವೆ.

ಮಠಗಳನ್ನು ಮತ್ತು ಮಠಾಧೀಶರನ್ನು ಯಾವುದೇ ಸರ್ಕಾರವಾಗಲೀ ಮತ್ತು ರಾಜಕಾರಣಿಯಾಗಲೀ ಎದುರುಹಾಕಿಕೊಳ್ಳುವ ಧೈರ್ಯಮಾಡುವುದಿಲ್ಲ. ಮಠಗಳ ಮಾತನ್ನು ಯಾವುದೇ ಸರ್ಕಾರ ಅಷ್ಟು ಸುಲಭವಾಗಿ ತೆಗೆದುಹಾಕಿಕೊಳ್ಳುವುದಿಲ್ಲ. ಅದು ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರವಾಗಲೀ ಮಠಗಳನ್ನು ಕಂಡರೆ ಭಕ್ತಿ ಭಾವಗಳಿಂದ ಕೈ ಮುಗಿಯುವವರೇ ಮತ್ತು ಎಲ್ಲರೂ ಮಠಾಧೀಶರಿಗೆ ಅಡ್ಡಬೀಳುವವರೇ. (ಮಿಕ್ಕಿದ್ದು ನಾಳೆಗೆ)

No comments:

Post a Comment