Monday 27 August 2012

ಭಾರತದಲ್ಲಿ ಮಠ, ಮಂದಿರಗಳು: ಭಾಗ ೩


ಕಳೆದ ಸಂಚಿಕೆಯಿಂದ


ಭಕ್ತರ ಕಾಣಿಕೆ ಭಗವಂತನ ಮೂಲಕ ಪುನ: ಜನರ ಕಲ್ಯಾಣಕ್ಕೆ ಉಪಯೋಗವಾಗಲಿ. ಭಗಂತನಿಗೆ ಹಣ ಯಾಕೆ? ಅವನು ಬಯಸುವುದು ಭಕ್ತಿ ಮತ್ತು ಭಾವ ಮಾತ್ರ ತಾನೆ. ನಮ್ಮ ದೇಶದಲ್ಲಿ ಅತಿ ಹೆಚ್ಚಿನ ಬಡತನವಿದೆ. ಆಹಾರ ಸಮಸ್ಯೆ, ಆರೋಗ್ಯ, ಕುಡಿಯಲು ನೀರಿನ ಸಮಸ್ಯೆ, ನಿರುದ್ಯೋಗ, ಸರಿಯಾದ ರಸ್ತೆಗಳಿಲ್ಲ, ವಿದ್ಯುತ್ ಸಮಸ್ಯೆ ಇದೆ. ಬಡವರಿಗೆ ನಿಲ್ಲಲು ಸರಿಯಾದ ನೆಲೆಯಿಲ್ಲ, ಮಕ್ಕಳಿಗೆ ಕಲಿಯಲು ಸರಿಯಾದ ಶಾಲೆಗಳಿಲ್ಲ, ಎಷ್ಟೋ ಹಳ್ಳಿಗಳಲ್ಲಿ ಶೌಚಾಲಯವೇ ಇಲ್ಲ. ಹಣದಿಂದ ದೇಶದ ಎಲ್ಲಾ ನದಿಗಳನ್ನು ಒಂದುಗೂಡಿಸಲು ಬಳಸಬಹುದು. ಕುಡಿಯಲು ಮತ್ತು ವ್ಯವಸಾಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ನೀರಿನ ಸಮಸ್ಯೆ ಒಂದೇ ಏಟಿಗೆ ಬಗೆಹರಿಸಬಹುದು. ಎಲ್ಲಾ ಸಮಸ್ಯೆಯಿಂದ ಶಾಶ್ವತ ಮುಕ್ತಿ ಪಡೆಯಬಹುದು, ಈ ಹಣವನ್ನು ಧಾರ್ಮಿಕ ಪ್ರವಾಸೋದ್ಯಮಕ್ಕಾಗಿ ಬಸಬಹುದು ಎಂಬ ವಾದವನ್ನು ಶರದ್ ಪವಾರ್ ಮುಂದಿಡುತ್ತಾರೆ.

ಅವರ ವಾದವೇನೋ ಕೇಳಲು ಚೆನ್ನಾಗಿಯೇ ಇದೆ.  ಆದರೆ ಇದು ಕಾರ್ಯಸಾಧುವೇ ಎಂಬುದು ಬಹು ದೊಡ್ಡ ಪ್ರಶ್ನೆ. ಮುಂದೆ ಇದು ಯಾವ ದಿಕ್ಕಿಗೆ ಹೊರಳುತ್ತದೇಯೋ ಈಗಲೇ ಹೇಳಲಿಕ್ಕಾಗುವುದಿಲ್ಲ. ಬೇರೆಬೇರೆ ಪಕ್ಷಗಳ ಮುಖಂಡರ ಹೇಳಿಕೆಗಳು ಇನ್ನೂ ಪ್ರಕಟವಾಗಿಲ್ಲ. ಮುಖ್ಯವಾಗಿ ಮಿತ್ರಪಕ್ಷವಾದ ಬಿ.ಜೆ.ಪಿ ಇನ್ನೂ ಇದರ ಬಗ್ಗೆ ಬಾಯಿ ಬಿಟ್ಟಿಲ್ಲ. ಇದರ ಬಗ್ಗೆ ಕಾಂಗ್ರೆಸ್ ಸಹ ಮೌನತಾಳಿದೆ. ನಮ್ಮ ದೇಶದ ಇತರೆ ಪ್ರಾದೇಶಿಕ ಪಕ್ಷಗಳ ಹೇಳಿಕೆ ಇನ್ನೂ ಬಂದಿಲ್ಲ.  ಎಲ್ಲ ಕೆಲಸವನ್ನು ಮಾಡಲು ಮೊದಲು ಇಚ್ಚಾಶಕ್ತಿ, ಎಲ್ಲರ ಸಹಮತ ಮತ್ತು ಇದಕ್ಕೆ ಬೇರೆಯದೇ ಆದ ಮನಸ್ತಿತಿ ಬೇಕಾಗುತ್ತದೆ. ಇದು ಅಷ್ಟು ಸುಲಭದ ಕೆಲಸವಲ್ಲ. ನಮ್ಮದು ಅನೇಕ ಭಾಷೆ/ಜಾತಿ/ಧರ್ಮಗಳಿರುವ ಬೀಡು. ಅದಲ್ಲದೇ ನಮ್ಮದು ಪ್ರಜಾಪಭುತ್ವದ ನಾಡು. ಇದು ಎಲ್ಲರ ಸಲಹೆ ಸೂಚನೆ, ಅಭಿಪ್ರಾಯವನ್ನು ಅಪೇಕ್ಷಿಸುತ್ತದೆ.  (ಮುಗಿಯಿತು)

No comments:

Post a Comment