Sunday 26 August 2012

ಭಾರತದಲ್ಲಿ ಮಠ, ಮಂದಿರಗಳು: ಭಾಗ ೨


ಕಳೆದ ಸಂಚಿಕೆಯಿಂದ

ಭಾರತದಲ್ಲಿ ಮಠ, ಮಂದಿರಗಳ ಪರಿಸ್ಥಿತಿ ಹೀಗಿರಬೇಕಾದರೆ, ಜನತಾದಳ (ಸಂಯುಕ್ತ) ಪಕ್ಷದ ನಾಯಕ ಶರದ್ ಯಾದವ್ ಇತ್ತೀಚೆಗೆ ಸರ್ಕಾರಕ್ಕೆ ಒಂದು ಮನವಿಯನ್ನು ಮಾಡಿದ್ದಾರೆ. ನಮ್ಮ ದೇಶದ ಮಠ ಮಂದಿರಗಳಲ್ಲಿ ಕೋಟ್ಯಾಂತರ ಹಣವಿದೆ. ಅದನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಅಭಿವೃದ್ದಿ ಕಾರ್ಯಗಳಿಗೆ ಬಳಸಲಿ. ಇದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಲಿ. ಇದರ ಬಗ್ಗೆ ಒಂದು ಕಾನೂನು ಹೊರತರಲಿ ಎಂಬುದು ಅವರ ಇಚ್ಚೆ. ಇದನ್ನು ಕೆಲವು ಬಡ ಮಠಗಳ ಮಠಧೀಶರು ಸ್ವಾಗತಿಸಿದ್ದರೆ, ಕೆಲವು ಶ್ರೀಮಂತ ಮಠಗಳು ವಿರೋಧಿಸಿವೆ. ಇದು ಜನರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿ. ಸರ್ಕಾರ ಇದನ್ನು ಮಾಡಲು ಬಿಡುವುದಿಲ್ಲ ಎಂದು ಗುಟುರು ಹಾಕಿವೆ. 

ಶರದ್ ಪವಾರ್ ಕೇವಲ ಹಿಂದೂ ಮಠ ಮಂದಿರಗಳ ಬಗ್ಗೆ ಮಾತ್ರ ಮಾತನಾಡಿಲ್ಲ. ಅವರು ಇಸ್ಲಾಂ, ಕ್ರಿಶ್ಶಿಯನ್ ಮುಂತಾದ ಧಾರ್ಮಿಕ ಅಲ್ಪಸಂಖ್ಯಾತ ಧಾರ್ಮಿಕ ಸಂಘಟನೆಯ ಹಣ ಕಾಸು ವಿಚಾರಗಳ ಬಗ್ಗೆಯೂ ಇದೇ ದೋರಣೆ ತಾಳಿದ್ದಾರೆ. ಮುಸ್ಲಿಂ ವಕ್ಫ್ ಬೋರ್ಡ್ ನಲ್ಲಿಯೂ ಸಹ ಲಕ್ಷಾಂತರ ಹಣವಿದೆ. ಅದನ್ನು ಬಡ ಜನರ ಏಳಿಗೆಗಾಗಿ ಉಪಯೋಗಿಸಬಹುದು. ಶಿಕ್ಷಣ, ಆಹಾರ, ವಸತಿ ಹೀಗೆ ಜನಾಂಗದ ಉನ್ನತ ಅಭಿವೃದ್ದಿಗೆ ಬಳಸಬಹುದು ಎಂದಿದ್ದಾರೆ. ಒಂದು ರೀತಿಯಲ್ಲಿ ಅವರು ಹೇಳಿರುವುದು ಸರಿಯಾಗಿದೆ ಎಂದು ಸಮಾಜದ ಉನ್ನತ ವರ್ಗದ ಹಿರಿಯರು, ಬುದ್ದಿಜೀವಿಗಳು ಮತ್ತು ಪ್ರಗತಿಪರರು ಇದನ್ನು ಅನುಮೋದಿಸಿದ್ದಾರೆ, ಮಿಕ್ಕವರಿಗೆ ಅದು ಸಹನೆಯಾಗಿಲ್ಲ. (ಮಿಕ್ಕಿದ್ದು ನಾಳೆಗೆ)


No comments:

Post a Comment