Wednesday 10 April 2013

ಸಮಾರಂಭ



ಮೊನ್ನೆ ಭಾನುವಾರ
ಪುಸ್ತಕ ಬಿಡುಗಡೆ
ಸಮಾರಂಭಕ್ಕೆ ನೀವು
ಬಂದಿದ್ದರೆ ಚೆನ್ನಾಗಿತ್ತು!

ಹೊರಗಡೆ ಉಪ್ಪಿಟ್ಟು
ಕೇಸರಿ ಭಾತು ತಿಂದು
ಒಟ್ಟಿಗೆ ಕಾಫಿ ಕುಡಿ
ಬಹುದಾಗಿತ್ತು!
ಒಳಗಡೆ ಡಿ.ವಿ.ಜಿ ಬಗ್ಗೆ
ನೋಡಿ, ಕೇಳಿ ತಿಳಿದು
ಕೊಳ್ಳಬಹುದಾಗಿತ್ತು!

ಮಾಸ್ಟರ್ ಭಾಷಣ
ಕೇಳಬಹುದಾಗಿತ್ತು!
ಸಿಸ್ಟರ್ಗಳ ಸಡಗರ
ನೋಡಬಹುದಾಗಿತ್ತು
ಫೋಟೋ ತೆಗೆದು
ಕೊಳ್ಳಬಹುದಾಗಿತ್ತು!

ಚೌಟಾ, ಪರೇಶ್. ಕೃಷ್ಣಮೂರ್ತಿ
ಪವನ್, ಸತ್ತಾರ್, ಹುಸೇನ್
ಕೈ ಕುಲಕಬಹುದಾಗಿತ್ತು!
ಮತ್ತಿತರ ಸ್ನೇಹಿತರಿಗೆ
ಹಾಯ್, ಬಾಯ್ ಹೇಳಿ
ಮಂದಹಾಸ ಬೀರಬಹುದಾಗಿತ್ತು!

ಪುಸ್ತಕ ಬರೆದ ರವಿ ತಿರುಮಲೈಗೆ
ಅಭಿನಂದನೆ ತಿಳಿಸಬಹುದಾಗಿತ್ತು!
ನೀವು ಬರದೇ ಇದ್ದದ್ದು ನಮಗೆ
ಬಹಳ ಬೇಜಾರಾಗಿತ್ತು!!

No comments:

Post a Comment