Tuesday 15 May 2012

"ಪರಿಸರ ಸ್ನೇಹಿ" ಸಮಾಧಿ

" ಪರಿಸರಕ್ಕೆ ಹಾನಿ ಮಾಡುವ ಶಾಶ್ವತ ಗೋರಿಗಳನ್ನು ನಿಷೇದಿಸಲು ಕೇರಳದ ಚರ್ಚ್ ಗಳು ಮುಂದಾಗಿವೆ. ಸೀಮೆಂಟ್ ನಿಂದ ನಿರ್ಮಿಸಿರುವ ಗೋರಿಗಳನ್ನು ಮತ್ತೆ ಬಳಸುವುದಕ್ಕೆ ಆಗುವುದಿಲ್ಲ ಮತ್ತು ಕಾಫಿನ್, ಪ್ಲಾಸ್ಟಿಕ್, ಪೈಬರ್ ನಿಂದ ತಯಾರಾದ ವಸ್ತುಗಳು ಭೂಮಿಯಲ್ಲಿ ಕೊಳೆಯುವುದಿಲ್ಲ. ಹಾಗಾಗಿ ಈ ಎಲ್ಲಾ ವಸ್ತುಗಳನ್ನು ನಿಷೇದಿಸಿ ಕೇರಳದ ಎರ್ನಾಕುಲಂನಲ್ಲಿರುವ "ಸೇಂಟ್ ಮೇರಿ ಕೆಥೆಡ್ರಲ್ ಬಾಸಿಲಿಕಾದ ಆಡಳಿತ ಮಂಡಲಿ "ಪರಿಸರ ಸ್ನೇಹಿ" ಸಮಾಧಿ ನಿರ್ಮಾಣ ಮಾಡಿದೆ. ಕ್ರಿಶ್ಚಿಯನ್ ಕುಟುಂಬಗಳು ಮೊದಲಿಗೆ ವಿರೋಧ ವ್ಯಕ್ತ ಪಡಿಸಿದರೂ, ಸಮಸ್ಯೆಯನ್ನು ಅವರಿಗೆ ಅರಿವಾಗುವ ಹಾಗೆ ವಿವರಿಸಿದ ಮೇಲೆ ಅವರು ಒಪ್ಪಿಗೆ ಸೂಚಿಸಿದ್ದಾರೆ.  ಪರಿಸರಕ್ಕೆ ಹಾನಿಯುಂಟು ಮಾಡುವ ಸಮಾಧಿಗಳ ಬದಲು ಸರಳವಾಗಿ ಶವ ಸಂಸ್ಕಾರ ಮಾಡಿ ಸಮಾಧಿ ಮೇಲೆ ಹುಲ್ಲು ಮುಂತಾದವುಗಳನ್ನು ಇರಿಸುವ ವ್ಯವಸ್ಥೆಯನ್ನು ಚರ್ಚ್ ಗಳು ಜಾರಿಗೆ ತಂದಿವೆ " ಈ ಸುದ್ದಿಯು ಮೊನ್ನೆ ದಿನಪತ್ರಿಕೆಯನ್ನು ಓದುತ್ತಿರುವಾಗ ನನ್ನನ್ನು  ಬಹಳ ಆಕರ್ಷಿಸಿತು. ಬೊಂಗಳೂರಿನಂತ ಮಹಾನಗರಗಳಲ್ಲಿ  ಹೊಸದಾಗಿ ಸ್ಮಶಾನವನ್ನು ನಿರ್ಮಿಸಿಲ್ಲ. ಜಾಗದ ಸಮಸ್ಯೆ, ಜಾಗ ಇದ್ದರೂ ಅದರಲ್ಲಿ ನಿವೇಶನವನ್ನು  (ಸೈಟ್) ಮಾಡಿ ವಿಂಗಡಿಸಿ ದುಡ್ಡು ಮಾಡುವ ಯೋಚನೆ. ಇರುವ ಹಳೇ ಸ್ಮಶಾನವನ್ನೇ ಜನರು ಅವಲಂಬಿಸಿದ್ದಾರೆ. ಆ ಸ್ಮಶಾನದಲ್ಲ್ಲಿ ಜಾಗದ ಸಮಸ್ಯೆ. ಜಾಗವು ಸಾಕಾಗುತಿಲ್ಲ.  ವಿದ್ಯುತ್ ಚಿತಾಗಾರದಿಂದ ಇಂತಹ ಸಮಸ್ಯೆ ಪರಿಹಾರವಾದರೂ, ಶವವನ್ನು ನಮ್ಮ ದೇಶದಲ್ಲಿ ಹೂಳುವುದೇ ಹೆಚ್ಚು. ಎಲ್ಲಾ ಶವಗಳನ್ನು ಸುಡಲು ಹೇಳುವುದು ಆಗದ ಮಾತು. ಜಾತಿ/ಧರ್ಮ/ಸಂಪ್ರದಾಯ/ಆಚರಣೆಗಳು ಅಡ್ಡ ಬರುತ್ತದೆ.   ನಮ್ಮ ದೇಶದ ಅನೇಕ ನಗರಗಳಲ್ಲೂ ಈ ಸಮಸ್ಯೆ ಇದೆ. ಇದಕ್ಕೆ ಏನಾದರೂ ಒಂದು ಪರಿಹಾರವನ್ನು ಸಂಬಂಧಪಟ್ಟವರು ಯೋಚಿಸಬೇಕು.

No comments:

Post a Comment