Friday 25 May 2012

ಯೋಜನೆಗಳು

ನಮ್ಮ ರಾಜ್ಯ/ದೇಶ, ಜನ ಸಾಮಾನ್ಯರಿಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಆ ಯೋಜನೆಗಳು ನಿಜವಾಗಿ ಕಾರ್ಯರೂಪಕ್ಕೆ ಬಂದರೆ ಎಷ್ಟು ಚೆನ್ನಾಗಿರುತ್ತಿತ್ತು, ಆದರೆ ಅದು ಹಾಗಾಗಿಲ್ಲ. ಇದು ನಮ್ಮ ದೇಶದ/ರಾಜ್ಯದ ಸಾಮಾನ್ಯ ಪ್ರಜೇಗೂ ಗೊತ್ತು. ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿ ನಮ್ಮ ಅಧಿಕಾರಿಗಳು ಎಡವಿದ್ದಾರೆ. ಒಮ್ಮೆ ರಾಜೀವ್ ಗಾಂಧಿಯವರು, ನಾನು ಒಂದು ರೂಪಾಯಿಯನ್ನು ಯಾವುದಾದರೂ ಯೋಜನೆಗೆ ಬಿಡುಗಡೆ ಮಾಡಿದರೆ ಅದು ಜನ ಸಮಾನ್ಯರಿಗೆ ತಲುಪುವಾಗ ಕೇವಲ ೧೬ ಪೈಸೆಗಳಾಗುವುವು ಎಂದು ಒಮ್ಮೆ ಹೇಳಿದ್ದರು. ಯೋಜನೆಗಳಿಗಾಗಿ ಬಿಡುಗಡೆಯಾಗುವ ಪ್ರತಿಯೊಂದು ಪೈಸೆಯೂ ನಿಜವಾದ ಅರ್ಥದಲ್ಲಿ ಉಪಯೋಗಕ್ಕೆ ಬರುವಂತಿದ್ದರೆ ನಮ್ಮ ರಾಜ್ಯ/ದೇಶ, ಇಡೀ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿರುತ್ತಿತ್ತು.  ಅನೇಕ ಯೋಜನೆಗಳು ಕೇವಲ ದುಡ್ಡು ತಿನ್ನುವುದಕ್ಕಾಗಿಯೇ ರೂಪಗೊಂಡತಹವದ್ದು.  ನಮ್ಮ ರಾಜ್ಯ/ದೇಶದ ಯಾವುದೇ ಯೋಜನೆಗಳನ್ನು ನೋಡಿ, ಅನೇಕ ಯೋಜನೆಗಳು ಪ್ರಾರಂಭದಲ್ಲಿ ತುಂಬಾ ಚೆನ್ನಾಗಿಯೇ ಇರುತ್ತವೆ, ಕ್ರಮೇಣ ಹಾದಿ ತಪ್ಪುತ್ತದೆ. ಉದಾಹರಣೆಗೆ: ಖಾಸಗಿ ಶಾಲೆಯಲ್ಲಿ ೨೫% ಬಡ ಮಕ್ಕಳಿಗೆ ಶಿಕ್ಷಣ, ಮಕ್ಕಳಿಗೆ ಬಿಸಿಯೂಟ, ರೈತರಿಗೆ ೨-೪% ಸಾಲ, ಗೊಬ್ಬರಕ್ಕೆ ಸಹಾಯಧನ, ಉಚಿತ ಶಿಕ್ಷಣ/ಆರೊಗ್ಯ, ಆಶ್ರಯ, ಭಾಗ್ಯಲಕ್ಷಿ ಯೋಜನೆಗಳು, ಮಕ್ಕಳಿಗೆ ಶಾಲೆಗೆ ಹೋಗಲು ಸೈಕಲ್, ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ ಯಂತ್ರ, ಸ್ವಂತ ಉದ್ಯೋಗಕ್ಕಾಗಿ ಸಾಲ, ಹೀಗೆ  ಎಲ್ಲವೂ ಚೆನ್ನಾಗಿದೆ, ಆದರೆ ಅದು ಕೇವಲ ಕಾಗದದ ಮೇಲೆ. ನಿಜವಾಗಿ ಅದು ದೊರಕ ಬೇಕಾದವರಿಗೆ ದೊರಕಿದರೆ ಚೆನ್ನ. ಸಾರ್ವಜನಿಕರು ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಇಂತಹ ಯೋಜನೆಗಳನ್ನು ತಮ್ಮ ಉಪಯೋಗಕ್ಕಾಗಿ ಬಳಸಿಕೊಳ್ಳಬೇಕು. ಕೆಲವರು ಇದರ ಪ್ರಯೋಜನವನ್ನೂ ಪಡೆದುಕೊಂಡಿದ್ದಾರೆ. ಆದರೆ ಸಾಮಾನ್ಯವಾಗಿ ಅದು ರಾಜಕೀಯ ವ್ಯಕ್ತಿಗಳ ಹಿಂಬಾಲಕರಿಗಾಗಿ ಉಪಯೋಗವಾಗುತ್ತಿದೆ.  ಅನೇಕ ಕಾರಣಗಳಿಂದಾಗಿ ಅದು ತಲಪಬೇಕಾದ ಜನರಿಗೆ ತಲಪುವುದಿಲ್ಲ. ಎಲ್ಲೆಲ್ಲೂ ಕೇವಲ ರಾಜಕೀಯ ಕಾರಣಗಳೇ ತುಂಬಿರುತ್ತದೆ. ಅದರಿಂದ ನಮಗೇನು ಲಾಭ ಸಿಗುತ್ತದೆ ಎಂಬುದರ ಮೇಲೆಯೇ ಅದು ಅವಲಂಬಿಸಿರುತ್ತದೆ.

No comments:

Post a Comment