"ನಿನ್ನಾ ಪೂಜೆಗೆ ಬಂದೇ ಮಾದೇಶ್ವರಾ," ಎಂಬ ಹಾಡಿನಿಂದ ಕನ್ನಡಿಗರಿಗೆ ಪರಿಚಿತವಾದ ಕಂಚಿನ ಕಂಠದ "ರಘು ದೀಕ್ಷಿತ್" ಎಂಬ ಅಚ್ಚ ಕನ್ನಡ ಪ್ರತಿಭೆ ನಮ್ಮ ರಾಜ್ಯ/ದೇಶದ ಗಡಿಗಳನ್ನು ದಾಟಿ ಈಗ ಅಂತರರಾಷ್ಟೀಯ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ತೋರಿಸಲು ಹೊರಟಿದ್ದಾರೆ. ಅವರು ಅನೇಕ ದೇಶಗಳಲ್ಲಿ ಈಗಾಗಲೇ ನಮ್ಮ ಕನ್ನಡದ "ಶಿಶುನಾಳ ಷರೀಫ"ರ ಹಾಡುಗಳನ್ನು ಪಾಕ್ಷಿಮಾತ್ಯ ಸಂಗೀತದ ಧಾಟಿಯಲ್ಲಿ ಪ್ರಚಾರ ಪಡಿಸಿದ್ದಾರೆ. ಅವರು ಅಲ್ಲಿ ಅತ್ಯಂತ ಯಶಸ್ವಿಯೂ ಆಗಿದ್ದಾರೆ. ಅವರ ಬಗ್ಗೆ ಹೊರದೇಶದ ಅನೇಕ ಪತ್ರಿಕೆಗಳಲ್ಲಿ ಒಳ್ಳೆಯ ವಿಮರ್ಶೆಯನ್ನೂ ಪಡೆದುಕೊಂಡಿದ್ದಾರೆ. ಲಂಡನ್ನಿನ "ಗಾರ್ಡಿಯನ್" ಪತ್ರಿಕೆ "one of the happiest music bands" ಎಂದು ಇವರನ್ನು ಹೊಗಳಿದೆ. ಲಂಡನ್ ನಲ್ಲಿ ಇವರು ಪ್ರತಿ ವರ್ಷದ ಸಂಗೀತೋತ್ಸವದಲ್ಲಿ ಇವರು ಪ್ರದರ್ಶನವನ್ನು ಕೊಡುತ್ತಾರೆ. ಈಗ ರಘು ಬ್ರಿಟನ್ನಿನ ರಾಣಿ ೨ ನೇ ಎಲಿಜಬತ್ ಅವರ ಸಿಹಾಸನಾರೋಹಣದ ವಜ್ರ ಮಹೋತ್ಸದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಿರುವ ಏಕೈಕ ಹಾಡುಗಾರ. ಹೆಚ್ಚಿನ ಮಾಹಿತಿಗೆ (www.vijaykarnataka.com) ನೋಡಬಹುದು. ಒಂದು ಬೇಸರದ ಸಂಗತಿ ಎಂದರೆ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಸಲ್ಲಬೇಕಾದ ಸ್ಥಾನಮಾನ ಇನ್ನೂ ಸಿಕ್ಕಿಲ್ಲ. ಇವರಂತೆಯೇ ಗಾಯಕರಾದ ರಾಜೇಶ್ ಕೃಷ್ಣನ್, ಹೇಮಂತ್, ಬದ್ರಿ ಪ್ರಸಾದ್, ಶಾಸ್ತ್ರಿ, ವಾರಿಯರ್ ಮುಂತದವರು ಮತ್ತು ಗಾಯಕಿಯರಾದ ಎಂ.ಡಿ.ಪಲ್ಲವಿ, ಸುನೀತಾ, ಸಂಗೀತಾ ಕಟ್ಟಿ, ದಿವ್ಯಾ ರಾಘವನ್ ಹೀಗೆ ಇನ್ನೂ ಅನೇಕರಿದ್ದಾರೆ. ಇವರು ಹಾಡಿರುವ ಹಾಡುಗಳು ಜನಪ್ರಿಯವಾಗಿವೆ, ಕನ್ನಡಿಗರು ಇವರನ್ನು ಮೆಚ್ಚಿದ್ದಾರೆ. ಆದರೂ ಇವರುಗಳಿಗೆ ಕನ್ನಡ ಚಿತ್ರರಂಗದಿಂದ ಸಿಗಬೇಕಾದಷ್ಟು ಪ್ರೋತ್ಸಾಹ ಸಿಕ್ಕಿಲ್ಲ. ಸಂಬಂಧಪಟ್ಟವರು ಗಮನಿಸಿ ಇದನ್ನು ಸರಿಪಡಿಸಬೇಕು.
No comments:
Post a Comment