Tuesday 1 May 2012

ನಮ್ಮ ಕನ್ನಡ ಸಾಫ್ಟ್ ವೇರ್ ಯುವ ಜನತೆ: ಭಾಗ-೨

ಹಿಂದಿನ ಸಂಚಿಕೆಯಿಂದ:

ಕನ್ನಡದ ಏಳಿಗೆಗಾಗಿ ಪಣ ತೊಟ್ಟಿರುವ ಈ ನಮ್ಮ ಯುವ ಪಡೆ  ಏನ್ ಗುರು ಕಾಫಿ ಆಯ್ತಾ, ಗಾಂಚಲಿ ಬಿಡಿ ಕನ್ನಡ ಮಾತಾಡಿ,  ಟ್ರಾನ್ಸ್ ಲೇಟರ್ ಕಮ್ಮುನಿಟಿ ಫ಼ಾರ್ ಕನ್ನಡ, ಕನ್ನಡ ಕಟ್ಟೆ, ಸ್ನೇಹಲೋಕ, ಫೇಸ್ ಬುಕ್ ಕನ್ನಡ ಸಂಘ, ಕನ್ನಡ ಕಲಾ ವೇದಿಕೆ ಮುಂತಾದ ಗುಂಪುಗಳನ್ನು ರಚಿಸಿ ನಮ್ಮ ರಾಜ್ಯ, ಭಾಷೆಯ ಬಗ್ಗೆ ಕಳಕಳಿ ಹೊಂದಿ ತಮ್ಮ ಕೈಲಾದ ಸೇವೆಯನ್ನು ಗಣಕಯಂತ್ರದ ಮೂಲಕ ಮಾಡಿ ಕನ್ನಡವನ್ನು ಜೀವಂತವಾಗಿ ಇಡಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು  ಎಷ್ಟು ಅಭಿನಂದಿಸಿದರೂ ಸಾಲದು.  ಇವು ಕೇವಲ ಕೆಲವು ಉದಾಹರಣೆಗಳು ಮಾತ್ರ.

ಗೂಗಲ್ ನ್ಯೂಸ್ ನಲ್ಲಿ ಬೇರೆ ಭಾಷೆಗಳ ವರದಿಗಳು ಬರುತ್ತಿವೆ, ಆದರೆ ಕನ್ನಡದಲ್ಲಿ ಬರುತ್ತಿಲ್ಲ ಇದಕ್ಕೆ ಏನಾದರೂ ಮಾಡೊಣ ಎಂದು ಒಬ್ಬರು ಹೇಳಿದರೆ, ಅವರಿಗೆ ಕೈ ಜೋಡಿಸಲು ಸಾವಿರಾರು ಮಂದಿ ನಮ್ಮ ಕನ್ನಡ ಯುವ ಸೈನ್ಯ ಸಿದ್ದ.  ಹೀಗೆ ಕನ್ನಡವನ್ನು ಕಟ್ಟುವ ನಮ್ಮ ಯುವ ಸೈನ್ಯವನ್ನ್ನು ಎಲ್ಲಾ ಕನ್ನಡಿಗರು ಪ್ರೋತ್ಸಾಹಿಸಬೇಕಾದದ್ದು  ಆದ್ಯ ಕರ್ತವ್ಯ. ಹೀಗೆ ನಮ್ಮ ಯುವ ಪಡೆ ಕನ್ನಡವನ್ನು ಸದ್ದಿಲ್ಲದೆ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ.  ಈ ತಂತ್ರಾಶಗಳನ್ನು ನಾವು ಮೊಬೈಲ್, ಗಣಕಯಂತ್ರ, ಲ್ಯಾಪ್ ಟಾಪ್ ಮುಂತಾದವುಗಳಲ್ಲಿ ಅಡವಳಿಸಿಕೊಂಡು ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದೇ ನಾವು ಅವರಿಗೆ ಕೊಡುವ ಗೌರವ.

ಅನೇಕರು ಫೇಸ್ ಬುಕ್ ನಲ್ಲಿ ಆಂಗ್ಲ ಲಿಪಿಯಲ್ಲಿ ಕನ್ನಡವನ್ನು ಬರೆಯುತ್ತಾರೆ. ಅಂತಹವರು ದಯವಿಟ್ಟು ಇಂತಹ ತಂತ್ರಾಂಶಗಳನ್ನು ಬಳಸಿಕೊಂಡು ಕನ್ನಡದ ಲಿಪಿಯಲ್ಲೇ ತಮ್ಮ ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಬಳಸಿದರೆ ಎಲ್ಲರಿಗೂ ಸಂತೋಷವಾಗುವುದು.  ನಾವು ಕಚೇರಿಗಳಲ್ಲಿ ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ ಬರೆಯುತ್ತೇವೆ, ನಾವು ಕನ್ನಡವನ್ನು ಹೊರಗಡೆ ಬಳಸುವುದೂ ಸಹ ಕಮ್ಮಿ.  ಕೇವಲ ನಾವು ಕನ್ನಡವನ್ನು ಮಾತನಾಡಿದರೆ ಸಾಲದು, ನಮಗೆ ಓದಲು ಮತ್ತು ಬರೆಯಲು ಬಂದರೆ ನಾವು ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಹಾಯಕವಾಗುವುದು.

ಸಾಫ್ಟ್ ವೇರ್ ನಲ್ಲಿ ಕೆಲಸ ಮಾಡುವವರು ಸಾವಿರಾರು ರೂಪಾಯಿಗಳನ್ನು ಸಂಪಾದಿಸುತ್ತಾರೆ., ಜೀವನವನ್ನು ಬಹಳ ಮೋಜಿನಲ್ಲಿ ಕಳೆಯುತ್ತಾರೆ.  ಅವರಿಗೆ ಸಮಾಜದ ಬಗ್ಗೆ ಪ್ರೀತಿ, ಗೌರವ ಇಲ್ಲ, ಅವರು ಸಮಾಜಕ್ಕಾಗಿ ಏನೊ ಮಾಡುವುದಿಲ್ಲ ಎಂಬುದು ಅನೇಕರ ತಪ್ಪು ತಿಳುವಳಿಕೆ. (ಅಂತಹವರು ಇರಬಹುದು, ಇರಲಿ ಬಿಡಿ ಅವರ ಸಹವಾಸ ನಮಗೇಕೆ?) ನಮಗೆ ನಮ್ಮ ಕನ್ನಡದ ಹುಡುಗರು ಮುಖ್ಯ. ಅವರ ಸಾಧನೆ, ಪರಿಶ್ರಮ ಮುಖ್ಯ.  ಈ ನಮ್ಮ ಕನ್ನಡ ಯುವ ಪಡೆಯ ಸಾಧನೆಗಳನ್ನು ನೋಡಿ. ಇಂತಹ ಅನೇಕ ಕೆಲಸಗಳನ್ನು  ಸದ್ದಿಲ್ಲದೆ ಮಾಡುತ್ತಿರುತ್ತಾರೆ.  ಅವರಿಗೆ ಒಳ್ಳೆಯದಾಗಲಿ. ಶುಭವಾಗಲಿ. (ಮುಗಿಯಿತು)




No comments:

Post a Comment