Wednesday 23 May 2012

"ಇರುವುದೆಲ್ಲವ ಬಿಟ್ಟು ಇರದಿರುವದೆರೆಡೆಗೆ ಚೇತನ"

ಪಾಕೀಸ್ತಾನದಲ್ಲಿ ಬಾಲೀವುಡ್ ಚಿತ್ರಗಳಿಂದ ನಮ್ಮ ಚಿತ್ರಗಳಿಗೆ ಹೊಡೆತ ಬೀಳುತ್ತಿದೆ, ಆದ್ದರಿಂದ ಬಾಲೀವುಡ್ ಚಿತ್ರಗಳನ್ನು ನಿಷೇದಿಸಿ ಎಂದು ಕೂಗು ಹಬ್ಬಿದೆ. ಈಗ ಹಾಲೀವುಡ್ ಚಿತ್ರಗಳು ಹಿಂದಿಗೆ ಡಬ್ ಆಗಿ ಭಾರತದಲ್ಲಿ ಬಿಡುಗಡೆ ಯಾಗುತ್ತಿವೆ.  ಇಂತಹ ಡಬ್ ಆದ ಚಿತ್ರಗಳಿಂದ ಮೂಲ ಹಿಂದಿ ಚಿತ್ರಕ್ಕೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ ಡಬ್ ಆದ ಹಾಲೀವುಡ್ ಚಿತ್ರಗಳನ್ನು ನಿಷೇದಿಸಿ ಎಂದು ಮಹೇಶ್ ಭಟ್ ಮುಂತಾದ ಚಿತ್ರ ನಿರ್ದೇಶಕರು ಕೂಗೆಬ್ಬಿಸಿದ್ದಾರೆ. ಹಿಂದಿಯ ನಿರ್ಮಾಪಕರು ಕೂಡ ಇವರಿಗೆ ಜೊತೆಗೂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತ ವೇದಿಕೆ ಸಹ ಸಿದ್ದವಾಗುತ್ತಿದೆ. ಡಬ್ಬಿಂಗ್ ನಿಷೇದಿಸುವಂತೆ  ಕೇಂದ್ರ ಸಚಿವಾಲಯದ ಮೇಲೆ ಒತ್ತಡ ಹೇರಲು ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಆಂಧ್ರ ಪ್ರದೇಶದ ವಾಣಿಜ್ಯ ಮಂಡಲಿಯ ಅಧ್ಯಕ್ಷ ಸುರೇಶ್ ಬಾಬು ಡಬ್ಬಿಂಗ್ ವಿರೋಧಿ ನಿಲುವು ತಾಳಿದ್ದಾರೆ. ಇಂತಹ ಚಿತ್ರಗಳಿಂದ ನಮ್ಮ ಮಾರುಕಟ್ಟೆಗೆ ಹೊಡೆತ ಎಂದು ಹೇಳುತ್ತಾರೆ. ಮಲೆಯಾಳಂ ಚಿತ್ರರಂಗದಲ್ಲೂ ಡಬ್ಬಿಂಗ್ ನಿಷೇದಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಒಂದೆಡೆ ಹಿಂದಿ, ತೆಲುಗು, ಮಲೆಯಾಳಂ ಚಿತ್ರರಂಗದವರು ಡಬ್ ಚಿತ್ರಗಳ ವಿರೋಧಿಗಳಾಗುವ ಹೊತ್ತಿಗೆ ಕನ್ನಡದಲ್ಲಿ ಡಬ್ ಚಿತ್ರಗಳು ಬೇಕು ಎಂಬ ಕೂಗು. ಇದಕ್ಕಲ್ಲವೇ ಕವಿ ಹೇಳಿರುವುದು "ಇರುವುದೆಲ್ಲವ ಬಿಟ್ಟು ಇರದಿರುವದೆರೆಡೆಗೆ ಚೇತನ" ಎಂದು.  ಮಿಕ್ಕ ವಿವರಗಳಿಗಾಗಿ ೨೦/೪/೧೨ ರ  (www.vijayanextepaper.com) ನೋಡಿ.

No comments:

Post a Comment