Tuesday 15 May 2012

"ಕಠಾರಿವೀರ ಸುರಸುಂದರಾಗಿ"

ಸ್ವರ್ಗ, ನರಕ ಮತ್ತು ಒಳ್ಳೆಯದನ್ನು ಮಾಡಿದರೆ ಸ್ವರ್ಗ್ಪ ಪ್ರಾಪ್ತಿ, ಕೆಟ್ಟದ್ದನ್ನು ಮಾಡಿದರೆ ನರಕ ಕಟ್ಟಿಟ್ಟ ಬುತ್ತಿ ಎಂಬ  ಕಲ್ಪನೆ ಶತಮಾನಗಳಷ್ಟು ಹಳೆಯದು. ಇದನ್ನು ಎಲ್ಲಾ ಧರ್ಮಗಳ ಜನರೂ ಸಮಾನ್ಯವಾಗಿ ನಂಬುತ್ತಾರೆ. ನಂಬಿಕೆ ಮತ್ತು ಭಾವನೆಗಳು ಅವರವರಿಗೆ ಬಿಟ್ಟಿದ್ದು, ಅದನ್ನು ಪ್ರಶ್ನಿಸುವುದು ತಪ್ಪು. ನಮ್ಮ ಪೂರ್ವಿಕರು ಬಹಳ "ಬುದ್ದಿವಂತ"ರು. ನಮ್ಮ ಜನರು ಯಾವಾಗಲೂ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲಿ, ಒಳ್ಳೆಯದನ್ನು ಯೋಚಿಸಲಿ ಎಂದು ಹರಿಯಬಿಟ್ಟ ಈ ಕಲ್ಪನೆ ಬಹಳ ಚೆನ್ನಾಗಿದೆ ಮತ್ತು ಇದು ಇದು ಎಲ್ಲಾ ಕಾಲಕ್ಕೂ ಅನ್ವಯ. ಇದನ್ನು ನೋಡಿದವರು ಮತ್ತು ಅನುಭವಿಸಿದವರು ನಮ್ಮ ನಡುವೆ ಯಾರೂ ಇಲ್ಲ ಮತ್ತು ಇರುವುದಕ್ಕೆ ಸಾಧ್ಯವೂ ಇಲ್ಲ. ನಮ್ಮ ಪುರಾಣ ಪುಣ್ಯ ಕಥೆಗಳಲ್ಲಿ ಇದರ ಬಗ್ಗೆ ಸುಂದರ ಚಿತ್ರಣವಿದೆ. ನಮ್ಮ ಚಿತ್ರರಂಗದ ಮಂದಿ ಅನೇಕ ಭಾರತೀಯ ಭಾಷೆಗಳಲ್ಲಿ ಸ್ವರ್ಗ ನರಕವನ್ನು ಇದು ಹೀಗೆ ಇರಬಹುದು ಎಂದು ಚಿತ್ರಿಸಿದ್ದಾರೆ. ನಮ್ಮ ಕನ್ನಡ ಚಿತ್ರರಂಗದ ಮಂದಿ ಇನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವರ್ಗ ಮತ್ತು ನರಕವನ್ನು ನಮ್ಮ ಕೈಗೆಟುಕುವಷ್ಟು ಹತ್ತಿರ ತಂದಿದ್ದಾರೆ "ಕಠಾರಿವೀರ ಸುರಸುಂದರಾಂಗಿ" ಎಂಬ ೩ ಡಿ ಚಿತ್ರದ ಮೂಲಕ.  ಅದ್ಭುತವಾದ ಛಾಯಾಗ್ರಹಣ "ವೇಣು" ಅವರಿಂದ.  ಈ ಚಿತ್ರದಲ್ಲಿ  ನಿಜವಾದ ನಾಯಕ "ವೇಣು" ಎಂದರೆ "ಉಪೇಂದ್ರ" ಕೋಪ ಮಾಡಿಕೊಳ್ಳಬಾರದು.  ಕನ್ನಡಕ್ಕೆ ನಿಜವಾದ ಡೈಲಾಗ್ ಕಿಂಗ್ "ಉಪೆಂದ್ರ" , ಕನ್ನಡಕ್ಕೆ ಒಬ್ಬರೇ ರೆಬೆಲ್ ಸ್ಟಾರ್ "ಅಂಬರೀಷ್", ಕನ್ನಡಕ್ಕೆ ಒಬ್ಬಳೇ ಪದ್ಮಾವತಿ "ರಮ್ಯಾ". ಈ ತರಹದ ಕಥೆಗಳಲ್ಲಿ ಕಥೆ ಹುಡುಕುವುದಕ್ಕೆಂತ ಚಿತ್ರದ ತಾಂತ್ರಿಕತೆಗೆ ಮಹತ್ವ ಕೊಡುವುದು ಒಳ್ಳೆಯದು. ಆ ನಿಟ್ಟಿನಲ್ಲಿ ಈ ಚಿತ್ರ "ಸೂಪರ್". ಚಿತ್ರವನ್ನು ಮನೆಮಂದಿಯೊಂದಿಗೆ ಕುಳಿತು ನೋಡಬಹುದು. ಮಕ್ಕಳನ್ನು ಕರೆದುಕೊಂಡು ಹೋಗಿ, ಖುಷಿಪಡುತ್ತಾರೆ. ಚಿತ್ರವನ್ನು ನಮ್ಮ ಕನ್ನಡಿಗರು ಗೆಲ್ಲಿಸಿದರೆ ಇನ್ನು ಮುಂದೆ ಕನ್ನಡದಲ್ಲೂ ೩ ಡಿ ಚಿತ್ರಗಳು ಹೆಚ್ಚಿಗೆ ಬರಬಹುದು. ಮುನಿರತ್ನಂ ಅವರನ್ನು ಖಂಡಿತವಾಗಿ ಅಭಿನಂದಿಸಬಹುದು ಅದ್ದೂರಿ ಚಿತ್ರವನ್ನು ಕನ್ನಡ್ದಿಗರಿಗೆ ಕೊಟ್ಟಿದ್ದಕ್ಕೆ.  ಅವರು ಹೇಳಿರುವಂತೆ ಇದು ಕನ್ನಡದ ಮೊದಲ ೩ಡಿ ಚಿತ್ರವಂತೂ  ಖಂಡಿತಾ ಅಲ್ಲ.  ಈ ಮೊದಲು "ಕಾಡಿನ ಜಾತ್ರೆ" "ಸೂಪರ್ ಬಾಯ್" ಮತ್ತು "ನಮ್ಮ ಭೂಮಿ" ಎಂಬ ಚಿತ್ರಗಳು ತೆರೆಕಂಡಿತ್ತು.  ಆ ಮೂರೂ ಚಿತ್ರಗಳು ಕನ್ನಡಿಗರಿಗೆ ಹಿಡಿಸದ ಕಾರಣ ಬಂದಷ್ಟೇ ವೇಗದಲ್ಲಿ ಕಂಬಿಕಿತ್ತಿತ್ತು.

No comments:

Post a Comment