Saturday 19 May 2012

ಹಾಡುಗಳ ಮಹತ್ವ:


ನಮ್ಮ ಭಾರತೀಯ ಚಿತ್ರಗಳಲ್ಲಿ, (ಅದು ಯಾವುದೇ ಭಾಷೆಯಲ್ಲಿರಲಿ) ಹಾಡುಗಳಿಲ್ಲದಿದ್ದರೆ, ಏನೊ ಒಂದು ರೀತಿಯ ಹಪಹಪಿ. ಕೆಲವು ಚಿತ್ರಗಳು ಕೇವಲ ಹಾಡುಗಳಿಂದಲೇ ಯಶಸ್ವಿಯಾಗಿರುವುದುಂಟು. ನಮ್ಮಲ್ಲಿ ಚಲನಚಿತ್ರ ಗೀತೆಗಳಿಗೆ ಹೆಸರಾದ ಹಾಡುಗಾರರೆಂದರೆ, ಮುಖೇಶ್, ಮಹಮದ್ ರಫಿ, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಆಶಾ ಭೊನ್ಲೆ, ಹಿಂದಿ ಚಿತ್ರಗೀತೆಗಳಿಗೆ ಮತ್ತು ಘಂಟಸಾಲ, ಪಿ.ಬಿ.ಶ್ರೀನಿವಾಸ್, ಯೇಸುದಾಸ್, ಎಸ್.ಪಿ.ಬಾಲಸುಬ್ರಮಣ್ಯಂ, ಪಿ.ಆರ್.ಸುಶೀಲ, ಎಸ್.ಆರ್.ಜಾನಕಿ, ಚಿತ್ರ, ಎಲ್.ಆರ್.ಈಶ್ವರಿ ದಕ್ಷಿಣ ಭಾರತಕ್ಕೆ. ಇವರೆಲ್ಲಾ ಗಾನ ಗಂಧರ್ವ ಕಿನ್ನರರು. ನಮ್ಮ ರಾಜ್ ಕುಮಾರ್ ನಾಯಕ ನಟರಾಗಿದ್ದುಕೊಂಡು ಗಾಯನಕ್ಕಾಗಿ "ರಾಷ್ಟ್ರ ಪ್ರಶಸ್ತಿ" ಪಡೆದ ಭಾರತೀಯ ಚಿತ್ರರಂಗದ ಏಕೈಕ ಗಾನ ಗಂಧರ್ವ ಕಿನ್ನರ. ಹಾಡುಗಳು ಎಂದಾಕ್ಷಣ ತಕ್ಷಣಕ್ಕೆ ಹೊಳೆಯುವುದು. ಆ ಹಾಡುಗಳ ಸಾಹಿತ್ಯ, ಅದನ್ನು ಬರೆದವರು, ಸಂಗೀತ ಸಂಯೋಜನೆ ಮಾಡಿದವರು, ಹಾಡಿದವರು ಮತ್ತು ಆ ದೃಶ್ಯವನ್ನು ಕಟ್ಟಿಕೊಟ್ಟ ನಿರ್ದೇಶಕರು, ಈ ನಾಲ್ವರೂ ನೆನಪಾಗುತ್ತಾರೆ.  ಈ ಎಲ್ಲಾ ಸರಸ್ವತಿ ಪುತ್ರ/ಪುತ್ರಿಯರಿಂದ ಒಂದು ಅದ್ಭುತ ಸೃಷ್ಟಿಯಾಗುತ್ತದೆ.
ಹಾಡುಗಳು ನಮ್ಮನ್ನು ಅಳಿಸತ್ತದೆ, ನಗಿಸುತ್ತದೆ, ನಿದ್ದೆ ಮಾಡಿಸುತ್ತದೆ, ಕುಣಿಸುತ್ತದೆ, ವಿರಹ ಉಂಟುಮಾಡತ್ತದೆ, ಪ್ರೀತಿ ಮೂಡಿಸುತ್ತದೆ, ಪ್ರೇಮಿಸುವಂತೆ ಮಾಡಿಸುತ್ತದೆ, ರಸಿಕನನ್ನಾಗಿ ಮಾಡುತ್ತದೆ, ಅಣ್ಣ-ತಂಗಿ ಬಾಂಧವ್ಯ ಬೆಸೆಯತ್ತದೆ, ತಂದೆ/ತಾಯಿ/ಗುರು/ಹಿರಿಯರನ್ನು ಗೌರವಿಸುವಂತೆ ಮಾಡಿಸುತ್ತದೆ, ಸ್ನೇಹಕ್ಕೆ ಕಟ್ಟು ಬೀಳಿಸುತ್ತದೆ, ದೈವಕ್ಕೆ  ಶರಣಾಗಿಸುತ್ತದೆ,  ದೇಶ ಭಕ್ತಿ ತುಂಬುತ್ತದೆ, ನಾಡು/ನುಡಿ ಬಗ್ಗೆ ಪ್ರೇಮ ಉಕ್ಕಿಸುತ್ತದೆ, ನಮ್ಮನ್ನು ನೋಯಿಸುತ್ತದೆ, ನಲಿಸುತ್ತದೆ, ಒಟ್ಟಾಗಿ ಕೂಡಿ ಬದುಕಲು ಕಲಿಸುತ್ತದೆ, ಒಬ್ಬಂಟಿಯಾಗಿದ್ದಾಗ ಸಂಗಾತಿಯಾಗುತ್ತದೆ, ಜೀವದ ಬೆಲೆ ತಿಳಿಸಿಕೊಡುತ್ತದೆ, ಅದಕ್ಕಿಂತ ಹೆಚ್ಚಾಗೆ ನಾವು ಸೋತಾಗ ನಮ್ಮನ್ನು ಕೈಹಿಡಿದು ಮುಂದೆ ನಡೆಸುತ್ತದೆ, ಬದುಕು ಕಟ್ಟಿಕೊಡತ್ತೆ. ಒಂದು ಕ್ಷಣ ನಮ್ಮನ್ನು ನಾವೇ ಮರೆಯುವಂತೆ ಮಾಡುತ್ತದೆ. ಹೀಗೆ ಎಲ್ಲವನ್ನೂ ಮಾಡುವ ಶಕ್ತಿ ಕೇವಲ ಹಾಡುಗಳಿವೆ. ಮೂರು ನಿಮಿಷದ ಹಾಡು ಇನ್ನೇನು ಮಾಡಬೇಕು?   ಸಾಕಲ್ವಾ.....

No comments:

Post a Comment