Sunday 20 May 2012

ಪಾಶ್ಚಿಮಾತ್ಯ ಕಂಪನಿಗಳ ಕುತಂತ್ರ:

ಪಾಶ್ಚಿಮಾತ್ಯ ಕಂಪನಿಗಳು ಕಾಳಿಕಾ ದೇವಿಯ ಕೈಯಲ್ಲಿ ಬೀರ್ ಬಾಟಲ್, ಬಿಕನಿಯ ಮೇಲೆ ಸರಸ್ವತಿ, ಲಕ್ಷ್ಮಿ ಚಿತ್ರಗಳು, ಚಪ್ಪಲಿ, ಬೂಟಿನ ಮೇಲೆ "ಓಂ" ಚಿಹ್ನೆ ಅಥವಾ ಹನುಮಾನ್, ಗಣಪತಿ ಚಿತ್ರಗಳನ್ನು ಮುದ್ರಿಸಿ ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆ ಬಿಡುತ್ತಿರುವುದು ನಿನ್ನೆ ಮೊನ್ನೆಯ ಮಾತಲ್ಲ. ಸುಮಾರು ವರ್ಷಗಳಿಂದ ಇದು ನಡೆಯುತ್ತಲೇ ಬಂದಿದೆ. ಹಿಂದು ಸಂಘಟನೆಗಳು ಇದರ ಬಗ್ಗೆ ಕೂಗಿ ಗಲಾಟೆ ಎಬ್ಬಿಸಿದಾಗ ಮಾತ್ರ,  ಕ್ಷಮಿಸಿ ಎನ್ನುವ ನಾಟಕ ಮಾಡುತ್ತಾರೆ. ಇದು ವಿಕೃತ ಮನಸ್ಸಿನ ಪರಮಾವಧಿ. ಇದು ಘೋರ ಅಪರಾಧ. ತಪ್ಪಿತಸ್ತರಿಗೆ ಸರಿಯಾದ ಶಿಕ್ಷೆ ಆದರೆ ಮಾತ್ರ ಇಂತಹ ವಿಕೃತಿಗೆ ಕಡಿವಾಣ ಹಾಕಬಹುದು. ಇದಕ್ಕಾಗಿಯೇ ಕಾನೂನು ಸಹ ಇದೆ. ಪ್ರತಿಯೊಂದು ಜಾತಿ/ಧರ್ಮಕ್ಕೊ ಅದರದೇ ಆದ ನಂಬಿಕೆ, ಸಂಸ್ಕೃತಿ, ಅಚಾರ, ವಿಚಾರಗಳು ಇರುತ್ತದೆ. ಅದನ್ನು ಹೀಯಾಳಿಸುವುದಾಗಲೀ, ವಿಕೃತವಾಗಿ ಚಿತ್ರಿಸುವ ಹಕ್ಕಾಗಲೀ ಯಾರಿಗೂ ಇಲ್ಲ. ನಿಜವಾದ ಧರ್ಮ ಪಾಲಕರು ಯಾರೂ ಇಂತಹ ಕೆಲಸವನ್ನು ಮಾಡುವುದಿಲ್ಲ. ತನ್ನ ಧರ್ಮವನ್ನು ಯಾರು ನಿಜವಾಗಿ ಪ್ರೀತಿಸುತ್ತಾರೋ, ಗೌರವಿಸುತ್ತಾರೊ ಅಂಥಹವರು ಮಾತ್ರ ಬೇರೆಯ ಧರ್ಮವನ್ನು ಗೌರವಿಸುತ್ತಾರೆ. ನಿಜವಾದ ಬಲಶಾಲಿ ಮಾತ್ರ ಮತ್ತೊಬ್ಬ ಬಲಶಾಲಿಯನ್ನು ಗೌರವಿಸುತ್ತಾನೆ.

No comments:

Post a Comment