ಜಪಾನ ಒಂದು ಪುಟ್ಟ ದ್ವೀಪ ರಾಷ್ಟ, ಅಲ್ಲಿ ಭೂಕಂಪ, ಸುನಾಮಿ ಸರ್ವೇಸಾಮಾನ್ಯ. ಕಳೆದ ವರ್ಷ ಮಾರ್ಚ್ ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಅಲ್ಲಿರುವ ಅನೇಕ ಅಣುಸ್ಥಾವರಗಳು ಹಾನಿಗೊಂಡವು. ಆಲ್ಲಿ ಪರಮಾಣು ವಿರೋಧಿ ಚಳುವಳಿ ಪ್ರಾರಂಭವಾಯಿತು. ಅಲ್ಲಿನ ಸರ್ಕಾರ ಜನರ ಪ್ರತಿಭಟನೆಗೆ ಮಣಿದು ತನ್ನಲ್ಲಿದ್ದ ಎಲ್ಲಾ ಅಣುಸ್ಥಾವರಗಳನ್ನು ಮುಚ್ಚಿದೆ. ನನಗೆ ಆಶ್ಚರ್ಯವಾದ ಸಂಗತಿ ಏನೆಂದರೆ, ಜಪಾನ್ ಸರ್ಕಾರ ತನ್ನ ಪ್ರಜೆಗಳ ಗೌರವ, ಆರೋಗ್ಯ ಮತ್ತು ಯೋಗಕ್ಷೇಮಮನ್ನು ಯಾವ ರೀತಿ ಕಾಪಾಡುತ್ತದೆ ಎಂದು. ಅಲ್ಲಿ ಇಲ್ಲಿಯ ತನಕ ವಿದ್ಯುತ್ ಅಭಾವ ಎಂಬುದೇ ಇಲ್ಲ. ಅಲ್ಲಿ ಪವರ್ ಕಟ್ ಮಾತೇ ಇಲ್ಲ. ಇದೆಲ್ಲವೂ ಅಣುಸ್ಥಾವರದಿಂದ ಆದ ಪ್ರಯೋಜನ. ಆದರೂ ಅವರಿಗೆ ತಮ್ಮ ಪ್ರಜೆಗಳ ಬಗೆಗಿನ ಕಾಳಜಿಗಾಗಿ ತನ್ನೆಲ್ಲಾ ಅಣುಸ್ಥಾವರವನ್ನು ಮುಚ್ಚಿದೆ ಎಂದರೆ ಅದು ನಿಜಕ್ಕೂ ಮೆಚ್ಚುವಂತಹದ್ದು. ಈಗ ಆಲ್ಲಿ ಯಾವುದೇ ಅಣುಸ್ಥಾವರ ಇಲ್ಲ. ನಾವು ಇಲ್ಲಿ ನಮ್ಮ ದೇಶದಲ್ಲಿ ಒಂದೊಂದೇ ಅಣು ಸ್ಥಾವರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದೇವೆ (ಈಗ ನಮ್ಮಲ್ಲಿ ೧೯ ಅಣುಸ್ಥಾವರವಿದೆ) ಜಪಾನ್ ರಾಷ್ಟ್ರವೇನೋ ಎಚ್ಚೆತ್ತುಕೊಂಡು ತನ್ನಲ್ಲಿದ್ದ ಎಲ್ಲಾ ಅಣುಸ್ಥಾವರವನ್ನು ಮುಚ್ಚಿದೆ. ಈಗ ಅದು ಪರಮಾಣು ಸ್ಥಾವರ ಮುಕ್ತ ರಾಷ್ಟ್ರ. ನಾವು ಈಗ ಪರಮಾಣು ರಾಷ್ಟ್ರವಾಗಲು ಹೊರಟಿದ್ದೇವೆ. ಈಗ ನಾವೂ ಕೂಡ ಭೂಕಂಪ, ಸುನಾಮಿಯ ಹಾವಳಿ ಅನುಭವಿಸಿದ್ದೇವೆ. ಅಕಸ್ಮಾತ್ ಭೂಕಂಪ, ಸುನಾಮಿಗಳು ಮತ್ತೊಮ್ಮೆ ಮಗದೊಮ್ಮೆ ಆಗಿ, ಇಂತಹ ಅಣುಸ್ಥಾವರಕ್ಕೆ ಧಕ್ಕೆ ಉಂಟಾದರೆ, ನಮ್ಮನ್ನು ಆ ದೇವರೇ ಕಾಪಾಡಬೇಕು.
ಅಣುಸ್ಥಾವರದಿಂದ ನಮಗೆ ವಿದ್ಯುತ್ ಕೊರತೆಯುಂಟಾಗುವುದಿಲ್ಲ, ನಿಜ ಆದರೆ ಅದರ ದುಶ್ಪರಿಣಾಮದಿಂದ ಜನರ ಜೀವಕ್ಕೆ ಅಪಾಯಯುಂಟಾದರೆ ಯಾರು ಹೊಣೆ? ಯಾಕೆಂದರೆ ಇದರಂದ ತೊಂದರೆಗೆ ಈಡಾಗುವುದು ಕೇವಲ ಬಡಜನತೆ, ಅಮಾಯಕರು. ರಾಜಕಾರಣಿಗಳಿಗೆ ಇದರಿಂದ ಏನೂ ತೊಂದರೆ ಆಗುವುದಿಲ್ಲ. ನಮ್ಮ ಸರ್ಕಾರಕ್ಕೆ, ರಾಜಕಾರಣಿಗಳಿಗೆ ಅದನ್ನು ಸರಿಯಾಗಿ ನಿಭಾಯಿಸುವುದು ಗೊತ್ತಿಲ್ಲ. ಇದಕ್ಕೆ ಪಕ್ಕಾ ಉದಾಹರಣೆಯೆಂದರೆ ಭೂಪಾಲ್ ದುರಂತ. ಭೂಪಾಲ್ ದುರಂತವು ಇನ್ನೂ ನಮ್ಮ ಕಣ್ಣ ಮುಂದಿದೆ. ಈಗಲೂ ನಾವು ಆ ಅನಾಹುತದಿಂದ ಎಚ್ಚೆತ್ತುಕೊಂಡಿಲ್ಲ. ಅಲ್ಲಿ ಆರೋಗ್ಯ ಸಮಸ್ಯೆ ಇದೆ. ಹುಟ್ಟುವ ಮಕ್ಕಳು ಅಂಗವಿಕಲರಾಗೇ ಹುಟ್ಟುತ್ತಿದ್ದಾರೆ. ಅವರನ್ನು ಕೇಳುವವರು ಯಾರೂ ಇಲ್ಲ. ಇನ್ನೂ ಅಲ್ಲಿನ ಜನಕ್ಕೆ ನ್ಯಾಯ ಸಿಕ್ಕಿಲ್ಲ. ಸಾವಿರಾರು ಜನರು ಅದರಿಂದ ತಮ್ಮ ಪ್ರಾಣವನ್ನೇ ಕಳೆದುಕೊಂಡರೆ, ಇಂದಿಗೂ ಅಲ್ಲಿ ಅಂಗವಿಕಲ ಮಕ್ಕಳು ಹುಟ್ಟುತ್ತಲೇ ಇದ್ದಾರೆ. ಇದು ಅದರಿಂದ ಉಂಟಾದ ಪರಿಣಾಮ. ನಮ್ಮ ರಾಜಕೀಯ ಪಕ್ಷಗಳಿಗೆ, ರಾಜಕಾರಣಿಗಳಿಗೆ ನಾವುಗಳು ಪ್ರಜೆಗಳಾಗಿ ಕಾಣಿಸುವುದಿಲ್ಲ. ನಾವು ಅವರಿಗೆ ಕೇವಲ ಒಂದು ಮತವಾಗಿ ಕಾಣಿಸುತ್ತೇವೆ. ಇದು ನಮ್ಮ ದೌರ್ಭಾಗ್ಯ.
ಅಣುಸ್ಥಾವರದಿಂದ ನಮಗೆ ವಿದ್ಯುತ್ ಕೊರತೆಯುಂಟಾಗುವುದಿಲ್ಲ, ನಿಜ ಆದರೆ ಅದರ ದುಶ್ಪರಿಣಾಮದಿಂದ ಜನರ ಜೀವಕ್ಕೆ ಅಪಾಯಯುಂಟಾದರೆ ಯಾರು ಹೊಣೆ? ಯಾಕೆಂದರೆ ಇದರಂದ ತೊಂದರೆಗೆ ಈಡಾಗುವುದು ಕೇವಲ ಬಡಜನತೆ, ಅಮಾಯಕರು. ರಾಜಕಾರಣಿಗಳಿಗೆ ಇದರಿಂದ ಏನೂ ತೊಂದರೆ ಆಗುವುದಿಲ್ಲ. ನಮ್ಮ ಸರ್ಕಾರಕ್ಕೆ, ರಾಜಕಾರಣಿಗಳಿಗೆ ಅದನ್ನು ಸರಿಯಾಗಿ ನಿಭಾಯಿಸುವುದು ಗೊತ್ತಿಲ್ಲ. ಇದಕ್ಕೆ ಪಕ್ಕಾ ಉದಾಹರಣೆಯೆಂದರೆ ಭೂಪಾಲ್ ದುರಂತ. ಭೂಪಾಲ್ ದುರಂತವು ಇನ್ನೂ ನಮ್ಮ ಕಣ್ಣ ಮುಂದಿದೆ. ಈಗಲೂ ನಾವು ಆ ಅನಾಹುತದಿಂದ ಎಚ್ಚೆತ್ತುಕೊಂಡಿಲ್ಲ. ಅಲ್ಲಿ ಆರೋಗ್ಯ ಸಮಸ್ಯೆ ಇದೆ. ಹುಟ್ಟುವ ಮಕ್ಕಳು ಅಂಗವಿಕಲರಾಗೇ ಹುಟ್ಟುತ್ತಿದ್ದಾರೆ. ಅವರನ್ನು ಕೇಳುವವರು ಯಾರೂ ಇಲ್ಲ. ಇನ್ನೂ ಅಲ್ಲಿನ ಜನಕ್ಕೆ ನ್ಯಾಯ ಸಿಕ್ಕಿಲ್ಲ. ಸಾವಿರಾರು ಜನರು ಅದರಿಂದ ತಮ್ಮ ಪ್ರಾಣವನ್ನೇ ಕಳೆದುಕೊಂಡರೆ, ಇಂದಿಗೂ ಅಲ್ಲಿ ಅಂಗವಿಕಲ ಮಕ್ಕಳು ಹುಟ್ಟುತ್ತಲೇ ಇದ್ದಾರೆ. ಇದು ಅದರಿಂದ ಉಂಟಾದ ಪರಿಣಾಮ. ನಮ್ಮ ರಾಜಕೀಯ ಪಕ್ಷಗಳಿಗೆ, ರಾಜಕಾರಣಿಗಳಿಗೆ ನಾವುಗಳು ಪ್ರಜೆಗಳಾಗಿ ಕಾಣಿಸುವುದಿಲ್ಲ. ನಾವು ಅವರಿಗೆ ಕೇವಲ ಒಂದು ಮತವಾಗಿ ಕಾಣಿಸುತ್ತೇವೆ. ಇದು ನಮ್ಮ ದೌರ್ಭಾಗ್ಯ.
No comments:
Post a Comment