೬೦-೭೦-೮೦ರ ದಶಕದಲ್ಲಿ "ಸುಧಾ, ಪ್ರಜಾಮತ, ಕಸ್ತೂರಿ, ಮಯೂರ, ಕರ್ಮವೀರ, ತುಷಾರ, ತರಂಗ" ಮುಂತಾದ ವಾರ/ಮಾಸ ಪತ್ರಿಕೆಗಳಿಲ್ಲದ ಕನ್ನಡಿಗರ ಮನೆಯೇ ಇರಲಿಲ್ಲವೇನೋ. ಅನೇಕ ಮನೆಗಳಲ್ಲಿ ಈ ವಾರ/ಮಾಸ ಪತ್ರಿಕೆಗಳಿಗಾಗಿ ಮೊದಲು ತಾವೇ ಓದಬೇಕೆಂದು ಜಗಳಗಳೂ ನಡೆದದ್ದು ಉಂಟು ಎಂದರೆ ಈಗಿನವರು ನಗುತ್ತಾರೇನೋ? ಅದರಲ್ಲಿ ಬರುತ್ತಿದ್ದ ಕಥೆ, ಧಾರಾವಾಹಿಗಳು ಬಹಳ ಚೆನ್ನಾಗಿರುತ್ತಿತ್ತು. ಅನೇಕ ಕಥೆಗಳು ಮತ್ತು ಧಾರಾವಾಹಿಗಳು ನಮ್ಮ ಕನ್ನಡ ಚಿತ್ರರಂಗದ ನಿರ್ದೇಶಕರನ್ನು ಆಕರ್ಷಿಸಿ, ಅವರುಗಳು ಅದನ್ನು ಆಧರಿಸಿ ಚಿತ್ರಗಳೂ ಸಹ ತೆರೆಗೆ ಬಂದವು. ಅಂತ, ನಾ ನಿನ್ನ ಮರೆಯಲಾರೆ. ಸಿಪಾಯಿ ರಾಮು, ಹೊಂಬಿಸಿಲು ಮುಂತಾದವು ಪ್ರಮುಖ ಚಿತ್ರಗಳು. ಆಗಿನ ನಿರ್ದೇಶಕರಿಗೆ ಈ ಕಥೆ, ಧಾರವಾಹಿಗಳ ಬಗ್ಗೆ ಆಸಕ್ತಿಯೂ ಇತ್ತು. ಮುಂದೆ ಅನೇಕ ಖಾಸಿಗಿ ಟಿ.ವಿ.ಗಳು ಲಗ್ಗೆ ಇಟ್ಟಾಗ ಬಹಳಷ್ಟು ಓದುಗರು ತೆರೆಗೆ ಸರಿದರು. ಈ ವಾರ/ಮಾಸ ಪತ್ರಿಕೆಗಳ ಪ್ರಸಾರ ಸಂಖ್ಯೆಯೂ ಕಡಿಮೆಯಾಯಿತು. ಆದರೆ ಈ ಪತ್ರಿಕೆಗಳು ಈಗಲೂ ಬರುತ್ತಿರುವುದು ಬಹಳ ಸಂತೋಷವಾದ ವಿಷಯವಾಗಿದೆ. ಮಧ್ಯಮ ವರ್ಗದ ಕನ್ನಡಿಗರ ಮಹಿಳೆಯರು ಹೊರಗಡೆ ಕೆಲಸ ಮಾಡಲು ಹೊರಟಾಗ ಬಸ್ಸಿನಲ್ಲಿ ಈ ವಾರ/ಮಾಸ ಪತ್ರಿಕೆಗಳನ್ನು ಓದುವವರನ್ನು ಕಾಣಬಹುದಿತ್ತು. ಮನೆಯಲ್ಲಿ ಈಗ ಓದುಗರ ಸಂಖ್ಯೆ ಕಡಿಮೆಯಾಗಿ ಟಿ.ವಿಯಲ್ಲಿ ಧಾರವಾಹಿಗಳ ನೋಡುಗರ ಸಂಖ್ಯೆ ಜಾಸ್ತಿ, ಈಗ ಅದೇ ಮಹಿಳೆಯರು, ಪುರುಷರು, ಹುಡುಗ, ಹುಡುಗಿಯರು ಮೊಬೈಲ್ ನಲ್ಲಿ ಎಫ್.ಎಂ ರೆಡಿಯೋಗಳಲ್ಲಿ ಹಾಡು ಕೇಳುವುದು ಜಾಸ್ತಿ ಯಾಗಿ ಇದೆಲ್ಲಾ ಮರೆಯಾಗಿದೆ
No comments:
Post a Comment