Monday 24 September 2012

ಹಿಂದಿಯ ಬಲವಂತದ ಮಾಘಸ್ನಾನ: ಭಾಗ-೧


ಈಗ ಫೇಸ್ ಬುಕ್ ಮತ್ತು ದಿನಪತ್ರಿಕೆಗಳಲ್ಲಿ ಹಿಂದಿ ದಿವಸ್, ಹಿಂದಿ ಸಪ್ತಾಹ, ಹಿಂದಿ ಮಾಸವನ್ನು ಪ್ರತಿ ವರ್ಷವೂ ಕೆಂದ್ರ ಸರ್ಕಾರ ಆಚರಿಸುವ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿ, ಕೂಡಲೇ ಇಂತಹ ಹಿಂದಿ ಪ್ರಚಾರವನ್ನು ನಿಲ್ಲಿಸಲು ಆಗ್ರಹಿಸಿದ್ದಾರೆ. ಒಂದು ಅಭಿಯಾನವನ್ನು ರಚಿಸಿ ಅದರಲ್ಲಿ ಸಾರ್ವಜನಿಕರ ಸಹಿಯನ್ನು ಆಹ್ವಾನಿಸಿ ಅದನ್ನು ರಾಜ್ಯಪಾಲರಿಗೆ ಮತ್ತು ರಾಷ್ಟಪತಿಯವರಿಗೆ ಕಳುಹಿಸಿಕೊಡಲು ಕೋರಿದ್ದಾರೆ. ಬಲವಂತದ ಹಿಂದಿ ಹೇರಿಕೆ ಇಲ್ಲಿ ಬೇಡ ಎಂದು ಕೆಂದ್ರಕ್ಕೆ ಮನವರಿಕೆ ಮಾಡಿಕೊಡಲು ಕನ್ನಡಿಗರನ್ನು ಅಹ್ವಾನಿಸಿದ್ದಾರೆ.  ಈ ತರಹದ ಅಹವಾಲನ್ನು ರಾಷ್ಟಪತಿಯವರಿಗೆ, ರಾಜ್ಯಪಾಲರಿಗೆ ಅನೇಕ ಬಾರಿ ಈಗಾಗಲೇ ಕೊಡಲಾಗಿದೆ. ಆದರೆ ಅದರಿಂದ ಏನೂ ಪ್ರಯೋಜನವಾಗಿಲ್ಲ ಅಷ್ಟೇ.

ಇದು ಹೊಸದೇನಲ್ಲ, ದಶಕಗಳಿಂದಲೂ ಹಿಂದಿ ಪ್ರಚಾರ ಸಮಿತಿ ಸೆಪ್ಟಂಬರ್ ತಿಂಗಳಿನಲ್ಲಿ ಇಂತಹದೊಂದು ಹಿಂದಿ ಮಾಸ, ಹಿಂದಿ ದಿವಸ್ ಹಿಂದಿ ಸಪ್ತಾಹವನ್ನು ಆಚರಿಕೊಂಡು ಬರುತ್ತಾಲೇ ಇದ್ದಾರೆ. ಇದಕ್ಕಾಗಿ ಕೇಂದ್ರದ ಸಹಾಯ ಮತ್ತು ಹಣಕಾಸಿನ ವ್ಯವಸ್ಥೆ ಸಹ ಇದೆ. ಕೆಂದ್ರ ಸರ್ಕಾರದ ಕಛೇರಿಗಳಲ್ಲಿ ಹಿಂದಿಯನ್ನು ಕಲಿಸಲು ಮತ್ತು ಅದನ್ನು ಎಲ್ಲಾ ಕಡೆ ಬೆಳೆಸಲು ಕೆಂದ್ರ ಸರ್ಕಾರದ ಒಂದು ಸಚಿವಾಲಯವೇ ಇದೆ. ಇದು ಎಲ್ಲಾ ರಾಜ್ಯಗಳಲ್ಲಿ ಹಿಂದಿಯನ್ನು ಪ್ರಚಾರ ಮಾಡಲು ಮತ್ತು ಅದನ್ನು ಎಲ್ಲಾ ಕಡೆ ಬೆಳೆಸಲು ಸರ್ವ ಪ್ರಯತ್ನವನ್ನು ಮಾಡುತ್ತಲೇ ಇರುತ್ತದೆ.

ಸಾರ್ವಜನಿಕರಿಗೆ ಹಿಂದಿ ಭಾರತದ ರಾಷ್ಟ ಭಾಷೆ ಎಂದು ಸಾರಲು ಮತ್ತು ಅದನ್ನು ಅವರುಗಳು ನಂಬಲು ಎಲ್ಲಾ ಪ್ರಯತ್ನಗಳು ಜರುಗತ್ತಲೇ ಇದೆ. ಇದು ನಮಗೆ ಸ್ವಾತಂತ್ರ್ಯ ಬಂದ ದಿನದಿಂದಲೂ ಕಾಣಬಹುದು. ನಮ್ಮ ಸಂವಿಧಾನ ಭಾರತದ ಎಲ್ಲಾ ೨೨ ಪ್ರಮುಖ ಭಾಷೆಗಳನ್ನು ಮಾನ್ಯ ಮಾಡಿ, ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮೊದಲುಗೊಂಡು ಎಲ್ಲಾ ಭಾಷೆಗಳು ರಾಷ್ಟ ಭಾಷೆಗಳೇ. ಆದರೆ ನಮ್ಮ ಜನರಿಗೆ ಇದು ಸರಿಯಾಗಿ ಮನವರಿಕೆಯಾಗದ ಕಾರಣ ಅನೇಕ ವಿದ್ಯಾವಂತರೂ ಸಹ ನಮ್ಮ ರಾಷ್ಟ ಬಾಷೆ ಹಿಂದಿಯೊಂದೆ ಎಂದು ತಿಳಿದಿದ್ದಾರೆ. (ಮಿಕ್ಕಿದ್ದು ನಾಳೆಗೆ)

No comments:

Post a Comment