Saturday 29 September 2012

ಆರ್.ಕೆ ನಾರಾಯಣ್: ಭಾಗ-೨


ಕಳೆದ ಸಂಚಿಕೆಯಿಂದ

ಹಂ.ಪ.ನಾಗರಾಜ್ಯ ನವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಅವರನ್ನು ಸನ್ಮಾನಿಸಿ, ಅವರಿಗೆ ಮೈಸೂರಿನ ಪೇಟ ಹಾಕಿ ಸಂಭ್ರಮಿಸಿದ್ದನ್ನು ಅಂದು ಹೇಳಿ ಒಂದು ವಿಷಯವನ್ನು ಪ್ರಸ್ತಾಪಿಸಿದರು. ಆರ್.ಕೆ ಯವರಿಗೆ ನೀವು ಸಮಾರಂಭವನ್ನು ಉದ್ದೇಶಿಸಿ ಕನ್ನಡದಲ್ಲಿ ಮಾತನಾಡಬೇಕೆಂದು ಭಿನ್ನವಿಸಿಕೊಂಡಾಗ ಅವರು ಹೇಳಿದರಂತೆ “ನಾ ತಮಿಳ್ಲೆ ಪೇಸರೆ” ಅಂತ.  ಆಗ ಅಲ್ಲೇ ಇದ್ದ ಮಾಸ್ತಿಯವರು “ತಮಿಳು ಬೇಡ, ನೀವು ಆಂಗ್ಲ ಭಾಷೆಯಲ್ಲೇ ಮಾತಾಡಿ” ಅಂತ. ಒಬ್ಬ ವ್ಯಕ್ತಿ ಮೈಸೂರಿನಲ್ಲಿ ಸುಮಾರು ೬೦-೭೦ ವರ್ಷ ಇದ್ದು ಕನ್ನಡದಲ್ಲಿ ಮಾತನಾಡಲೂ ಸಹ ಇಚ್ಚೆ ಪಡದಿದ್ದಾಗ ಅವರನ್ನು ನಾವು ಕನ್ನಡಿಗರೆಂದು ಪರಿಗಣಿಸುವುದು ಎಷ್ಟು ಸರಿ? ಅವರಿಗಾಗಿ ಸ್ಮಾರಕ ನಿರ್ಮಿಸುವುದು ಎಷ್ಟು ಸರಿ? ಎಂಬ ಒಂದು ಸಣ್ಣ ಪ್ರಶ್ನೆ ಕೆಲವು ಸಾಹಿತಿಗಳದ್ದು. ಅದು ತಪ್ಪಾ?

ಆರ್.ಕೆ ಯವರಿಗೆ ಕನ್ನಡ ಬರುತ್ತಿರಲಿಲ್ಲವೇ? ಬಂದರೂ ಮಾತನಾಡುತ್ತಿರಲಿಲ್ಲವೇ? ಅಥವಾ ೬೦-೭೦ ವರ್ಷ ಮೈಸೂರಿನಲ್ಲಿ ನೆಲಸಿ, ಮಹಾರಾಜಾ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿಯೂ ಸಹ ಕನ್ನಡ ಬರುತ್ತಿರಲಿಲ್ಲ ಎಂದರೆ ಆಶ್ಚರ್ಯವಾಗುತ್ತದೆ.

ಮಾಸ್ತಿ, ಗೊರೂರು, ನಿಸಾರ್ ಅಹಮದ್, ಡಿ.ವಿ.ಜಿ, ಟಿ.ಪಿ.ಕೈಲಾಸಂ, ಗಿರೀಶ್ ಕಾರ್ನಾಡ್ ಹೀಗೆ ಅನೇಕ ಕವಿಗಳು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಈ ಎಲ್ಲಾ ಕವಿಗಳ ಮಾತೃಭಾಷೆ ಬೇರೆಬೇರೆಯಾಗಿದ್ದರೂ, ಕನ್ನಡಕ್ಕೆ ಅವರ ಕೊಡುಗೆ ಅಸಮಾನ್ಯವಾದದ್ದು. ಇವರೆಲ್ಲರನ್ನೂ ನಾವು ಅಭಿನಂದಿಸುವುದಿಲ್ಲವೇ? ಇವರೆಲ್ಲರನ್ನೂ ನಾವು ಕನ್ನಡಿಗರೆಂದು ಪರಿಗಣಿಸಿಲ್ಲವೇ? ಕರ್ನಾಟಕದಲ್ಲಿ ಹುಟ್ಟಿದವರೂ ಮತ್ತು ಇಲ್ಲಿ ಸುಮಾರು ೧೦ ವರ್ಷ ಬೇರೆ ರಾಜ್ಯದಿಂದ ಬಂದು ನೆಲೆಸಿದವರು ಕನ್ನಡಿಗರು ನಿಜ. ಆದರೆ ಯಾವ ಭಾಷೆಯವರಾದರೂ ಮತ್ತು ಅವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಸರಿಯೆ, ಇಲ್ಲಿ ನೆಲೆಸಿದ ಮೇಲೆ ಇಲ್ಲಿಯ ಭಾಷೆ/ಸಂಸ್ಕೃತಿಯ ಬಗ್ಗೆ ಕೇವಲವಾಗಿ ನಡೆದುಕೊಂಡರೆ ಅವರನ್ನು ಕನ್ನಡಿಗರೆಂದು ಒಪ್ಪಿಕೊಳ್ಳಲು ಮನಸ್ಸಿಗೆ ಬಹಳ ಹಿಂಸೆ ಎಂದೆನಿಸುತ್ತದೆ. (ಮಿಕ್ಕಿದ್ದು ನಾಳೆಗೆ)

No comments:

Post a Comment