Friday 28 September 2012

ಆರ್.ಕೆ ನಾರಾಯಣ್: ಭಾಗ-೧


ಆರ್.ಕೆ.ನಾರಾಯಣ್ ಅವರ ಮನೆಯನ್ನು ಸ್ಮಾರಕವನ್ನಾಗಿ ನಿರ್ಮಿಸಲು ಸರ್ಕಾರ ಹೊರಟಿದೆ. ಇದರ ಬಗ್ಗೆ ಸಾರಸ್ವತ ಲೋಕದಲ್ಲಿ, ಸಾರ್ವಜನಿಕರಿಂದ ಅನೇಕ ರೀತಿಯ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಆರ್.ಕೆ ನಾರಾಯಣ್ ಅವರು ಸುಮಾರು ೬೦-೭೦ ವರ್ಷಗಳು ಮೈಸೂರಿನಲ್ಲಿ ನೆಲೆಸಿದ್ದವರು. ಸಾಹಿತಿಗಳು ಯಾವ ಭಾಷೆಯಲ್ಲಾದರೂ ಬರೆಯಬಹುದು, ಅದು ಅವರ ಹಕ್ಕು, ಅದನ್ನು ಯಾರೂ ಕೇಳುವುದಕ್ಕಾಗುವುದಿಲ್ಲ. ನಮ್ಮ ಸಂವಿಧಾನ ಯಾರು ೧೦ ವರ್ಷಗಳು ಒಂದು ರಾಜ್ಯ ಅಥವಾ ದೇಶದಲ್ಲಿ ವಾಸವಾಗಿದ್ದರೆ ಅವರನ್ನು ಆ ರಾಜ್ಯದ/ದೇಶದ ಪ್ರಜೆಗಳೆಂದು ಮಾನ್ಯ ಮಾಡುತ್ತದೆ. ಹಾಗಾಗಿ ಅವರು ಕನ್ನಡಿಗರು, ಅವರ ಸ್ಮಾರಕವನ್ನು ನಿರ್ಮಿಸುವುದು ತಪ್ಪೇನಿಲ್ಲ. ಸಾಹಿತಿಗಳನ್ನು, ಕಲಾವಿದರನ್ನು ಒಂದು ಭಾಷೆಗೆ ಸೀಮಿತಗೊಳಿಸುವುದು ಏಷ್ಟು ಸರಿ? ಎಂಬ ಅಭಿಪ್ರಾಯವನ್ನು ಕೆಲವು ಸಾಹಿತಿಗಳು/ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ಖಂಡಿತಾ ಅದರಲ್ಲಿ ಯಾವುದೇ ತಪ್ಪಿಲ್ಲ. ಅವರು ಹೇಳುತ್ತಿರುವುದು ೧೦೦% ಸತ್ಯ. ಇದರ ಬಗ್ಗೆ ದಿನಪತ್ರಿಕೆ/ಟಿ.ವಿಯಲ್ಲಿ ಚರ್ಚೆಗಳಾಗುತ್ತಿದೆ.

ಇತ್ತೀಚೆಗೆ ಟಿ.ವಿ.೯ ನಲ್ಲಿ ಸಾಹಿತಿಗಳಾದ ಹಂ.ಪ.ನಾಗರಾಜಯ್ಯ, ಸಾ.ಶಿ.ಮರುಳಯ್ಯ, ಚಂದ್ರಶೇಕರ ಪಾಟೀಲ್ ಮತ್ತು ಔಟ್ ಲುಕ್ ಸಂಪಾದಕರು ಭಾವಹಿಸಿದ್ದ ಒಂದು ಕಾರ್ಯಕ್ರಮ ಬಹಳ ಚೆನ್ನಾಗಿತ್ತು. ಹೆಚ್ಚಿನ ಸಾಹಿತಿಗಳು ಸ್ಮಾರಕಕ್ಕೆ ವಿರೋಧಿಸುತ್ತಿಲ್ಲ. ಆದರೆ ಅವರ ಪ್ರಶ್ನೆ ಬಹಳ ಗಂಭೀರವಾದುದು. ಆರ್.ಕೆ ನಾರಾಯಣ್ ಅವರು ತಮ್ಮ ಎಲ್ಲಾ ಬರಹಗಳನ್ನು ಆಂಗ್ಲಭಾಷೆಯಲ್ಲಿ ಬರೆದು ಜಗತ್ಪ್ರಸಿದ್ದರಾದವರು. ಅವರು ಕನ್ನಡಿಗರು, ನಮ್ಮಲ್ಲಿ ನೆಲೆಸಿದ್ದರು ಎಂಬುದು ನಮಗೆ ಅತ್ಯಂತ ಹೆಮ್ಮೆ ಮತ್ತು ಗೌರವದ ವಿಷಯ. ಶಂಕರ್ ನಾಗ್ ಅವರು ಮಾಲ್ಗುಡಿ ಡೇಸ್ ಕಾದಂಬರಿಯನ್ನು ಟಿ.ವಿಯಲ್ಲಿ ಧಾರಾವಾಹಿಯಾಗಿ ತಂದಮೇಲೆ ಅವರು ಕನ್ನಡನಾಡಿನ ಸರ್ವರಿಗೂ ಪರಿಚಿತರಾದರೆಂದರೆ ಅದು ಅತಿಶಯೋಕ್ತಿ ಏನಲ್ಲ. ಅವರು ದೊಡ್ಡ ಸಾಹಿತಿಗಳಾಗಿದ್ದರೂ ಸಹ ಅವರು ಸಾರಸ್ವತ ಲೋಕದಲ್ಲಿ ಪ್ರಸಿದ್ದರಾಗಿದ್ದರೂ ಸಹ ಸಾಮಾನ್ಯ ಕನ್ನಡಿಗರಿಗೆ ಅವರು ಅಷ್ಟಾಗಿ ಪರಿಚಿತರಾದವರಲ್ಲ. ಅದಕ್ಕೆ ಅನೇಕ ಕಾರಣಗಳಿರಬಹುದು. ಅವರು ಕನ್ನಡ ಸಾಹಿತಿಗಳೊಂದಿಗೆ ಅಷ್ಟಾಗಿ ಬೆರೆಯುತ್ತಿರಲಿಲ್ಲ, ಸಭೆ, ಸಮಾರಂಭಗಳಲ್ಲಿ ಭಾಗವಹಿಸುವುದು ಅಪರೂಪ, ಅವರದು ಬಹಳ ಸಂಕೋಚ ಸ್ವಭಾವ ಹೀಗೆ ಅನೇಕರು ಹೇಳುತ್ತಾರೆ. (ಮಿಕ್ಕಿದ್ದು ನಾಳೆಗೆ)

No comments:

Post a Comment