Tuesday 27 November 2012

ವಿದೇಶಿ ನೇರ ಬಂಡವಾಳ: ಭಾಗ-೪


ಕಳೆದ ಸಂಚಿಕೆಯಿಂದ

ಕೇಂದ್ರ ಸರ್ಕಾರಕ್ಕೆ ಮಸೂದೆ ಜಾರಿ ಗೊಳಿಸುವುದು ಅತ್ಯಂತ ಅವಶ್ಯಕವಾಗಿ ಕಾಣುತ್ತಿದೆ. ಈಗಿರುವ ಕೇಂದ್ರ ಸರ್ಕಾರ ವಿದೇಶಿ ಬಂಡವಾಳವನ್ನು ಬೇಡವೆನ್ನುವ ಹಾಗಿಲ್ಲ. ಈಗ ನಾವು ಜಾಗತೀಕರಣದ ಹೊಸಲಿನಲ್ಲಿದ್ದೇವೆ. ಆಗಿನ ಪ್ರಧಾನಿಯಾಗಿದ್ದ ನರಸಿಂಹರಾವ್ ಮತ್ತು ಆಗಿನ ಹಣಕಾಸು ಸಚಿವರಾಗಿದ್ದಂತಹ ಮನಮೋಹನ್ ಸಿಂಗ್ ಜಾಗತೀಕರಣಕ್ಕೆ ಭಾರತವನ್ನು ತೆರೆದುಕೊಂಡಿರುವ ವಿಷಯ ಭಾರತೀಯರಿಗೆ ತಿಳಿದೇ ಇದೆ. ಜಾಗತೀಕರಣದಿಂದ ಭಾರತಕ್ಕೆ ಅನೇಕ ಪ್ರಯೋಜನಗಳಾಗಿರುವುದೂ ಸತ್ಯ. ವಿಶ್ವದ ಎಲ್ಲಾ ದೇಶಗಳೂ ಜಾಗತೀಕರಣಕ್ಕೆ ತಮ್ಮನ್ನು ಒಗ್ಗಿಸಿಕೊಂಡಿವೆ, ಭಾರತವೂ ಅದಕ್ಕೆ ಹೊರತಲ್ಲ. ವಿದೇಶಿ ಸಂಸ್ಥೆಗಳು ನಮ್ಮ ದೇಶದಲ್ಲಿ ಬಂದವಾಳ ತಂದು ವ್ಯಾಪಾರ ಮಾಡುವ ಹಾಗೆಯೇ, ನಮ್ಮ ಭಾರತದ ವ್ಯಾಪಾರಿ ಸಂಸ್ಥೆಗಳು ಇತರೆ ದೇಶದಲ್ಲಿ ವ್ಯಾಪಾರ, ವಹಿವಾಟು ನಡೆಸುತ್ತಿವೆ. ಇಂದು ಯಾವ ದೇಶವೂ ವಿದೇಶಿ ಬಂಡವಾಳ ಬೇಡವೆನ್ನುವ ಹಾಗಿಲ್ಲ. ಕೆಲವು ಉದ್ದಿಮೆಗಳಿಗೆ ಮಾತ್ರ ವಿದೇಶಿ ಬಂಡವಾಳ ಬೇಕು, ಮತ್ತೆ ಕೆಲವುಗಳಿಗೆ ಬೇಡ ಎನ್ನುವ ಹಾಗೂ ಇಲ್ಲದ ಪರಿಸ್ಥಿತಿ ನಮ್ಮದಾಗಿದೆ.

ಇದು ಎಲ್ಲಾ ರಾಜಕೀಯ ಪಕ್ಷಗಳಿಗೂ ಮತ್ತು ಎಲ್ಲಾ ರಾಜ್ಯ/ಕೇಂದ್ರ ಸರ್ಕಾರಕ್ಕೂ ತಿಳಿದ ವಿಷಯ. ಆದರೆ ಇದನ್ನು ಈಗ ವಿರೋಧಿಸುತ್ತಿರುವವರು ತಾವು ಆಡಳಿತ ನಡೆಸುತ್ತಿದ್ದಾಗ ಇದೇ ವಿದೇಶಿ ಬಂಡವಾಳವನ್ನು ಶೇಕಡ ೧೦೦ಕ್ಕೆ ಹೆಚ್ಚಿಸಲು ಪ್ರಯತ್ನಿಸಿದ್ದರು. ಇದೇ ಮಮತಾ ಬ್ಯಾನರ್ಜಿಯವರೂ ಸಹ ವಿದೇಶಿ ಬಂಡವಾಳ ತರುವ ಬಗ್ಗೆ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದರು. ಈಗ ಅವರು ವಿರೋದಿಸುತ್ತಿರುವ ಕಾರಣವೇ ಬೇರೆ. ನಮ್ಮ ದೇಶದ ದುರಂತವೆಂದರೆ ವಿರೋಧ ಪಕ್ಷವಾಗಲೀ ಅಥವಾ ಆಡಳಿತ ಪಕ್ಷವೇ ಆಗಲಿ ನಮ್ಮ ದೇಶಕ್ಕ ಬೇಕಾದ ಅಭಿವೃದ್ದಿ ಕೆಲಸಗಳಿಗೆ ತಮಗೆ ತೋಚಿದ ರೀತಿಯಲ್ಲಿ ಮತ್ತು ತಮಗೆ ಅನುಕೂಲವಾದ ರೀತಿಯಲ್ಲಿ ಒಪ್ಪುವುದು ಅಥವಾ ವಿರೋಧಿಸುವುದು. ಇದರಿಂದ ದೇಶಕ್ಕೆ ಮತ್ತು ದೇಶದ ಜನರಿಗೆ ಉಪಯೋಗವಾಗಲೀ ಬಿಡಲಿ ತಮಗೆ ಉಪಯೋಗವಾದರೆ, ಅನುಕೂಲವಾದರೆ ಸಾಕು ಎಂಬುದು. ಇದು ನಮ್ಮ ದೇಶದ ಮತ್ತು ಜನರ ದುರ್ದೈವ. (ಮಿಕ್ಕಿದ್ದು ನಾಳೆಗೆ)

No comments:

Post a Comment