Wednesday 28 November 2012

ವಿದೇಶಿ ನೇರ ಬಂಡವಾಳ: ಭಾಗ-೫


ಕಳೆದ ಸಂಚಿಕೆಯಿಂದ

ನಾಗರಿಕರಿಗೆ ವಿದೇಶಿ ನೇರ ಬಂಡವಾಳದಿಂದ ಏನು ಪ್ರಯೋಜನ ಎಂದು ನೋಡತೊಡಗಿದರೆ, ನಾಗರಿಕರಿಗೆ ಒಳ್ಳೊಳ್ಳೆಯ ಅಂತರರಾಷ್ಟೀಯ ಗುಣ ಮಟ್ಟದ ವಸ್ತುಗಳು ಇಲ್ಲೇ ಸುಲಭದಲ್ಲಿ ಸಿಗಬಹುದು. ಅದನ್ನು ಹುಡುಕಿಕೊಂಡು ಹೊರ ದೇಶಕ್ಕೆ ಹೋಗುವ ಅವಶ್ಯಕತೆ ಕಂಡುಬರುವುದಿಲ್ಲ. ಎಲ್ಲಾ ವಸ್ತುಗಳು ಒಂದೇ ಸೂರಿನಡಿ ಸಿಗುತ್ತದೆ, ಅದೂ ಕಡಿಮೆ ದರದಲ್ಲಿ. ಜನರಿಗೆ ಹೊಸ ಉದ್ಯೋಗಾವಕಾಶಗಳು ಸಿಗುತ್ತದೆ, ಆಕರ್ಷಕ ವೇತನದೊಂದಿಗೆ. ನಮ್ಮ ಶೇರು ಮಾರುಕಟ್ಟೆಗೆ ಒಳಿತಾಗಬಹುದು. ರಿಲಯನ್ಸ್, ಟಾಟ, ಬಿರ್ಲ್ಲಾದಂತಹ ಕಂಪನಿಗಳಿಗೆ ವಿದೇಶಿ ಜೊತೆಗಾರರು ಸಿಗಬಹುದು. ಹೆಚ್ಚಾಗಿ ಹಣವಂತರಿಗೆ ಮತ್ತು ದೊಡ್ಡ ಉದ್ದಿಮೆದಾರರಿಗೆ ಇದರಿಂದ ಲಾಭವೇ ಹೆಚ್ಚು.  ನೋಡುವುದಕ್ಕೆ ಮಾತು ಕೇಳುವುದಕ್ಕೆ ಇಷ್ಟೆಲ್ಲಾ ಚೆನ್ನಾಗಿರುವಾಗ, ಇದನ್ನು ವಿರೋಧಿಸುವ ಅವಶ್ಯಕತೆ ಕಂಡುಬರುವುದಿಲ್ಲವೆಂಬ ಭಾವನೆ ಮೊದಲ ನೋಟಕ್ಕೆ ಕಂಡು ಬರುವುದು.

ಆದರೆ ಇದು ನಮ್ಮ ದೇಶಕ್ಕೆ ಸರಿಬರುವುದಿಲ್ಲ ಎಂಬುದು ಕೆಲವರ ಚಿಂತನೆ. ವಿಮಾನ, ದೂರ ಸಂಪರ್ಕ, ವಿಜ್ಞಾನ, ವಿಮಾ, ವಿದ್ಯುತ್, ಕ್ಷೇತ್ರಕ್ಕೆ ವಿದೇಶಿ ಬಂಡವಾಳ ಒಂದು ಅರ್ಥದಲ್ಲಿ ಸರಿಎನ್ನಬಹುದು. ಆದರೆ ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ವಿದೇಶಿ ಬಂಡವಾಳ ಬಂದರೆ ಅದು ಮೇಲ್ನೋಟಕ್ಕೆ ಮತ್ತು ಮೊದಮೊದಲಿಗೆ ಎಲ್ಲವೂ ಚೆನ್ನಾಗಿದೆ ಎಂದು ಕಂಡುಬಂದರೂ, ನಂತರ ಸ್ವಲ್ಪ ಸಮಯದ ನಂತರ ಇದರ ಪರಿಣಾಮ ಸಾಮಾನ್ಯ ನಾಗರೀಕರಿಗೆ, ಚಿಲ್ಲರೆ ವ್ಯಾಪಾರಿಗಳಿಗೆ ಮತ್ತು ರೈತರಿಗೆ ಘೋರ ಪರಿಣಾಮವುಂಟಾಗುವುದೆಂಬ ಅತಂಕ ಎದ್ದು ಕಾಣುತ್ತದೆ.  

ಮೊದಲಿಗೆ ಚಿಲ್ಲರೆ ವ್ಯಾಪಾರಿಗಳಿಗೆ ಬಹಳ ನಷ್ಟವುಂಟಾಗಿ ಅವರು ತಮ್ಮ ಅಂಗಡಿ ಮುಂಗಟ್ಟುಗಳನ್ನು ನಡೆಸಲಾಗದೆ ಮುಚ್ಚಬೇಕಾಗಬಹುದು. ನಮ್ಮ ದೇಶದಲ್ಲಿ ಸುಮಾರು ೫ ಕೋಟಿ ಚಿಲ್ಲರೆ ಅಂಗಡಿಗಳಿವೆ ಎಂದು ಗಣನೆಗೆ ತೆಗೆದುಕೊಂಡರೂ ಮತ್ತು ಅವರ ಸಂಸಾರದಲ್ಲಿ ಸುಮಾರು ೫ ಜನ ಅವಲಂಬಿತರಿದ್ದರೆ ೨೫ ಕೋಟಿ ಜನರ ಬಾಳು ನರಕವಾಗುತ್ತದೆ. ಅವರು ಹೇಳುವ ಪ್ರಕಾರ ೧ ಕೋಟಿ ಹೊಸ ಉದ್ಯೋಗ ಸೃಷ್ಟಿಯಾದರೆ, ೫ ಕೋಟಿ ಜನ ತಮ್ಮ ಕೆಲಸ ಕಳೆದುಕೊಳ್ಳುವರು ಮತ್ತು ಅವರ ಅವಲಂಬಿತರು ಪ್ರತ್ಯೇಕ. (ಮಿಕ್ಕಿದ್ದು ನಾಳೆಗೆ)

No comments:

Post a Comment